ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶಿವಮೊಗ್ಗದಲ್ಲಿ ,, BJP ವಿರುದ್ಧ ಕಿಡಿ, ಕಿಡಿ ಗಳು

[29/10, 12:53 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಶನಿವಾರ ನೀಡಿದ ಪ್ರತಿಕ್ರಿಯೆ...
[29/10, 4:07 PM] Kpcc official: ಪೋಲಿಸ್ ವರ್ಗಾವಣೆ ದಂಧೆಯ ಕರಾಳ ಮುಖವಾಡವನ್ನು ಸ್ವತಃ ಸಚಿವ ಎಂ.ಟಿ.ಬಿ ನಾಗರಾಜ್ ಒಪ್ಪಿಕೊಳ್ಳುವ ಮೂಲಕ ಬಯಲು ಮಾಡಿದ್ದಾರೆ. 

ಒಂದು ಪೋಲಿಸ್ ಇನ್ಸ್ಪೆಕ್ಟರ್ ಪೋಸ್ಟಿಂಗ್ ಗೆ 70-80 ಲಕ್ಷ!

ಇಂತಹ ಭ್ರಷ್ಟಾಚಾರದಿಂದ ಇನ್ನೆಷ್ಟು ಅಮಾಯಕರ ಬಲಿ ಪಡೆಯಬೇಕೋ ಈ #40PercentSarkara 

ಇದನ್ನು ತನಿಖೆ ಮಾಡಲು ತಾಕತ್ ಧಮ್ ಇದೆಯೇ #PayCM ಅವರೇ?
[29/10, 4:07 PM] Kpcc official: ಪಿಎಸ್‌ಐ ಅಕ್ರಮ ನಡೆದಾಗ,
ಬೋರ್ ವೆಲ್ ಅಕ್ರಮ ನಡೆದಾಗ,
ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ,
ಗಂಗಾ ಕಲ್ಯಾಣ ಹಗರಣ ನಡೆದಾಗ,

ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು @BJP4Karnataka,

ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಇದೂ ಬಯಲಾಗಲಿದೆ.
ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ.
[29/10, 4:33 PM] Kpcc official: ಸಚಿವ MTB ನಾಗರಾಜ್ ಅವರು #40PercentSarkara ದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ.

ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳನ್ನು ನಡೆದಿರುವುದು ಸ್ಪಷ್ಟಪಡಿಸಿದ್ದಾರೆ.

#PayCM ಎಂದಾಕ್ಷಣ ಉರಿದು ಬೀಳುವ @BSBommai ಅವರೇ, ಪೋಸ್ಟಿಂಗ್ ಪಡೆಯಲು 70, 80 ಲಕ್ಷ ನೀಡಿದ್ದು ಯಾರಿಗೆ? ಯಾರು ಈ ಡೀಲಿಂಗ್ ಮಾಡುವುದು?
#SayCM
[29/10, 5:08 PM] Kpcc official: *ಶಿವಮೊಗ್ಗದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ನೀಡಿದ ಪ್ರತಿಕ್ರಿಯೆ:*

ಭಾರತ ಜೋಡೋ ಯಾತ್ರೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ನಮ್ಮ ರಾಜ್ಯದಲ್ಲಿನ ಯಾತ್ರೆ ಇತರರಿಗೆ ಮಾದರಿಯಾಗಿದ್ದು, ತೆಲಂಗಾಣದಲ್ಲೂ ನಮ್ಮದೇ ಮಾದರಿಯಲ್ಲಿ ಮುಂದುವರೆದಿದೆ. ನಮ್ಮ ರಾಜ್ಯದಲ್ಲಿ ಇದನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಭಾನುವಾರ ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಇದು ಕೇವಲ 21 ಕ್ಷೇತ್ರಗಳಲ್ಲಿ ಮಾತ್ರವಲ್ಲ, ಎಲ್ಲ 224 ಕ್ಷೇತ್ರಗಳಲ್ಲೂ ಪ್ರಭಾವ ಬೀರಬೇಕು.

ಸಚಿವ ಎಂಟಿಬಿ ನಾಗರಾಜ್ ಅವರ ಆಡಿಯೋ ಲೀಕ್ ಬಗ್ಗೆ ಪ್ರಶ್ನೆ ಕೇಳಿದಾಗ, ‘ಈ ಸರ್ಕಾರ ಹುಟ್ಟಿರುವುದೇ ಆಪರೇಷನ್ ಕಮಲ ಎಂಬ ಭ್ರಷ್ಟಾಚಾರದಲ್ಲಿ. ಇದರಲ್ಲಿ ಎಂಟಿಬಿ ನಾಗರಾಜ್ ಅವರು ಕೂಡ ಸೇರಿದ್ದಾರೆ. ನಿನ್ನೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಮುಂದಾದಾಗ ಕೋಟಿ, ಕೋಟಿ ಹಣ ಸಿಕ್ಕಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ನಡೆದಿದೆ ಎಂದು ಹಿಂದೆ ಶಾಸಕ ಶ್ರೀನಿವಾಸ ಗೌಡರು ವಿಧಾನ ಸಭೆಯಲ್ಲಿ ತಿಳಿಸಿದರು. ಆದರೆ ಸರ್ಕಾರ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿತು. ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮಾಡುತ್ತಿದ್ದಾರೆ. 

ಆಪರೇಷನ್ ಕಮಲದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಆ ಮೂಲಕ ಈ ಅಕ್ರಮ ಕೊನೆಗೊಂಡು ಪ್ರಜಾಪ್ರಭುತ್ವ ಉಳಿಯಬೇಕಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು. ಈ ಪ್ರಕರಣಗಳಿಗೆ ಪಿಎಂಎಲ್ಎ ಹಾಗೂ ಹಣಕಾಸು ಅವ್ಯವಹಾರ ಅನ್ವಯವಾಗುವುದಿಲ್ಲವೇ? ಹೀಗಾಗಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯನ್ನು ಬೆಳಕಿಗೆ ತರಬೇಕು’ ಎಂದು ತಿಳಿಸಿದರು.

ನ. 6 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಭೇಟಿ ನೀಡಲಿರುವ ಬಗ್ಗೆ ಕೇಳಿದಾಗ, ‘ರಾಷ್ಟ್ರೀಯ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನ.6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಳೆ ನಾನು ಪೂರ್ವಭಾವಿ ಸಭೆ ಕರೆಯುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಉನ್ನತ ಹುದ್ದೆಗೆ ಆಯ್ಕೆಯಾಗಿರುವುದರಿಂದ ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಶಕ್ತಿ ಬಂದಿದೆ. 50 ವರ್ಷಗಳ ನಂತರ ರಾಜ್ಯದವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹಿರಿಯರು, ಪ್ರಾಮಾಣಿಕ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ. 

ನ.6ರಂದು ರಾಜ್ಯದ ಎಲ್ಲ ಕಾರ್ಯಕರ್ತರು ಬಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಕೋರಬಹುದು. ಈ ಕಾರ್ಯಕ್ರಮವನ್ನು ಎಲ್ಲಿ, ಹೇಗೆ ಮಾಡಲಾಗುವುದು ಎಂಬ ಬಗ್ಗೆ ನಾಳೆ ಚರ್ಚೆ ನಂತರ ನಿಗದಿ ಮಾಡುತ್ತೇವೆ. ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯ್ತಿ ಸದಸ್ಯರು, ಮುಖಂಡರು, ಜಿಲ್ಲಾ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಸೆಲ್ ಮುಖ್ಯಸ್ಥರು ಈ ಕಾರ್ಯಕ್ರಮಕ್ಕೆ ಆಗಮಿಸಲು ತಯಾರಿ ಮಾಡಿಕೊಳ್ಳಬೇಕು’ ಎಂದರು. 

ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ಅವರ ಮನೆಯಲ್ಲೇ ಹನ್ನೆರಡು ಬಾಗಿಲುಗಳಾಗಿವೆ. ಅವರದು ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಸಮ್ಮಿಶ್ರ ಸರ್ಕಾರವಾಗಿದೆ. ಅವರಲ್ಲಿ ಏನೆಲ್ಲ ನೋವಿದೆ ಎಂಬುದರ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಿ’ ಎಂದರು. 

ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮುಂದಿನ ನಾಲ್ಕೈದು ದಿನಗಳಲ್ಲಿ ಈ ವಿಚಾರದಲ್ಲಿ ನಮ್ಮ ತಯಾರಿ ಬಗ್ಗೆ ಮಾಹಿತಿ ನೀಡುತ್ತೇನೆ’ ಎಂದು ತಿಳಿಸಿದರು.

ಅವಧಿಗೂ ಮುನ್ನ ಚುನಾವಣೆ ಬರುತ್ತದೆಯೇ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ನಾವಂತು ಚುನಾವಣೆಗೆ ಸನ್ನದ್ಧರಾಗಿದ್ದೇವೆ’ ಎಂದರು.

ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆ ಕೇಳಿದಾಗ, ‘ಶಿವಮೊಗ್ಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. 1999ರಲ್ಲಿ ಯಾವ ರೀತಿ ಬದಲಾವಣೆ ಆಯಿತೊ, ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದಾಗ ಹೇಗೆ ಬಿಜೆಪಿಯ ದೊಡ್ಡ ನಾಯಕರು ಸೋಲನ್ನನುಭವಿಸಿದ್ದರೋ ಅಂತಹುದೇ ವಾತಾವರಣ ಈಗ ನಿರ್ಮಾಣವಾಗಿದೆ. ಮುಂದಿನ ತಿಂಗಳು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಯಡಿಯೂರಪ್ಪನವರು ಹಾಗೂ ಈಶ್ವರಪ್ಪನವರು ಉದ್ದಿಮೆದಾರರನ್ನು ಕರೆತಂದು ಶಿವಮೊಗ್ಗದಲ್ಲಿ ಬಂಡವಾಳ ಹೂಡುವಂತೆ ಮಾಡಲಿ. ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲಿ. ಇವರು ನಿರ್ಮಾಣ ಮಾಡಿರುವ ವಾತಾವರಣ ಇಡೀ ಶಿವಮೊಗ್ಗ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿದೆ. ಯಾರಾದರೂ ಉದ್ದಿಮೆದಾರಿಗೆ ಇಲ್ಲಿ ಉತ್ತಮ ವಾತಾವರಣ ಇದೆ, ಇಲ್ಲಿಗೆ ಬಂದು ಉದ್ದಿಮೆ ಆರಂಭಿಸಿ ಎಂದು ಆಹ್ವಾನಿಸಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಲಿ. ಯಾರ್ಯಾರು ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೋ ನೋಡೋಣ. ಈ ವಿಚಾರವನ್ನು ಶಿವಮೊಗ್ಗದ ನಾಗರೀಕರು ಅರಿತುಕೊಳ್ಳಬೇಕು. ಈ ಭಾಗದ ರೈತರಿಗೆ ಅರಣ್ಯ ಕಾಯ್ದೆ, ಶರಾವತಿ ನೀರು, ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ರೈತರ ಸಮಸ್ಯೆ, ಅಡಿಕೆ ಬೆಳೆ ಸಮಸ್ಯೆ ಹೆಚ್ಚಾಗಿದ್ದು, ಇವರಿಗೆ ರಕ್ಷಣೆ ಇಲ್ಲವಾಗಿದೆ. ಈ ವಿಚಾರವಾಗಿ ಸ್ಥಳೀಯ ನಾಯಕರಾದ ರಮೇಶ್ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಒಂದು ತಿಂಗಳಲ್ಲಿ ವರದಿ ನೀಡಲಿದ್ದು, ಈ ಭಾಗದ ರೈತರ ಹಿತ ಕಾಯಲು ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
[29/10, 6:14 PM] Kpcc official: ಆಪರೇಷನ್ ಕಮಲದ ಮೂಲಕ ಹೋದ ಸಚಿವ MTB ನಾಗರಾಜ್ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಿದೆ ಬಿಜೆಪಿ,
ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು.

80 ಲಕ್ಷ ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರುವಾಗ ತನಿಖೆಗೆ ನೋಟಿಸ್ ನೀಡದಿರುವುದೇಕೆ? ಸುಮೋಟೋ ಕೇಸ್ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ @BSBommai ಅವರೇ?
[29/10, 6:51 PM] Kpcc official: ಈ ಹಿಂದೆ "ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ" ಎಂದು ಅಧಿಕಾರಿಗಳು ಬೋರ್ಡ್ ಹಾಕುವ ಅಭಿಯಾನ ಶುರು ಮಾಡಿತ್ತು ಸರ್ಕಾರ.

ಸಿಎಂ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು.

ಹಾಗೆಯೇ
"ಲಂಚ ಪಡೆಯಲಾಗುವುದು, ಹಾಗೂ ಲಂಚ ನೀಡಲಾಗುವುದು" ಎಂಬ ಬೋರ್ಡ್ ಹಾಕಿಕೊಳ್ಳಲಿ!
#PayCM
[29/10, 7:10 PM] Kpcc official: *ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*

*ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ:*
ಸಚಿವ MTB ನಾಗರಾಜ್ ಅವರು ಕೆ.ಆರ್ ಪುರ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರ ಸಾವಿನ ಕುರಿತು, ' ಪೋಸ್ಟಿಂಗ್ ಗಾಗಿ 70-80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ' ಎಂದು ಬಹಿರಂಗವಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಕಳೆದ ಎರಡು ವರ್ಷಗಳಿಂದ ವಿರೋಧ ಪಕ್ಷಗಳು, ಮಾಧ್ಯಮಗಳು ಆರೋಪ ಮಾಡುತ್ತಲೇ ಇವೆ. ಆದರೆ ಈಗ ಸಚಿವ ಎಂಟಿಬಿ ನಾಗರಾಜ್ ಅವರ ಈ ಹೇಳಿಕೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಾಬೀತಾಗಿದೆ.

ಸರ್ಕಾರದ ವಿರುದ್ಧ ಅವರದೇ ಪಕ್ಷದವರ ಆರೋಪ, ಮಾತುಗಳು ಹೊಸತೇನಲ್ಲ. ಈ ಹಿಂದೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದರು. ಈಗ ಈ ಸರದಿ ಸರ್ಕಾರದ ಸಚಿವರದ್ದಾಗಿದೆ. ನಾಗರಾಜ್ ಅವರು ತಮ್ಮ ಮನದಲ್ಲಿನ ಸತ್ಯವನ್ನು ಹೇಳಿದ್ದಾರೆ.

ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ. ಮುಖ್ಯಮಂತ್ರಿಗಳು ಅವರ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತಿನ ಸವಾಲು ಹಾಕಿದ್ದರು. ಈಗ ಅವರಿಗೆ ಧಮ್ಮು, ತಾಕತ್ತು ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇನ್ಸ್ ಪೆಕ್ಟರ್ ಗೆ 70-80 ಲಕ್ಷ ಆದರೆ, ಡಿಸಿಪಿ ಐಪಿಎಸ್ ಅಧಿಕಾರಿಗಳಿಗೆ ಎಷ್ಟು ರೇಟ್ ನಿಗದಿ ಮಾಡಿದ್ದಾರೆ ಎಂದು ತಿಳಿಸಬೇಕು.

ಸಚಿವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿಗಳು ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಸುಳ್ಳಾಗಿದ್ದರೆ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು.

ನಿಮ್ಮ ಸಚಿವರೇ ಹೇಳಿದಂತೆ ಪೋಸ್ಟಿಂಗ್ ಗಾಗಿ ನೀಡಲಾಗಿರುವ 70-80 ಲಕ್ಷ ಹಣ ಯಾರಿಗೆ ಸೇರಿದೆ. ಮುಖ್ಯಮಂತ್ರಿಗಳಿಗೆ ಸೇರಿದೆಯಾ? ಅಥವಾ ಗೃಹಮಂತ್ರಿಗಳಿಗೆ ಸೇರಿದೆಯಾ? ಅಥವಾ ಬೇರೆಯವರಿಗೆ ಸೇರಿದೆಯಾ? ಎಂಬ ಸ್ಪಷ್ಟನೆ ನೀಡಬೇಕು.

ಈ ಹಿಂದೆ ನಿಮ್ಮ ವಿಧಾನ ಪರಿಷತ್ ಬಿಜೆಪಿ ಸದಸ್ಯ ವಿಶ್ವನಾಥ್ ಅವರು ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಬಿಜೆಪಿ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ಹೇಳಿದ್ದರು. ಮಾಧುಸ್ವಾಮಿ ಅವರು ಈ ಸರ್ಕಾರವನ್ನು ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿರುವುದಕ್ಕಿಂತ ಅವರದೇ ಪಕ್ಷದ ನಾಯಕರು ಹೆಚ್ಚಾಗಿ ಹೇಳುತ್ತಿದ್ದಾರೆ.

ಈ ಹಿಂದೆ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪಿ ಎಸ್ ಐ ನೇಮಕ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದಾಗ ಅವರಿಗೆ ನೊಟೀಸ್ ಕೊಟ್ಟಿದ್ದೀರಿ. ಈಗ ನಿಮ್ಮ ಸಚಿವರು ಈ ಮಾತು ಹೇಳಿದ್ದು, ಇವರಿಗೆ ನೊಟೀಸ್ ಯಾವಾಗ ನೀಡುತ್ತೀರಿ?

ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಮಾಡಿದಾಗ ಸಿಐಡಿ ಮೂಲಕ ಕೇಸು ದಾಖಲಿಸುತ್ತೀರಿ? ನಿಮ್ಮ ಸಚಿವರ ಹೇಳಿಕೆಯೂ ಪೇ ಸಿಎಂ ಆರೋಪದ ಭಾಗವಲ್ಲವೆ? 

ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅವರ ಕಾರ್ಯದರ್ಶಿ ಮಂಜುನಾಥ್ ಅವರು ಒಂದು ಸುತ್ತೋಲೆ ಹೊರಡಿಸಿ, ಸರ್ಕಾರಿ ಕಚೇರಿಗಳಲ್ಲಿ ನಾನು ಭ್ರಷ್ಟ ಅಧಿಕಾರಿಯಲ್ಲ, ಲಂಚ ಸ್ವೀಕರಿಸುವುದಿಲ್ಲ ಎಂಬ ಅಭಿಯಾನ ಮಾಡಿದ್ದರು. ಇಷ್ಟೆಲ್ಲಾ ಅಭಿಯಾನ ಮಾಡಿದರೂ ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಅಧಿಕಾರಿ ಹಾಗೂ ರಾಜಕಾರಣಿ ಯಾರು? ಎಂಬುದನ್ನು ಜನರಿಗೆ ಹೇಳಬೇಕಿದೆ.

2008ರಿಂದ 2013ರವರೆಗೆ ರಾಜ್ಯವನ್ನು ಗಣಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಬಗೆದು ಬಗೆದು ಹಣ ಮಾಡಿಕೊಂಡರು. 2019ರಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಭ್ರಷ್ಟಾಚಾರದಿಂದ, ನಡೆಯುತ್ತಿರುವುದು ಭ್ರಷ್ಟಾಚಾರದಿಂದಲೇ,  ಮುಂದೆ ನಡೆಯುವುದು ಭ್ರಷ್ಟಾಚಾರಕ್ಕಾಗಿ. ಹೀಗಾಗಿ ಇವರಿಗೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡುತ್ತಿದೆ. ಬಿಡುವಿಲ್ಲದಂತೆ ಲೂಟಿ ಮಾಡುತ್ತಿದ್ದಾರೆ.

ಇನ್ನು ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಅವರ ಕುಟುಂಬದವರು 40% ಕಮಿಷನ್ ಆರೋಪ ಮಾಡಿದ್ದರೂ ಸರ್ಕಾರದ ಕೃಪಾಕಟಾಕ್ಷದಿಂದ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ರಾಜ್ಯದಲ್ಲಿ ಇವರ ಭ್ರಷ್ಟಾಚಾರಕ್ಕೆ ಇನ್ನು ಎಷ್ಟು ಮಂದಿ ಅಮಾಯಕರು ಬಲಿಯಾಗಬೇಕು? ಇನ್ಸ್ ಪೆಕ್ಟರ್ ನಂದೀಶ್ ಅವರು ಕೂಡ ಲಕ್ಷಾಂತರ ಹಣ ನೀಡಿದ ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೀಗೆ ದುಡ್ಡು ಕೊಟ್ಟು ಬಂದವರು ಅದನ್ನು ಜನರಿಂದಲೇ ಪಡೆಯಲು ಮುಂದಾಗುತ್ತಾರೆ. ಹೀಗಾಗಿ ಈ ಪೊಲೀಸ್ ಅಧಿಕಾರಿ ಸಾವಿಗೆ ಸರ್ಕಾರವೇ ಹೊಣೆ. 

ಇಡಿ, ಸಿಬಿಐ, ಆದಾಯ ತೆರಿಗೆ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳ ಮೇಲೆ ಪ್ರಯೋಗಕ್ಕೆ ಸೀಮಿತವಾಗಿವೆ. ಈ ಹಿಂದೆ ಸಚಿವ ಅಶ್ವತ್ಥ್ ನಾರಾಯಣ ಅವರು ಶಾಸಕ ಶ್ರೀನಿವಾಸ್ ಅವರ ನಿವಾಸಕ್ಕೆ ಹೋಗಿ ಆಪರೇಷನ್ ಕಮಲದ ಭಾಗವಾಗಿ ಕೋಟ್ಯಂತರ ರೂ. ಹಣ ನೀಡಿದರೂ ಇಡಿ ಗಮನಕ್ಕೆ ಬರುವುದಿಲ್ಲ. 2019ರಲ್ಲಿ ಸರ್ಕಾರ ಬದಲಾವಣೆ ಆದಾಗ ಸಾವಿರಾರು ಕೋಟಿ ವ್ಯವಹಾರವಾಗಿತ್ತು ಇದೂ ಕೂಡ ಈ ಸಂಸ್ಥೆಗಳ ಗಮನಕ್ಕೆ ಬಾರಲೇ ಇಲ್ಲ. 

ರಾಜ್ಯ ಸರ್ಕಾರದ ವ್ಯಾಪ್ತಿಯ ಸಂಸ್ಥೆಗಳಿಂದ ತನಿಖೆಯಾದರೆ ಸತ್ಯಾಂಶ ಹೊರ ಬರುವುದಿಲ್ಲ. ಈ ಎಲ್ಲ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ ಸಿಒಡಿ ಹಾಗೂ ಇತರೆ ರಾಜ್ಯದ ಸಂಸ್ಥೆಗಳಿಂದ ತನಿಖೆ ಮಾಡಿಸದೇ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ಸತ್ಯಾಂಶ ಬೆಳಕಿಗೆ ಬರುತ್ತದೆ. ನಂದೀಶ್ ಅವರಿಂದ ಯಾರೇ ಹಣ ಪಡೆದಿದ್ದರೂ ಈ ಸಮಯದಲ್ಲಿ ಅವರು ಹಿಂದಿರುಗಿಸಬೇಕು.

ಬಿಜೆಪಿ ಅಂದರೆ ಭ್ರಷ್ಟ ಜನತಾ ಪಕ್ಷ, ಬುರುಡೆ ಜನತಾ ಪಕ್ಷ ಎಂದು ನಾನು ಐದು ವರ್ಷಗಳ ಹಿಂದೆ ಹೇಳಿದ್ದೆ, ಈಗ ಅವರು ಬಂಡ ಜನರ ಪಕ್ಷವಾಗಿದೆ. ಯಾರು ಏನೇ ಬೈಯಲ್ಲಿ ಅವರು ಮಾಡುತ್ತಿರುವ ಅನ್ಯಾಯ, ಅಕ್ರಮವನ್ನು ಬಿಡುವುದಿಲ್ಲ.

2019ರಿಂದ ಈಚೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಯಾವುದೇ ಮಿತಿ ಇಲ್ಲದೆ ಬೆಳಗಾದರೆ ಲೂಟಿಗೆ ಯೋಜನೆ ರೂಪಿಸುತ್ತಾರೆ. ಯಾವುದೇ ಅಧಿಕಾರಿಯನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಸುವುದಿಲ್ಲ. ಕೇವಲ ಇದೊಂದೇ ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ಇದೇ ಪ್ರವೃತ್ತಿ ಇದೆ.

*ಮಾಜಿ ಸಚಿವ ಕೃಷ್ಣ ಭೈರೇಗೌಡ:*

ಇನ್ಸ್ ಪೆಕ್ಟ್ ನಂದಿಶ್ ಅವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ, ಒತ್ತಡ ತಡೆಯಲಾಗದೇ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತೇನೆ. ಅವರ ನಷ್ಟದ ಶೋಕವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ನಂದೀಶ್ ಅವರು ಸುಮಾರು 70-80 ಲಕ್ಷ ಲಂಚ ನೀಡಿ ಆ ಠಾಣೆಗೆ  ಬಂದಿದ್ದಾರೆ. ಈ ವಿಚಾರ ನಾವು ಮಾಡುತ್ತಿರುವ ಆರೋಪವಲ್ಲ, ಸರ್ಕಾರದ ಸಚಿವರು ಹೇಳಿರುವ ಮಾತು. ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವುದು ಒಬ್ಬ ಇನ್ಸ್ ಪೆಕ್ಟರ್ ಒಂದು ವರ್ಷಗಳ ಕಾಲ ಮಾತ್ರ ಇರುತ್ತಾರೆ. ಈ ಅವಧಿ ಪೂರ್ಣಗೊಂಡ ಮರುದಿನವೇ ಅವರ ವರ್ಗಾವಣೆ ಆದೇಶ ಸಿದ್ಧವಾಗಿರುತ್ತದೆ. ಆಮೂಲಕ ಈ ಸರ್ಕಾರ ವರ್ಗಾವಣೆಯನ್ನು ದಂಧೆ ಮಾಡಿಕೊಂಡಿದೆ. ಬಕಪಕ್ಷಿಯ ರೀತಿ ಪೊಲೀಸ್ ಅಧಿಕಾರಿಗಳಿಂದ ಈ ರೀತಿ ವಸೂಲಿ ಮಾಡಲಾಗುತ್ತಿದೆ. ಒಂದು ವರ್ಷ ಅವಧಿಗೆ ಇವರು 70-0 ಲಕ್ಷ ಕೊಟ್ಟು ಬರಬೇಕಾದರೆ ಸಾಲ ಮಾಡಿ ಬಿಜೆಪಿ ಸರ್ಕಾರಕ್ಕೆ ಕೊಟ್ಟು ಬರುತ್ತಾರೆ. ಇದನ್ನು ತೀರಿಸಲು ಅವರಿಗೆ ಸಿಗುವುದು 365 ದಿನ ಮಾತ್ರ.

3 ರೂ. ಬಡ್ಡಿ ಆಧಾರದ ಮೇಲೆ ಲೆಕ್ಕ ಹಾಕಿದರೆ, ಈ 70-80 ಲಕ್ಷಕ್ಕೆ ಶೇ.40ರಷ್ಟು ಸೇರಿ ಸುಮಾರು 1.20 ಕೋಟಿ ಹಣದ ಜತೆಗೆ ಮುಂದಿನ ವರ್ಗಾವಣೆ ಸಮಯದಲ್ಲಿ ಪೋಸ್ಟಿಂಗ್ ಪಡೆಯಲು ಬೇಕಾದ ಹಣವನ್ನು ಕಲೆಹಾಕಬೇಕು. ಇಲ್ಲದಿದ್ದರೆ ಮುಂದಿನ ವರ್ಗಾವಣೆಯಲ್ಲಿ ಯಾವುದೇ ಮೂಲೆಯಲ್ಲಿ ಪೋಸ್ಟಿಂಗ್ ಸಿಗುತ್ತದೆ. ಅಲ್ಲಿಗೆ ಈ ಅಧಿಕಾರಿಗಳು 365 ದಿನಗಳಲ್ಲಿ ಕನಿಷ್ಠ 2-2.5 ಕೋಟಿಯಷ್ಟು ಹಣ ಸಂಪಾದಿಸಬೇಕಾಗುತ್ತದೆ. ಈ ಒತ್ತಡಕ್ಕೆ ಸಿಲುಕಿ ಪೊಲೀಸರ ಬದುಕು ನರಕವಾಗಿದೆ. ಇದೆಲ್ಲದರ ಹೊರೆಯನ್ನು ಜನಸಾಮಾನ್ಯರ ಮೇಲೆ. ಈ ಒತ್ತಡದಲ್ಲಿ ಕಾನೂನು ಸುವ್ಯವಸ್ಥೆ ಗಾಳಿಗೆ ತೂರಲಾಗಿದೆ. 

ಬಿಜೆಪಿಯವರ ಆಡಳಿತದಲ್ಲಿ ಪೊಲೀಸ್ ಹುದ್ದೆಯನ್ನು ಹರಾಜು ಕೂಗುವ ರೀತಿ ಮಾಡಿದ್ದಾರೆ. ಯಾರು ಹೆಚ್ಚು ಹಣ ನೀಡುತ್ತಾರೋ ಅವರು ಹೇಳಿದ ಕಡೆ ಪೊಸ್ಟಿಂಗ್ ನೀಡುತ್ತಾರೆ. ನಂತರ ಅವರು ಇದನ್ನು ಹಿಂಪಡೆಯಲು ದಿನನಿತ್ಯ ವಸೂಲಿಗೆ ಮುಂದಾಗುತ್ತಾರೆ. ಆ ಮೂಲಕ ಪೊಲೀಸ್ ಠಾಣೆ ಟೋಲ್ ಗೇಟ್ ನಂತಾಗಿದೆ. ಈ ಸುಲಿಗೆ ಮಾಡುವ ಒಥ್ತಡ ಅಧಿಕಾರಿಗಳಿಗೆ, ಸುಲಿಗೆ ಆಗದಿದ್ದರೆ ಇವರು ಹಾಕಿದ ಬಂಡವಾಳ ಹಿಂಪಡೆಯುವುದಿಲ್ಲ. ಇಂತಹ ಕೆಲಸಕ್ಕೆ ಕೈ ಹಾಕಿ ನಂದೀಶ್ ಅವರು ಅಮಾನತುಗೊಂಡು ಒತ್ತಡ ತಡೆಯಲಾರದೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರ ನಂದೀಶ್ ಅವರನ್ನು ಬಲಿ ತೆಗೆದುಕೊಂಡಿದೆ. ಇದು ನಿಧನವಲ್ಲ ಭ್ರಷ್ಟಾಚಾರದಿಂದ ಆಗಿರುವ ಹತ್ಯೆ. ಇದರ ಜವಾಬ್ದಾರಿಯನ್ನು ಬಿಜೆಪಿ ಸರ್ಕಾರವೇ ಹೊರಬೇಕು.

ಸಚಿವರೇ ಹಣ ಕೊಟ್ಟಿರುವ ಮಾಹಿತಿ ನೀಡಿದ್ದು, ಈ ಹಣ ನೇರವಾಗಿ ಗೃಹಸಚಿವರಿಗೆ ಹೋಗಿರುತ್ತದೆ. ಹೀಗಾಗಿ ಗೃಹಸಚಿವರ ಭ್ರಷ್ಟಾಚಾರಕ್ಕೆ ನಂದಿಶ್ ಬಲಿಯಾಗಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದರೆ ಗೃಹ ಸಚಿವರನ್ನು ಕೂಡಲೇ ವಜಾಗೋಳಿಸಬೇಕು. ಈ ಹಣ ಯಾರಿಗೆ ಹೋಗಿದೆ ಎಂದು ತಿಳಿಯಲು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಕಾರಣ ಇಡಿ, ಐಟಿ, ಆದಾಯ ತೆರಿಗೆ ಇಲಾಖೆಗೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅವರ ಕಣ್ಣಿಗೆ ಕಾಣುತ್ತಿಲ್ಲ. ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಎಂಬ ಭಾವನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿಯವರಿಗೆ ಭ್ರಷ್ಟಾಚಾರ ಹಣ ಲೂಟಿ ಮಾಡಲು ಪರವಾನಿಗೆ ನೀಡಿದ್ದಾರೆ.

ರಾಜ್ಯ ಸರ್ಕಾರ ಬಿ ರಿಪೋರ್ಟ್ ಹಾಕುವುದಕ್ಕಾಗಿಯೇ ತನಿಖೆ ಮಾಡಿಸಲಾಗುತ್ತಿದೆ. ಹೀಗಾಗಿ ಈ ತನಿಖೆಗಳಿಂದ ಯಾವುದೇ ಕಾರಣಕ್ಕೂ ನ್ಯಾಯ ಸಿಗುವುದಿಲ್ಲ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು. ಗೃಹ ಸಚಿವರು ಜವಾಬ್ದಾರಿ ಹೊರಬೇಕು. ಬಿಜೆಪಿ ಭ್ರಷ್ಟಾಚಾರಕ್ಕೆ ರಾಜ್ಯ ತತ್ತರಿಸಿದೆ. ಒಂದೊಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆ ಜನ ಸಾಮಾನ್ಯರನ್ನು ಕಿತ್ತು ತಿನ್ನುತ್ತಿದ್ದು, ಗಾಯದ ಮೇಲೆ ಬರೆ ಏಳೆದಂತೆ ಈ ಭ್ರಷ್ಟಾಚಾರ ರಾಜ್ಯದ ಪಾಲಿಗೆ ಶಾಪವಾಗಿದ್ದು, ಈ ಶಾಪದಿಂದ ಮುಕ್ತಿ ಪಡೆಯಲು ಜನ ಸಂಕಲ್ಪ ಮಾಡಿದ್ದು, ಮುಂದಿನ ದಿನಗಳಲ್ಲಿ ಇದು ಆಗಲಿದೆ.

ಈ ಅಕ್ರಮಗಳು ಕೇವಲ ಕೆ.ಆರ್ ಪುರ ಪೊಲೀಸ್ ಠಾಣೆಗೆ ಮಾತ್ರವಲ್ಲ ಎಲ್ಲ ಠಾಣೆಗಳಲ್ಲೂ ನಡೆದಿದೆ. ನನ್ನ ಕ್ಷೇತ್ರದಲ್ಲಿ ಈ ಸರ್ಕಾರ ಬಂದ ನಂತರ ನಾಲ್ವರು ಅಧಿಕಾರಿ ಬದಲಾಗಿದ್ದಾರೆ. ಚಿಕ್ಕಜಾಲ ಠಾಣೆಯಲ್ಲಿ ಮೂವರು ಅಧಿಕಾರಿಗಳು ಹಗರಣದಲ್ಲಿ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಈ ಸರ್ಕಾರ ಪ್ರತಿ ಠಾಣೆಯನ್ನು ಹರಾಜಿಗೆ ಇಟ್ಟಿದ್ದಾರೆ ಯಾರು ಹೆಚ್ಚಿನ ದರಕ್ಕೆ ಕೂಗುತ್ತಾರೋ ಅವರಿಗೆ ಆ ಠಾಣೆಯನ್ನು ಒಂದು ವರ್ಷ ಗುತ್ತಿಗೆ ನೀಡುತ್ತಾರೆ.

ಇನ್ಸ್ ಪೆಕ್ಟರ್ ಹಂತದ ಅಧಿಕಾರಿಗಳ ವರ್ಗಾವಣೆ ನಡೆಯುವುದು ಗೃಹಸಚಿವರ ಮಟ್ಟದಲ್ಲಿ ಹೀಗಾಗಿ ನಾವು ಸ್ವಾಭಾವಿಕವಾಗಿ ಈ ಹಣ ಗೃಹ ಸಚಿವರಿಗೆ ಹೋಗಿದೆ ಎಂದು ಅನುಮಾನ ವ್ಯಕ್ತವಾಗುತ್ತದೆ. ಹೀಗಾಗಿ ನ್ಯಾಯಾಂಗ ತನಿಖೆ ಮೂಲಕ ಹಣ ಗೃಹ ಸಚಿವರಿಗೆ ಹೋಗಿದೆಯೋ ಇಲ್ಲವೋ ಎಂಬ ವಿಷಯ ಬಹಿರಂಗವಾಗಬೇಕಿದೆ. ಈ ವಿಚಾರವನ್ನು ಇಟ್ಟುಕೊಂಡು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ.

ಪೊಲೀಸ್ ನೇಮಕಾತಿ, ಪ್ರತಿ ವರ್ಗಾವಣೆ, ಪ್ರತಿ ಗುತ್ತಿಗೆಯಲ್ಲಿ ಅಕ್ರಮ ಮಾಡುತ್ತಿದ್ದು, ಇದರ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ.

*ಪ್ರಶ್ನೋತ್ತರ:*

ನಿಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಅಕ್ರಮ ನಡೆದಿರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾ ರೆಡ್ಡಿ ಅವರು, ‘ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಅಕ್ರಮ ಇರಲಿಲ್ಲ. ಇದ್ದಿದ್ದರೆ ಮಾಧ್ಯಮಗಳ ಗಮನಕ್ಕೆ ಬರುತ್ತಿತ್ತು’ ಎಂದರು.

ಶಾಸಕರ ಒತ್ತಡದ ಮೇಲೆ ಈ ಪೋಸ್ಟಿಂಗ್ ಆಗಿತ್ತೆ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದ್ದರೆ ನೀಡಿ. ಶಾಸಕರ ಶಿಫಾರಸ್ಸಿನ ಮೇರೆಗೆ ಪೊಲೀಸ್ ಅಧಿಕಾರಿ ವರ್ಗಾವಣೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶವಿದೆ. ಹೀಗಾಗಿ ಯಾವುದೇ ಶಾಸಕರು ಇದಕ್ಕೆ ಮುಂದೆ ಬರುವುದಿಲ್ಲ. ನಮ್ಮ ಬಳಿ ಸಾಕ್ಷಿ ಇಲ್ಲದೆ ಯಾರ ಮೇಲೂ ಆರೋಪ ಮಾಡುವಂತಿಲ್ಲ. ಈ ವಿಚಾರ ನ್ಯಾಯಾಂಗ ತನಿಖೆ ಆಗಬೇಕು. ಇಡೀ ರಾಜ್ಯದೆಲ್ಲೆಡೆ ನಮ್ಮ ಸರ್ಕಾರದ ವರ್ಗಾವಣೆ ಸೇರಿಸಿ ತನಿಖೆ ಮಾಡಲಿ’ ಎಂದು ತಿಳಿಸಿದರು.

ಸರ್ಕಾರ ಯಾವುದೇ ಪ್ರಕರಣ ನ್ಯಾಯಾಂಗ ತನಿಖೆ ನೀಡುತ್ತಿಲ್ಲ ಎಂದು ಕೇಳಿದಾಗ ಉತ್ತರಿಸಿ ಕೃಷ್ಣ ಭೈರೇಗೌಡ ಅವರು, ‘ನಾವು ನ್ಯಾಯಾಂಗ ತನಿಖೆಗಾಗಿ ಹೋರಾಟ ಮಾಡುತ್ತೇವೆ. ಅವರು ಮಾಡಿರುವ ತನಿಖೆ ಪ್ರಕರಣ ಮುಚ್ಚಿಹಾಕಲು ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಗಣಪತಿ ಭಟ್, ಡಿ.ಕೆ. ರವಿ, ಪರೇಶ್ ಮೇಸ್ತಾ ಅವರ ಪ್ರಕರಣವನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಸಿಬಿಐ ತನಿಖೆ ನೀಡಿದ್ದೆವು. ಈ ಮೂರು ಪ್ರಕರಣದಲ್ಲಿ ಕಾಂಗ್ರೆಸ್ ಸದಸ್ಯರ ತಪ್ಪಿಲ್ಲ ಎಂಬುದು ಸ್ಪಷ್ಟವಾಗಿ ವರದಿ ಬಂದಿದೆ. ಆದರೆ ಬಿಜೆಪಿ ಒಂದು ಪ್ರಕರಣವನ್ನು ಪಾರದರ್ಶಕ ತನಿಖೆಗೆ ನೀಡಿಲ್ಲ. ಇವರ ನೀಡದಿದ್ದರೆ ಈ ವಿಚಾರವನ್ನು ಜನತಾ ನ್ಯಾಯಾಲಯದಲ್ಲಿ ಇಟ್ಟು ಹೋರಾಟ ಮಾಡುತ್ತೇವೆ. ಅವರೇ ತೀರ್ಮಾನ ಮಾಡುತ್ತಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಶರತ್ ಬಚ್ಚೇಗೌಡ ಅವರು ಉಪಸ್ಥಿತರಿದ್ದರು.

Post a Comment

Previous Post Next Post