[19/03, 12:35 PM] Suma Suma. Mys: ವಾದಿರಾಜರು (ಕ್ರಿ. ಶ. 1480-1600)ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರು. ಇವರು ವ್ಯಾಸರಾಜರು ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕ ಬದ್ದವಾದದ್ದು. ಇವರ ವಾಗ್ವೈ ಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣ ದೇವರಾಯನು ಇವರಿಗೆ "ಪ್ರಸಂಗಾಭರಣ ತೀರ್ಥ "ಎಂಬ ಬಿರುದನ್ನೂ ನಿಡಿ ಗೌರವಿಸಿದರು. ಶ್ರೀ ಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿ ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು. ಅಷ್ಠ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ದತಿಯನ್ನು ಪ್ರಾರಂಭಿಸಿದರು.
ಜೀವನ :- ಉಡುಪಿ ಜಿಲ್ಲೆಯ "ಹೂವಿನಕೆರೆ '',, ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ.
ಅವರ ಇಷ್ಟ ದೈವ ಶ್ರೀ ಹರಿ ಅವರಿಗೆ ಹಯವದನ ಅಥವಾ ಕುದುರೆಯ ರೂಪದಲ್ಲಿ ದರ್ಶನ ಕೊಟ್ಟನಂತೆ. ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ "ಸನ್ಯಾಸ "ಜೀವನದ ಅವಧಿ 112ವರ್ಷಗಳು. ಉತ್ತರ ಕನ್ನಡ ಶಿರಸಿ ತಾಲ್ಲೂಕಿನ ಸೋಂದಾ ಕ್ಷೇತ್ರದಲ್ಲಿ ಮಠ ಮತ್ತು ಇವರ ಬೃಂದಾವನವಿದೆ.
ಸಾಹಿತ್ಯ ಕೃತಿಗಳು :-ಕನ್ನಡದಲ್ಲಿ ಹಯವದನ ಎಂಬ ಅಂಕಿತ ನಾಮದಲ್ಲಿ ಅನೇಕ ದೇವರನಾಮಗಳು. ಕೀರ್ತನೆಗಳು, ಸುಳಾದಿಗಳು, ಉಗಾ ಭೋಗಗಳು, ವೃತ್ತನಾಮಗಳನ್ನೂ ರಚಿಸಿದ್ದಾರೆ. ಶಾಸ್ತ್ರೀಯ ಯುಕ್ತಿಗಳಲ್ಲಿ ಸಾಹಿತ್ಯ ಮುದ್ರಯಿಂದ ಮನಸ್ಸಿಗೆ ನೆಡುವಂತೆ ಸರಳವಾದ ಪ್ರೌಢ ಕನ್ನಡ ನುಡಿಯಲ್ಲಿ ಮುಖ್ಯ ಪ್ರಮೇಯವಾದ ಭಕ್ತಿಇಂದ ಶ್ರೀ ಹರಿಯನ್ನು ಒಲಿಸಿ ಮುಕ್ತಿಯನ್ನು ಪಡೆಯಬೇಕೆಂಬುದನ್ನು ಸಿದ್ಧಾಂತಿಸಿದ್ದಾರೆ.
1)ವೈಕುಂಠ ವರ್ಣನೆ -ಸಾಂಗತ್ಯ.
2)ಸ್ವಪ್ನ ಗದ್ಯ -ಭಾಮಿನಿ ಷಟ್ಪದಿ.
3)ಲಕ್ಷ್ಮಿ ಶೋಭಾನೆ -ಹಾಡು.
4)ಕೀಚಕವಧ.
5)ಕೇಶವನಾಮ.
6)ಗುಂಡಕ್ರಿಯೆ.
7)ಭಾರತತಾತ್ಪರ್ಯ ನಿರ್ಣಯ ಟೀಕೆ -ಟೀಕೆ (ಲಕ್ಷಾಭರಣಿ ).
ಕಾವ್ಯಗಳೇ ಅಗಲೀ, ಕೀರ್ತನೆಗಳೇ ಅಗಲೀ. ಅವುಗಳ ತಿರುಳು ಒಂದೇ -ದ್ವೈತ ವೇದಾಂತ ತತ್ವಗಳ ನಿರೂಪಣೆ ಇವರ ಕನ್ನಡ ಸಾಹಿತ್ಯ ಬಹು ಮಟ್ಟಿಗೆ ಶಾಸ್ತ್ರೀಯವಾದುದಾಗಿದೆ.ವಾದಿರಾಜರು ರಚಿಸಿರುವ ಲಕ್ಷ್ಮಿ ಶೋಭನಾ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮಧು ಮಕ್ಕಳಿಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ.ಲಕ್ಷ್ಮಿ ಶೋಭಾನದಲ್ಲಿ ಬರುವ ಈ ಚರಣ ಅದಕ್ಕೆ ಕಾರಣ ವಾಗಬಹುದು -"ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮಧು ಮಕ್ಕಳಿಗೆ ಮುದವಹುದು ವಧುಗಳಿಗೆ ಓಲೆ ಭಾಗ್ಯ ದಿನ ದಿನಕ್ಕೆ ಹೆಚ್ಚುವದು ಮದನನಯ್ಯನ ಕೃಪೆ ಇಂದ ",,
1)ತಾಳುವಿಕೆಗಿಂತ ತಪವು ಇಲ್ಲ. ||ಪ ||
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ||ಅ. ಪ ||
2)ಹಣವೇ ನಿನ್ನಯ ಗುಣವೇನು ಬಣ್ಣಿಪೆನೋ ||ಪ ||
ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ||ಅ. ಪ ||
3)ಮಂಡೆ ಬೋಳಾದರೇನು ಮನಸ್ಸು ಶುದ್ದಿ ಇಲ್ಲದವಗೆ ||ಪ ||ಕಂಡು ಹಯವದನ ನನ್ನ ಒಲಿಸಿ ಕೊಂಡು ಧ್ಯಾನ ||ಅ. ಪ ||
4)ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿ ||ಪ ||
ಇಳೆಯೊಳಗತಿ ಜಾಣಿ ಸುಂದರ ಫಣಿ ವೇಣಿ ||ಅ. ಪ ||
[19/03, 12:35 PM] Suma Suma. Mys: ವಾದಿರಾಜರ ಮಹಿಮೆ ಕೊಂಡಾಡುವ ಸುದಿನ
Post a Comment