ಸರ್ವಧರ್ಮ ಸಂಸತ್ 2022 ಕಾರ್ಯಕ್ರಮ।। *ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ* *ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*

 ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ನಡೆಯುತ್ತಿರುವ
ಸರ್ವಧರ್ಮ ಸಂಸತ್ 2022  ಕಾರ್ಯಕ್ರಮವನ್ನು ಇಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರು ಉದ್ಘಾಟನೆ ಮಾಡಿದರು. 
ಕಾರ್ಯಕ್ರಮದಲ್ಲಿ ಸಚಿವ ವಿ. ಸೊಮಣ್ಣ, ಶಾಸಕ ರಾಜುಗೌಡ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ವಿ, ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೊಹನ್ ದಾಸ್,  ಇಸ್ರೋ ನಿವೃತ್ತ  ಅಧ್ಯಕ್ಷ ಡಾ.ಎಸ್ ಕಿರಣ್ ಕುಮಾರ್ , ಶ್ರೀ ಶ್ರೀ ಪಂಡಿತಾರಾಧ್ಯ  ಶಿವಾಚಾರ್ಯ ಸ್ವಾಮೀಜಿ, ಅವಧೂತ ಶ್ರೀ  ವಿನಯ್ ಗುರೂಜಿ, ಶ್ರೀ ಮೌಲಾನಾ ಅಬುಸೂಫಿಯಾನ್ ಮದನಿ, ಚಿಂತಕ ರಂಜಾನ್ ದರ್ಗಾ, ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು, ಬೆಂಗಳೂರು ಉತ್ತರ ವಿವಿಯ ಕುಲಸಚಿವರಾದ ಡಾಮಿನಿಕ್ ಡಿ, ಹಾಗೂ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಎಮ್ ಸುರೇಶ್ ಉಪಸ್ಥಿತರಿದ್ದರು.
[08/10, 12:14 PM] +91 99001 58601: ಬೆಂಗಳೂರು, ಅಕ್ಟೋಬರ್ 08 : *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು*  *ರಾಷ್ಟ್ರೀಯ ಬಸವ* ಪ್ರತಿಷ್ಠಾನ, ನಾಗರಬಾವಿ, ಬೆಂಗಳೂರು ಇವರ ವತಿಯಿಂದ *ವೈಟ್ ಪೆಟಲ್ಸ್, ಅರಮನೆ* ಮೈದಾನದಲ್ಲಿ ಆಯೋಜಿಸಿರುವ *ಸರ್ವಧರ್ಮ್ ಸಂಸತ್* *ಸಮ್ಮೇಳನದಲ್ಲಿ ಪಾಲ್ಗೊಂಡು* ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
[08 ಬೆಂಗಳೂರು ಅಕ್ಟೋಬರ್ *08..:ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ‌ ಅವರ* *ಅಧ್ಯಕ್ಷತೆಯಲ್ಲಿ  ನಡೆದ* *ಸಚಿವ* *ಸಂಪುಟ ಸಭೆಯ ನಂತರ* *ಕಾನೂನು ಮತ್ತು ಸಣ್ಣ ನೀರಾವರಿ* *ಸಚಿವರಾದ ಶ್ರೀ ಜೆ.ಸಿ.* *ಮಾಧುಸ್ವಾಮಿ ಅವರು*ವಿಶೇಷ *ಸಚಿವ ಸಂಪುಟದ ನಿರ್ಣಯಗಳ* ಕುರಿತು *ಪತ್ರಿಕಾ ಗೋಷ್ಠಿ* *ನಡೆಸಿದರು.*
[: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾದ 5 ಕೋಟಿ ರೂ.ಗಳ ಚೆಕ್ಕನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ವೀಕರಿಸಿದರು.
ಈ ಸಂದರ್ಭದಲ್ಲಿಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದ ಅಧ್ಯಕ್ಷ ಮಾಡಾಳ ವಿರುಪಾಕ್ಷಪ್ಪ,  ಶಾಸಕ ರೇಣುಕಾಚಾರ್ಯ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ, ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಸಾಹುಕಾರ, ನಿವೇದಿತಾ ರಾಜು, ಶಿವಕುಮಾರ ಹುಡೇದ ಮತ್ತಿತರರು ಹಾಜರಿದ್ದರು.
[08/10,  *ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ* *ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 08 :  ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 
ರಾಷ್ಟ್ರೀಯ ಬಸವ ಪ್ರತಿಷ್ಠಾನ ಇಂದು ಹಮ್ಮಿಕೊಂಡಿದ್ದ ಸರ್ವಧರ್ಮ ಸಂಸತ್ 2022 ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬದಲಾವಣೆ ತರಲು ಸಮಾನ ಅವಕಾಶಗಳನ್ನು ನೀಡಿದಾಗ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರು ಮೇಲೆ ಬರುತ್ತಾರೆ. ಆ ಅವಕಾಶವೇ ಇಲ್ಲದಿದ್ದರೆ, ತುಳಿತಕ್ಕೆ ಒಳಪಟ್ಟರೆ, ತಲೆಮಾರುಗಳು ಕಷ್ಟಪಡುವಂತಾದರೆ ಎಂದಿಗೂ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.  

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡುವ ಅವಕಾಶ ಹಾಗೂ ಸಂಕಲ್ಪವನ್ನು ಎಲ್ಲಾ ಹಿರಿಯರು ಆಶೀರ್ವಾದ ಮಾಡಿ ಕೊಟ್ಟಿದ್ದಾರೆ ಎಂದು ಭಾವಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. 

ನಮ್ಮೆಲ್ಲರ ಪ್ರಯತ್ನ ಮನುಷ್ಯನಿಂದ ಮಾನವನೆಡೆಗೆ ಹೋಗುವತ್ತ ಇರಬೇಕು. ಧರ್ಮ ಮನುಷ್ಯನನ್ನು ಮಾನವನೆಡೆಗೆ ಕೊಂಡೊಯ್ಯುವ ವಾಹನ. ಇದನ್ನು ನಾವು ಅರ್ಥಮಾಡಿಕೊಂಡಾಗ ನಮ್ಮ ನಾಡು, ದೇಶ ಹಾಗೂ ಜಗತ್ತು ಅತ್ಯಂತ ಪ್ರೀತಿ, ವಿಶ್ವಾಸದಿಂದ ಕೂಡಿರುತ್ತದೆ. ನಮ್ಮ ದೇಶಕ್ಕೆ ಚಾರಿತ್ರ್ಯದ  ಅಗತ್ಯವಿದೆ. ದೇಶದ ಸಂಸ್ಕೃತಿ, ಪರಂಪರೆ ಮತ್ತು ಪ್ರತಿ ನಾಗರಿಕನ ಚರಿತ್ರೆಯ ಮೇಲೆ ದೇಶ ತನ್ನ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳುತ್ತದೆ ಎಂದರು. 

*ಸಮಾನತೆ ತರುವ ಕಾಲ ಕೂಡಿ ಬಂದಿದೆ*
ಎಲ್ಲರಿಗೂ ಸಮಾನ ಅವಕಾಶ, ಗೌರವ, ಮತ್ತು ಕಾಯಕ ನಿಷ್ಠೆಯ ಬದುಕನ್ನು ಬಸವಣ್ಣ ಸಾರಿದ್ದಾರೆ. ಧರ್ಮದಲ್ಲಿ ಸಮಾನತೆ ಮಾತ್ರವಲ್ಲ, ಲಿಂಗ ಬೇಧ ಮರೆತು ಅಲ್ಲಿಯೂ ಸಮಾನತೆ ತರುವ ಅಗತ್ಯವಿದೆ.  ಕೌಟುಂಬಿಕ ಸಮಾನತೆಯಿಂದ ಹಿಡಿದು ಮಾನವಕುಲಕ್ಕೆ ಸಮಾನತೆ ತರಬೇಕಿದೆ. ವೃತ್ತಿ ಗೌರವದ ಜೊತೆಗೆ ಮೇಲು ಕೀಳು ಇಲ್ಲದಿರುವುದು ಅಗತ್ಯ. ಜ್ಞಾನಕ್ಕೆ ಜಾತಿ, ಧರ್ಮ ಇಲ್ಲ.  ಕಾಯಕ ಸಮುದಾಯಗಳು ತುಳಿತಕ್ಕೆ ಒಳಗಾದ ಸಂದರ್ಭದಲ್ಲಿ ಬಸವಣ್ಣ ಕೈಗೊಂಡ ವೈಚಾರಿಕ ಕ್ರಾಂತಿ, ಸಾಮಾಜಿಕ ಕ್ರಾಂತಿಯಾಗಿ ಬದಲಾಯಿತು. ತನ್ನನ್ನು ತಾನೇ ಇದಕ್ಕೆ ಅರ್ಪಿಸಿಕೊಳ್ಳುವ ಪ್ರಸಂಗ ಬಂದರೂ ಹಿಂದೆ ಮುಂದೆ ನೋಡಲಿಲ್ಲ. ಸಮಾಜದಲ್ಲಿ ಮತ್ತೊಮ್ಮೆ ಸಂಘರ್ಷ ದೂರ ಮಾಡಿ  ಸಮಾನತೆ ತರುವ ಕಾಲ ಕೂಡಿ ಬಂದಿದೆ ಎಂದರು. 

*ಶಿಫಾರಸ್ಸುಗಳ ಅನುಷ್ಠಾನ*
ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದ ಸಮಿತಿ ಶಿಫಾರಸ್ಸುಗಳನ್ನು ಒಪ್ಪಿ ಇಂದು ಅನುಮೋದನೆ ನೀಡುತ್ತಿದ್ದೇವೆ.  ವರದಿಯಲ್ಲಿರುವ  ಶಿಫಾರಸ್ಸುಗಳು ಇಂದಿನ ಸಭೆಗೆ ಪೂಜ್ಯರ ವಿಚಾರಗಳಿಗೆ ಸೂಕ್ತವಾಗಿವೆ. ನಿರ್ಣಯ ತೆಗೆದುಕೊಂಡ 24 ಗಂಟೆಗಳಲ್ಲಿ ನಾಗಮೋಹನ್ ದಾಸ್ ಅವರನ್ನು  ಭೇಟಿಯಾದಾಗ ನಾನು ಭಾವುಕನಾದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 


*ದೊಡ್ಡ ನಗರಗಳಲ್ಲಿ   ಸರ್ವ ಧರ್ಮ ಸಮ್ಮೇಳನಗಳ ಅಗತ್ಯವಿದೆ*
ಸಮ್ಮೇಳನಗಳಿಗೆ ಬಂದಾಗ ಒಂದು ಅಂಶವಾದರೂ ಒಳ್ಳೆಯದು ಪಡೆಯಬೇಕು. ಆಗ  ಸಾರ್ಥಕತೆ ಬರುತ್ತದೆ. ಬಸವ ಪ್ರತಿಷ್ಠಾನ ಉತ್ತಮ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ.  ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ   ಸಮ್ಮೇಳನಗಳ ಅಗತ್ಯವಿದೆ ಎಂದರು.  ಮನುಷ್ಯರ ನಡುವೆ ಸಂಬಂಧಗಳು ಕಡಿಮೆ ಯಾಗುತ್ತಿರುವ ನಗರಗಳಲ್ಲಿ ಇದರ ಅವಶ್ಯಕತೆ  ಬಹಳ ಇದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು. 

*ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ*
ಹುಟ್ಟುವಾಗ ನಮಗೆ ಯಾವುದೇ ಧರ್ಮ ಇರುವುದಿಲ್ಲ.  ಜಗತ್ತನ್ನು ಬಿಟ್ಟು ಹೋಗುವಾಗಲೂ ಯಾವುದೇ ಧರ್ಮ ಇರುವುದಿಲ್ಲ. ಆದರೆ ಬದುಕಿನಲ್ಲಿ ನಾವು ಹಲವಾರು ಧರ್ಮಕ್ಕೆ ಸೇರುತ್ತೇವೆ. ನಂತರ ಜಾತಿ, ಉಪಜಾತಿ, ಪಂಗಡಕ್ಕೆ ಸೇರುತ್ತೇವೆ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆ ಯಾಗಿ ನಾವು ಮನುಜರು ಕಾಲಕಾಲಕ್ಕೆ ಮಾಡಿಕೊಂಡಿರುವ  ವ್ಯವಸ್ಥೆ. ಇದು ಸರಿ ತಪ್ಪು ಅನ್ನುವುದಕ್ಕಿಂತ ವ್ಯವಸ್ಥೆ ಅವಶ್ಯಕತೆ ಮತ್ತು ಅದರ ವ್ಯಾಪ್ತಿ ಎಷ್ಟಿರಬೇಕೆನ್ನುವುದು ಬಹಳ ಮುಖ್ಯ.  ಮನುಷ್ಯ ಸಾಮಾಜಿಕ ಜೀವಿ. ಗುಂಪು, ನಗರಗಳಲ್ಲಿ ಬದುಕುತ್ತಾನೆ.   ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ. ಯಾವ ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆಯೋ ಅದು ಧರ್ಮವೇ ಅಲ್ಲ ಎಂದರು. 

*ಕಾಯಕದಿಂದ ಸಮಾನತೆ*
ಬಸವಣ್ಣನವರು ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಬಹಳ ಸುಲಭವಾಗಿ ಪರಿಹಾರ ನೀಡಿದ್ದಾರೆ.  'ದಯವಿಲ್ಲದ ಧರ್ಮ ಅದಾವುದಯ್ಯ' ಎಂದು ಒಂದೇ ವಾಕ್ಯದಲ್ಲಿ ತಿಳಿಸಿದ್ದಾರೆ.  ನಮ್ಮ  ಅಸ್ತಿತ್ವವನ್ನು ಶುದ್ಧವಾಗಿಟ್ಟುಕೊಳ್ಳುವ ವಿಧಾನವನ್ನು ಕಳಬೇಡ, ಕೊಳಬೇಡ, ಹುಸಿಯ ನುಡಿಯಲು ಬೇಡ ಎಂದು ಸರಳವಾಗಿ ತಿಳಿಸಿದ್ದಾರೆ. ಕಾಯಕವೇ ಕೈಲಾಸ ಎಂದು ಬದುಕುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ. ಅವನ್ನು ಅರಿತು,ಅನುಕರಿಸಿ, ಅಳವಡಿಸಿಕೊಳ್ಳಬೇಕಿದೆ. 

ಪೂಜೆಗಿಂತ ಕಾಯಕ ದೊಡ್ಡದು ಎಂದ ಬಸವಣ್ಣ ಸ್ವಾವಲಂಬಿ ಹಾಗೂ ಜೀವನವನ್ನು ಕಾಯಕದಿಂದ  ಕಟ್ಟಿಕೊಳ್ಳಲು ಸಾಧ್ಯ. ಅಂಥ ಕಡೆ ಸಮಾನತೆ ಇರುತ್ತದೆ. ಸಮಾನತೆಯಿದ್ದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

*ಸಮ್ಮೇಳನದ ನಿರ್ಣಯಗಳು ಪ್ರಕಟ ವಾಗಲಿ*
ಸಮ್ಮೇಳನದಲ್ಲಿ ಆಗುವ ನಿರ್ಣಯಗಳನ್ನು ಮುದ್ರಿಸಿ ಹಂಚುವ ಕೆಲಸವಾಗಬೇಕು. ಇದು ಜಗತ್ತಿಗೆ ತಿಳಿಯಬೇಕು. ಸಮ್ಮೇಳನದ ಜೀವಾಳ ಮುಂದುವರಿಯಬೇಕು. ಮುಂದಿನ ವರ್ಷದೊಳಗೆ ಪ್ರಗತಿ ಕಾಣವಂತಾಗಬೇಕು ಎಂದರು.
[08/10, 3:03 PM] +91 99001 58601: ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಎಸ್ಸಿ ಎಸ್ಟಿ ಸಮುದಾಯದ ವಿವಿಧ ಮಠಾಧೀಶರು ಗೃಹ ಕಚೇರಿ ಕೃಷ್ಣಾದಲ್ಲಿ ಅಭಿನಂದನೆ ಸಲ್ಲಿಸಿದರು‌.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಸಿಹಿ ತಿನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ , ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಬಿ‌ ಶ್ರೀರಾಮುಲು , ಆನಂದ ಸಿಂಗ್, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಮತ್ತಿತರರು ಹಾಜರಿದ್ದರು.
[08/10, 4:04 PM] +91 99001 58601: ಬೆಂಗಳೂರು ಅಕ್ಟೋಬರ್ 08:  *ಎಸ್ಸಿ* *ಎಸ್ಟಿ ಸಮುದಾಯಕ್ಕೆ* *ಮೀಸಲಾತಿ ಪ್ರಮಾಣವನ್ನು ಹೆಚ್ಚಳ* ಮಾಡಿರುವ ಹಿನ್ನೆಲೆಯಲ್ಲಿ *ಮುಖ್ಯಮಂತ್ರಿಗಳಿಗೆ  ಎಸ್ಸಿ ಎಸ್ಟಿ* ಸಮುದಾಯದ ವಿವಿಧ ಮಠಾಧೀಶರು *ಗೃಹ ಕಚೇರಿ* *ಕೃಷ್ಣಾದಲ್ಲಿ ಅಭಿನಂದನೆ ಸಲ್ಲಿಸಿದ* *ಸಂದರ್ಭದಲ್ಲಿಮಾನ್ಯ*  *ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ ಅವರು* ಮಾತನಾಡಿದರು.
[08/10, 5:57 PM] +91 99001 58601: *ಅವಕಾಶ ವಂಚಿತ ಎಸ್ಸಿ ಎಸ್ಟಿ ಸಮುದಾಯಕ್ಕೆ ಒಳ ಮೀಸಲಾತಿ  ಕಲ್ಪಿಸಲು ನ್ಯಾ. ಸದಾಶಿವ ಆಯೋಗದ ವರದಿ ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

*ಅಲೆಮಾರಿ ಸಮುದಾಯಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಿಗಮ ರಚಿಸಲು ತೀರ್ಮಾನ : ಬಸವರಾಜ ಬೊಮ್ಮಾ ಯಿ*

ಬೆಂಗಳೂರು, ಅಕ್ಟೋಬರ್ 08: ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 
ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು,  ಇವರಿಗೆ ನ್ಯಾಯ ಒದಗಿಸಲು  ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ  ಬಗ್ಗೆ ಅಧ್ಯಯನ ಮಾಡಿರುವ   ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಅದಕ್ಕೂ ಮುನ್ನ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ  ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 
ಇನ್ನು ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ ಎಂದರು. 

*ಮೀಸಲಾತಿ ಹೆಚ್ಚಳದ ನಿರ್ಧಾರ:*
ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಪರಿಶಿಷ್ಟ ಜಾತಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಹೆಚ್ಚಿಸಬೇಕೆನ್ನುವ ವಿಚಾರವನ್ನು ಒಪ್ಪಿ ಅದಕ್ಕೆ ಆದೇಶ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ ಎಂದರು.   

ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9 ಕ್ಕೆ ಸೇರಿಸಲು ವಿಧಿವಿಧಾನಗಳನ್ನು ಕಾನೂನು ಸಚಿವರು, ಕಾನೂನು ಆಯೋಗ ಮತ್ತು ಸಂವಿಧಾನದ ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನ ಮಾಡುವ ತೀರ್ಮಾನ ಮಾಡಿದೆ ಎಂದರು. 

ಒಟ್ಟು ಮೀಸಲಾತಿಯ  ಪ್ರಮಾಣ ಶೇ 50  ರಷ್ಟು  ದಾಟಿದ್ದು ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರವಿರುವ ಪರಿಶಿಷ್ಟ ಪಂಗಡಗಳ ವಿಶೇಷ  ಪ್ರಕರಣವನ್ನಾಗಿ ಪರಿಗಣಿಸಿ ಅದಕ್ಕೆ ಮೀಸಲಾತಿ ನೀಡಬಹುದುದೆಂದು ಹೇಳಲಾಗಿದೆ ಎಂದರು. 

*ವಿಶೇಷ ಪ್ರಕರಣ*
ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ನ್ಯಾ.ಸುಭಾಷ್ ಅಡಿ ಅವರು ಇದು ಯಾಕೆ ವಿಶೇಷ ಪ್ರಕರಣವಾಗುತ್ತದೆ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ.  ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಹಾಗೂ ಸಾಮಾಜಿಕವಾಗಿ ಅಂಕಿಅಂಶಗಳ ಸಮೇತವಾಗಿ ಇವೆಲ್ಲವೂ ಮುಖ್ಯ ವಾಹಿನಿಯಿಂದ  ದೂರವಿದ್ದು, ಸಾಕಷ್ಟು ಪ್ರಾತಿನಿಧ್ಯ ಇಷ್ಟು ವರ್ಷಗಳಾದರೂ ದೊರೆತಿಲ್ಲ. ಹಾಗಾಗಿ ಇದು ವಿಶೇಷ ಪ್ರಕರಣ ವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ ಎಂದು ವಿವರಿಸಿದರು. 

*ಪರಿಚ್ಛೇದ 9 ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರ್ಕಾರದ ಕ್ರಮ*
ಬುಡಕಟ್ಟು ಜನಾಂಗ ಹಾಗೂ ಪರಿಶಿಷ್ಟ ಜಾತಿಗಳ ಮೀಸಲಾತಿ  ಮಧ್ಯಪ್ರದೇಶ, ಛತ್ತೀಸ್ ಗಡ್, ಜಾರ್ಖಂಡ್, ರಾಜಸ್ಥಾನ, ತಮಿಳುನಾಡು ರಾಜ್ಯಗಳಲ್ಲಿ ಶೇ 50 ನ್ನು ಮೀರಿದೆ.   ಯಾವುದೇ ನ್ಯಾಯಾಲಯದ ಆದೇಶ ಇದರ ವಿರುದ್ಧ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಕ್ಕೆ ತಿದ್ದುಪಡಿ ತಂದು ಶೇ 50 ಕ್ಕಿಂತ ಹೆಚ್ವು ಮೀಸಲಾತಿ ನೀಡಿ ಆದೇಶವನ್ನು ನೀಡಿದೆ.  ಇವೆರಡನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.  ಯಾವುದೇ ವ್ಯತಿರಿಕ್ತ ತೀರ್ಪು ಇದುವರೆಗೆ ಬಂದಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಅದಕ್ಕೆ ಪರಿಚ್ಛೇದ 9 ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿರುವ ಮೀಸಲಾತಿಯ ಹೆಚ್ಚಳವನ್ನು ರಕ್ಷಣೆ ಮಾಡಬೇಕು.  ಈ ಹಿನ್ನೆಲೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಈಗಾಗಲೇ ಚರ್ಚೆಯಾಗಿದೆ. ಇನ್ನಷ್ಟು ಚರ್ಚಿಸಿ ಎಲ್ಲಾ ವಿವರಗಳೊಂದಿಗೆ ಗೆಜೆಟ್ ಅಧಿಸೂಚನೆ ಹಾಗೂ ಪರಿಚ್ಛೇದ 9 ರಲ್ಲಿ  ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದರು. 

ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು ಇದಕ್ಕೆ ನ್ಯಾಯ ಒದಗಿಸಲು ತಜ್ಞರ ಸಮಿತಿ ರಚಿಸಿ, ಕೂಲಂಕಷವಾಗಿ ಪರಿಶೀಲಿಸಿ  ಯಾರಿಗೆ ಒಳಮೀಸಲಾತಿ ಅಗತ್ಯ ವಿದೆ ಎಂಬ ಬಗ್ಗೆ  ಚರ್ಚಿಸಲಾಗುವುದು.  

*ಸಮಗ್ರ ಹಾಗೂ  ಸಮರ್ಥನೀಯ ವರದಿ*
ಗೆಜೆಟ್ ಅಧಿಸೂಚನೆ ವಿಸ್ತೃತವಾಗಿ ಇರಲಿದೆ. ಇದುವರೆಗೆ ಶೇ 50ರೊಳಗೇ ಇದ್ದರೂ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಗಮೋಹನ್ ದಾಸ ವರದಿ ಸಮಗ್ರವಾಗಿದೆ ಹಾಗೂ  ಸಮರ್ಥನೀಯವಾಗಿದೆ. ವಿಶೇಷ ಪ್ರಕರಣ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಗಟ್ಟಿಯಾದ ನೆಲೆಗಟ್ಟಿದೆ. ಇಂದಿರಾ ಸಹಾನಿ ಪ್ರಕರಣದ ಬೆಂಬಲವಿದೆ. ಹಿಂದಿನ ಪ್ರಕರಣಗಳನ್ನು ಗಮನಿಸಿ ಈ ಸಮುದಾಯಗಳಿಗೆ ತಕ್ಷಣದ  ಸೌಲಭ್ಯ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಚ್ಛೇದ 9 ಕ್ಕೆ ಸೇರಿಸಲು ತನ್ನದೇ ವಿಧಾನಗಳಿವೆ. ಸಂವಿಧಾನದ ತಿದ್ದುಪಡಿ ಯಾಗಬೇಕು. ಸಮಯವೂ ಬೇಕು ಎಂದರು. 

ಪಂಚಾಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ವರದಿ ಬಂದಾಗ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Post a Comment

Previous Post Next Post