ವಿಮೋಚನಿ ಏಕಾದಶಿ ಕುರಿತಾದ ಹಿನ್ನೆಲೆ ಕಥೆ ಓದಿ ತಿಳಿಯಿರಿ... ಶ್ರೀ ಲಲಿತಾ ದೇವಿ ವಿವರ

[28/03, 8:20 AM] Pandit Venkatesh. Astrologer. Kannada: ಸೋಮವಾರ ಪಾಪ ವಿಮೋಚನಿ ಏಕಾದಶಿ ಕುರಿತಾದ ಹಿನ್ನೆಲೆ ಕಥೆ ಓದಿ ತಿಳಿಯಿರಿ.
🌼🌼🌼🌼🌼🌼🌼🌼🌼🌼🌼🌼🌼🌼🌼

ಭವಿಷ್ಯೋತ್ತರ ಪುರಾಣದಲ್ಲಿ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಪಾಪವಿಮೋಚಿನಿ ಏಕಾದಶಿ ಮಹಿಮೆಯನ್ನು ವಿವರಿಸಿದನೆಂದು ಹೇಳಲಾಗಿದೆ. ಹಿಂದೆ ಮೇಧಾವಿ ಎಂಬೊಬ್ಬ ಋಷಿಯು ಚೈತ್ರರಥವೆಂಬ ಒಂದು ಸುಂದರ ಅರಣ್ಯದಲ್ಲಿ ತಪೋನಿರತನಾಗಿದ್ದನು. ಚೈತ್ರರಥ ಅರಣ್ಯವು ಸದಾ ಪುಷ್ಪಗಳಿಂದ ಕಂಗೊಳಿಸುವ ಅನೇಕ ವೃಕ್ಷರಾಶಿಗಳಿಂದ ನಿಬಿಡವಾಗಿದ್ದು ಸುಮನೋಹರವಾಗಿತ್ತು. 

ಅದರ ಪರಿಶುದ್ಧ ವಾತಾವರಣ ಮತ್ತು ನಯನಮನೋಹರವಾದ ಸ್ಥಳಗಳನ್ನು ಸಂದರ್ಶಿಸಲು ಸ್ವರ್ಗಾಧಿಪತಿ ಇಂದ್ರ, ಗಂಧರ್ವಾಪ್ಸರು ಸೇರಿದಂತೆ ಅನೇಕ ದೇವದೇವತೆಗಳು ಆಗಾಗ್ಗೆ ಧರೆಗಿಳಿದು ಬರುತ್ತಿದ್ದರು.

 ಅವರಲ್ಲೊಬ್ಬಳಾದ ಮಂಜುಘೋಶ ಎಂಬ ಸುಂದರಳಾಗಿದ್ದ ಅಪ್ಸರಸ್ಥ್ರೀಯು ಮೇಧಾವಿ ಋಷಿಯನ್ನು ಕಂಡು ಮೋಹಿತಳಾಗುತ್ತಾಳೆ.

ಆದರೆ, ಮೇಧಾವಿ ಋಷಿಯನ್ನು ಆಕೆ ಮಾಡಿದ ಪ್ರಯತ್ನಗಳೆಲ್ಲವೂ ನಿರರ್ಥಕವಾದುವು. ಹೀಗಿರುವಾಗ ಮಂಜುಘೋಷಳು ಒಮ್ಮೆ ಅತ್ಯಂತ ಶುಶ್ರಾಯವಾಗಿ ಹಾಡಲಾರಂಭಿಸುತ್ತಾಳೆ. ಆಕೆಯ ಹಾಡುಗಾರಿಕೆಯಿಂದ ಕಾಮದೇವನೂ ವಿಚಲಿತನಾಗುತ್ತಾನೆ. ಮಂಜುಘೋಷಳ ಪ್ರೇರೇಪಣೆಯಂತೆ, ಕಾಮದೇವನು ಮೇಧಾವಿ ಋಷಿಯ ಮನಸ್ಸನ್ನು ವಿಕಲ್ಪಗೊಳಿಸುತ್ತಾನೆ.

ಅಲ್ಲಿಯೇ ಸುಳಿದಾಡುತ್ತಿದ್ದ ಮಂಜುಘೋಷಳ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಅವರೀರ್ವರು ಅನೇಕ ವರ್ಷಗಳ ಕಾಲ ಸಂಸಾರ ಮಾಡಿದರು. ಏತನ್ಮಧ್ಯೆ ಮಂಜುಘೋಷಳಿಗೆ ಮೇಧಾವಿಯೊಂದಿಗಿನ ಜೀವನ ಬೇಸರ ತಂದಿತ್ತು. 

ಸ್ವರ್ಗಲೋಕಕ್ಕೆ ಹಿಂದಿರುಗಲು ಆಕೆ ಮೇಧಾವಿಯ ಅಪ್ಪಣೆಯನ್ನು ಕೇಳಿದಾಗ, ಆತನಿಗೆ ತನ್ನ ತಪ್ಪಿನ ಅರಿವುಂಟಾಯಿತು. ಮಂಜುಘೋಷಳು ತನ್ನ ತಪಸ್ಸನ್ನು ಭಗ್ನಗೊಳಿಸಿದಳೆಂದು ಆಕೆಯ ಮೇಲೆ ಕೋಪಗೊಂಡವನಾಗಿ ಆಕೆಗೆ ಶಾಪವನ್ನು ನೀಡಿ ತನ್ನ ತಂದೆ ಚ್ಯವನಮಹರ್ಷಿಯ ಆಶ್ರಮಕ್ಕೆ ಹೋಗುತ್ತಾನೆ. 

ಚ್ಯವನ ಮಹರ್ಷಿಗಳು ಆತನ ಮನೋವೇದನೆಯನ್ನು ಗುರುತಿಸಿ ಫಾಲ್ಗುಣ ಕೃಷ್ಣ ಪಕ್ಷದಲ್ಲಿ ಬರುವ ಪಾಪವಿಮೋಚಿನಿ ಏಕಾದಶಿಯಂದು ಉಪವಾಸ ವ್ರತವನ್ನು ಕೈಗೊಳ್ಳಲು ಹೇಳುತ್ತಾನೆ. 

ಅಂತೆಯೇ, ಮೇಧಾವಿಯು ಪಾಪವಿಮೋಚಿನಿ ಏಕಾದಶಿ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿ, ಮಹಾವಿಷ್ಣುವನ್ನು ಭಕ್ತಿಯಿಂದ ಪೂಜಿಸುತ್ತಾನೆ. ಆತನ ಆಚರಣೆಯಿಂದ ಸುಪ್ರೀತನಾದ ವಿಷ್ಣುವು ಮೇಧಾವಿಯ ಪಾಪಗಳನ್ನು ನಾಶಮಾಡುತ್ತಾನೆ. ಅಂದಿನಿಂದ ಪಾಪವಿಮೋಚಿನಿ ಏಕಾದಶಿಯಂದು ಯಾರು ಉಪವಾಸ ಮಾಡುವರೋ ಅವರ ಪಾಪಗಳು ನಾಶವಾಗುತ್ತವೆಯೆಂದು ನಂಬಲಾಗಿದೆ.  

ನಾಳೆ  ಪಾಪ ವಿಮೋಚನ ಏಕಾದಶಿ ಪ್ರಯುಕ್ತ ಈ ಪೋಸ್ಟ್
ಭಾವಾರ್ಥ ಸಹಿತ ಓದಿ ಶುಭಮಸ್ತು

ನಾರಾಯಣ ಸ್ತೋತ್ರ

ಪ್ರಸ್ತಾವನೆ:

ಆದಿ ಶಂಕರಾಚಾರ್ಯರು ರಚಿಸಿರುವ ನಾರಾಯಣ ಸ್ತುತಿಗಳಲ್ಲಿ ಈ ಸ್ತೋತ್ರವು ಅತ್ಯಂತ ಮಧುರ ಹಾಗೂ ಸುಲಲಿತವಾದದ್ದು. ಈ ಸ್ತೋತ್ರವನ್ನು ಮೊದಲು ಅದರ ಅಮ್ತರಾರ್ಥವನ್ನು ಅರಿತು  ಪ್ರತಿದಿನವೂ ಮುಂಜಾನೆ ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ಉಂಟಾಗಿ ಎಲ್ಲ ದುಷ್ಟ ಶಕ್ತಿಗಳು ದುಉರಾಗುವುದು ಹಾಗೂ ಆರೋಗ್ಯ ಮತ್ತು ಅಭ್ಯುದಯವು ದೊರಕುವುದು. 

ಶ್ಲೋಕ - 1 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರಿ
ನಾರಾಯಣ ನಾರಾಯಣ ಜಯ ಗೋಪಾಲ ಹರಿ

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ

ಶ್ಲೋಕ - 2 -  ಸಂಸ್ಕೃತದಲ್ಲಿ :

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ
ಕನ್ನಡದಲ್ಲಿ :

ಕರುಣೆಯ ಕಡಲು ಸಾಗರದೊಲು ಗಂಭೀರ ನಾರಾಯಣ
ಘನನೀರದ ಶ್ಯಾಮನೆ ಕಲಿಕಲುಷ ವಿನಾಶನ ನಾರಾಯಣ

ವಿವರಣೆ :

ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !

ಶ್ಲೋಕ - 3 -  ಸಂಸ್ಕೃತದಲ್ಲಿ :

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ
ಕನ್ನಡದಲ್ಲಿ :

ಯಮುನಾತೀರ ವಿಹಾರಿ ಕೌಸ್ತುಭಮಣಿಶೋಭಿತ ನಾರಾಯಣ
ಪೀತಾಂಬರಧಾರಿ ಸುರಕಲ್ಯಾಣನಿಧಿಯೆ ನಾರಾಯಣ

ವಿವರಣೆ :

ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ !
ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !

ಶ್ಲೋಕ - 4 -  ಸಂಸ್ಕೃತದಲ್ಲಿ :

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ
ಕನ್ನಡದಲ್ಲಿ :

ಮಂಜುಳ ಗುಂಜೀಹಾರ ವಿಭೂಷಿತ ಮಾಯಾ ಮಾನುಷವೇಷ ನಾರಾಯಣ
ರಾಧೆಯಧರ ಮಧುರಾಮೃತರಸಿಕ ಯದುವರ ನಾರಾಯಣ

ವಿವರಣೆ :

ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ ! ಓ ! ನಾರಾಯಣನೇ !

ಶ್ಲೋಕ - 5 -  ಸಂಸ್ಕೃತದಲ್ಲಿ :

ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ
ಕನ್ನಡದಲ್ಲಿ :

ವೇಣುಗಾನ ವಿನೋದಿ ವೇದನುತಪಾದ ನಾರಾಯಣ
ನವಿಲಗರಿ ಧರಿಸಿದ ಘನಫಣಿಶಿರ ನರ್ತಕ ನಾರಾಯಣ

ವಿವರಣೆ :

ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ ! ನಾರಾಯಣನೇ !

ಶ್ಲೋಕ - 6 -  ಸಂಸ್ಕೃತದಲ್ಲಿ :

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ
ಕನ್ನಡದಲ್ಲಿ :

ಜಲಜಾಭರಣ ಭೂಷಿತ ಜಲಧಿಸುತೆಯ ರಮಣ ನಾರಾಯಣ
ಜಲರುಹದಳದೊಲು ನಯನ ಜಗದುಗಮ ಸೂತ್ರ ನಾರಾಯಣ

ವಿವರಣೆ :

ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ ರುಕ್ಮಿಣಿಯ ರಮಣನೇ  ಓ, ದೇವ ! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !

ಶ್ಲೋಕ - 7 -  ಸಂಸ್ಕೃತದಲ್ಲಿ :

ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ
ಕನ್ನಡದಲ್ಲಿ :

ಪಾತಕರಜ ಸಂಹಾರಕ ಕರುಣಾಲಯ ಉದ್ಧರಿಸೆನ್ನನು ನಾರಾಯಣ
ಅಘ ಬಕಹಯ  ಕಂಸಾರಿಯೆ ಕೇಶವ ಕೃಷ್ಣಮುರಾರಿ ನಾರಾಯಣ

ವಿವರಣೆ :

ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ ಸೋದರಮಾವನಾದ ಕಂಸನು ಕಳುಹಿಸಿದ  ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !

ಶ್ಲೋಕ - 8 -  ಸಂಸ್ಕೃತದಲ್ಲಿ :

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ
ಕನ್ನಡದಲ್ಲಿ :

ಮಿಸುನಿಯೊಲಿಹ ಪೀತಾಂಬರಧರ ಅಭಯ ಕೊಡೆನಗೆ ಮಾರಮಣ ನಾರಾಯಣ
ದಶರಥ ರಾಜಕುಮಾರ ರಕ್ಕಸಮದಸಂಹಾರ ನಾರಾಯಣ

ವಿವರಣೆ :

ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು. ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ !

ಶ್ಲೋಕ - 9 -  ಸಂಸ್ಕೃತದಲ್ಲಿ :

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ
ಕನ್ನಡದಲ್ಲಿ :

ಗೋವರ್ಧನಗಿರಿ ಪ್ರಿಯಕರ ಗೋಪೀಮಾನಸ ಚೋರ ನಾರಾಯಣ
ಸರಯೂ ತೀರ ವಿಹಾರ ಸುಜನರ ಸುರತರು ನಾರಾಯಣ

ವಿವರಣೆ :

ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ!  ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !

ಶ್ಲೋಕ - 10 - ಸಂಸ್ಕೃತದಲ್ಲಿ :

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ
ಕನ್ನಡದಲ್ಲಿ :

ಯತಿವಿಶ್ವಾಮಿತ್ರ ಯಜ್ಞ ಸುರಕ್ಷಕ ವಿವಿಧ ಸುಚರಿತ್ರ ನಾರಾಯಣ
ಧ್ವಜ ವಜ್ರಾಂಕುಶಪಾದ ಧರಣಿಸುತೆಯೊಡನೆ ಮೋದ ನಾರಾಯಣ

ವಿವರಣೆ :

ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ ಉತ್ತಮ ಚರಿತ್ರೆಯುಳ್ಳ ನಾರಾಯಣನೇ !  ಪಾದಗಳಲ್ಲಿ ಧ್ವಜ ಹಾಗೂ ಧ್ವಜ ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ ಹೇ ದೇವನೇ ನಾರಾಯಣನೇ!

ಶ್ಲೋಕ - 11-  ಸಂಸ್ಕೃತದಲ್ಲಿ :

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ
ಕನ್ನಡದಲ್ಲಿ :

ಜನಕಸುತಾಲೋಲ ಜಯ ಜಯ ಸಂಸಾರಲೀಲ ನಾರಾಯಣ
ಜನಕವಚನಪಾಲಕ ವನದಂಡಕಸಂಚಾರಿ ನಾರಾಯಣ

ವಿವರಣೆ :

ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ ! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !

ಶ್ಲೋಕ - 12 -  ಸಂಸ್ಕೃತದಲ್ಲಿ :

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ
ಕನ್ನಡದಲ್ಲಿ :

ಮುಷ್ಟಿಕಚಾಣೂರರ ಮಣಿಸಿದ ಮುನಿಮನ ವಾಸಿ ನಾರಾಯಣ
ದುಷ್ಟ ವಾಲಿಯ ನಿಗ್ರಹಿಸಿ ವರ ಸುಗ್ರೀವಗನುಗ್ರಹಿಸಿದ ನಾರಾಯಣ

ವಿವರಣೆ :

ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ  ಓ ದೇವನೇ ! ನಾರಾಯಣನೇ !

ಶ್ಲೋಕ - 13 -  ಸಂಸ್ಕೃತದಲ್ಲಿ :

ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ
ಕನ್ನಡದಲ್ಲಿ :

ಕೊಳಲನು ಮಾಡೆನ್ನನು ಪಾಲಿಸು ಪಾಲಿಸು ಶ್ರೀಧರ ನಾರಾಯಣ
ಜಲಧಿನಿಬಂಧನ ಧೀರನೆ ದಶಶಿರಕಂಠವ ಸೀಳಿದ ನಾರಾಯಣ

ವಿವರಣೆ :

ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ ! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !

ಶ್ಲೋಕ - 14 -  ಸಂಸ್ಕೃತದಲ್ಲಿ :

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ
ಕನ್ನಡದಲ್ಲಿ :

ತಾಟಕಿಮರ್ದನ ರಾಮ ಸುರನಾಟ್ಯಗಾನಾರಾಮ ನಾರಾಯಣ
ಗೌತಮಸತಿ ಪೂಜಿತ ಕರುಣಾರಸ ಸೇಚನ ನಾರಾಯಣ

ವಿವರಣೆ :

ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ ! ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ ನಾರಾಯಣನೇ !

ಶ್ಲೋಕ - 15 -  ಸಂಸ್ಕೃತದಲ್ಲಿ

ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ
ಕನ್ನಡದಲ್ಲಿ :

ಜಾನಕೀಮನ ಚೋರ ಸಾಕೇತಪುರ ವಿಹಾರ ನಾರಾಯಣ
ಗೋವರ್ಧನಗಿರಿಧರ ಧೀರ ಭಕ್ತಾನುಗ್ರಹತತ್ಪರ ನಾರಾಯಣ

ವಿವರಣೆ :

ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ ! ನಾರಾಯಣನೇ !

ಶ್ಲೋಕ - 16 -  ಸಂಸ್ಕೃತದಲ್ಲಿ :

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ
ಕನ್ನಡದಲ್ಲಿ :

ಸಾಮಗಾನವಿನೋದ ರಾಕ್ಷಸಸುತ ಪ್ರಹ್ಲಾದವರದ ನಾರಾಯಣ
ವರಶಂಕರರುಲಿದ ಹರಿನಾಮಸುಧಾಸಾರ ಜಗಸಕಲಕಾಧಾರ ನಾರಾಯಣ

ವಿವರಣೆ :

ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ ! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.

ಶ್ಲೋಕ - 17 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ    
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !

 ▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
[28/03, 8:41 AM] Pandit Venkatesh. Astrologer. Kannada: *ಶ್ರೀ ಲಲಿತಾ ಪರಮೇಶ್ವರಿಯ ಕೈಯ್ಯಲ್ಲಿ ಕಬ್ಬಿನ ಜಲ್ಲೆ ಏಕೆ ಇರುತ್ತದೆ?*

🌺ದೇವಿಯ ವಾಮ ಹಸ್ತದಲ್ಲಿ ಹಿಡಿದುಕೊಂಡಿರುವ ಕಬ್ಬಿನ ಜಲ್ಲೆಯು ಮನುಷ್ಯನ ಮನಸಿನ ರೂಪವನ್ನು ಬಿಚ್ಚಿ 
ತೋರಿಸುತ್ತದೆ. ಕಬ್ಬಿನ ಜಲ್ಲೆಯಂತೆ ಮಾನವನ
ಮನಸು ಡೊಂಕು , ಸಂಕಲ್ಪ, ವಿಕಲ್ಪಗಳಿಂದ ಕೂಡಿರುತ್ತದೆ.

🌺ಕಬ್ಬಿನ ಜಲ್ಲೆಯ ಉದ್ದಕ್ಕೂ , ಅದರ ಒಂದೊಂದು ತುಂಡಿನ ಅಂಚು, ಅಂಚಿನಲ್ಲೂ  ಸಿಹಿಯಾದ ರಸ ತುಂಬಿಕೊಂಡಿರುತ್ತದೆ. ಮನುಷ್ಯನ ಮನಸು ಹಿಡಿ ಹಿಡಿ ಆಸೆಗಳಿಂದ, ಸಿಹಿ ಸಿಹಿ ಕಾಮನೆಗಳಿಂದ ತುಂಬಿ ಕೊಂಡಿರುತ್ತದೆ. ಕಬ್ಬಿಣ
ಇನ್ನೊಂದು ಗುಣವೆಂದರೆ ಜಲ್ಲೆಯ ಯಾವುದೊಂದು ಭಾಗವನ್ನು ಕತ್ತರಿಸಿ,
ನಟ್ಟರೂ ಅದು ಅಲ್ಲಿ ಸಸಿಯಾಗಿ , ಜಲ್ಲೆಯಾಗಿ ಬೆಳೆಯುತ್ತದೆ. ಹೀಗೆ ಒಂದು
ಕಾಮನೆ ಮತ್ತೊಂದನ್ನು ಹುಟ್ಟುಹಾಕುತ್ತದೆ.

🌺ದೇವಿ ಪರಮೇಶ್ವರಿಯು ಕಾಮಾಕ್ಷಿಯು, ಕಾಮೇಶ್ವರಿದು,
ಕಾಮೇಶ್ವರನ ಅರ್ದಾoಗಿಯೂ ಅವಳು ಕಾಮದಾ; ಎಂದರೆ ಕಾಮವನ್ನು ಕೊಡುವವಳು,
*'ಕಾಮನಾಂ ದೇಹಿ ಮೇ ನಿತ್ಯಂ | ಕಾಮೇಶ್ವರಿ ನಮೋಸ್ತುತೇ !'* ಎಂದು
ಭಕ್ತನು ತಾಯಿಯನ್ನು ಪ್ರಾರ್ಥಿಸುತ್ತಾನೆ. ಕಾಮನೆಗಳನ್ನು ಕೊಡುವವಳಾದ್ದರಿಂದ
ಕಾನನ ಕೈಯ್ಯಲ್ಲಿ ಏನಿದೆಯೋ ಅದೇ ಪುಷ್ಪ ಬಾಣವಿದೆ, ಮತ್ತು ಆ ಬಾಣಕ್ಕೆ ಕಬ್ಬಿನ ಜಲ್ಲೆಯೇ ಕೋದಂಡ. ಆದರೆ ಮನ್ಮಥನ ಪುಷ್ಪ ಬಾಣವು ಜನಮನದಲ್ಲಿ ಕೇವಲ ಕಾಮವನ್ನುಂಟು
ಮಾಡುತ್ತದೆ. ದೇವಿಯಾದರೋ ತನ್ನ ಭಕ್ತರಿಗೆ ಅನೇಕ ಆದರೆ ಒಳ್ಳೆಯ ಕಾಮನೆಗಳನ್ನು ಕೊಡುತ್ತಾಳೆ. ಹೀಗೆ ಭಕ್ತರ ಮನಸ್ಸಿನಲ್ಲಿ ಸಾತ್ವಿಕವಾದ, ಒಳ್ಳೆಯ ಕಾಮನೆಗಳನ್ನು ಕೊಡುವಳೆನ್ನುವುದಕ್ಕೆ ಅವಳು ಹಿಡಿದಿರುವ ಕಬ್ಬಿನ ಜಲ್ಲೆಯೇ
ಸಂಕೇತ ಖಚಿತಪಡಿಸದ ಒಂದು ಕತೆಯ ಪ್ರಕಾರ ದೇವಿಯು ಒಂದು ವನದಲ್ಲಿ
ಸಂಚರಿಸುತ್ತಿದ್ದಳೆಂದೂ, ನಿರಾಯುಧಳಾಗಿದ್ದ ಅವಳ ಮೇಲೆ ಒಮ್ಮೆಲೇ ಅನೇಕ
ರಾಕ್ಷಸರು ಒಗ್ಗೂಡಿ ನುಗ್ಗಿದರೆಂದು ಕಥಾಭಾಗ ತಿಳಿಸುತ್ತದೆ. ರಾಕ್ಷಸರೆಲ್ಲರೂ
ಏಕಾಕಿನಿಯಾದ, ನಿರಾಯುಧಳಾದ ತನ್ನ ಮೇಲೆ ಎರಗುವುದನ್ನು ಕಂಡು, ಆ
ಕಾಡಿನಲ್ಲಿ ಬೆಳೆಯುತ್ತಿದ್ದ ಕಬ್ಬಿನ ಜಲ್ಲೆಯೊಂದನ್ನು ಕಿತ್ತು ಅವರ ಮೇಲೆ ಎಸೆದು
ಒಂದೇ ಏಟಿಗೆ ಆ ರಾಕ್ಷಸರೆಲ್ಲನ್ನು ಕೊಂದು, ಪ್ರೀತಿಯಿಂದ ಆ ಕಬ್ಬಿನ ಜಲ್ಲೆಯನ್ನು
ತನ್ನ ಕೈಯ್ಯಲ್ಲಿರಿಸಿಕೊಂಡಳು.

🌺🙏🌺🙏🌺🙏🌺

ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011

Post a Comment

Previous Post Next Post