ದೇಶವಿರೋಧಿ ಮತೀಯ ಸಂಘಟನೆಗಳ ನಿಷೇಧಕ್ಕೆ ರಾಜ್ಯ BJP ಅಭಿನಂದನೆ

07-10।। 22

ಪ್ರಕಟಣೆಯ ಕೃಪೆಗಾಗಿ
ದೇಶವಿರೋಧಿ ಮತೀಯ ಸಂಘಟನೆಗಳ ನಿಷೇಧಕ್ಕೆ ಅಭಿನಂದನೆ
ಬೆಂಗಳೂರು: ಇಂದು ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಎರಡು ನಿರ್ಣಯಗಳನ್ನು ಅಂಗೀಕರಿಸಿದೆ.
ಐಸಿಸ್ ನಂತರ ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳ ಜತೆ ನಂಟು, ಹಿಂದೂ ಕಾರ್ಯಕರ್ತರ ಹತ್ಯೆ, ಕೋಮುಗಲಭೆಗೆ ಕುಮ್ಮಕ್ಕು, ಕರ್ನಾಟಕದಲ್ಲಿ ಹಿಜಾಬ್ ಹೋರಾಟ ರೂಪಿಸಿದ ಪಿಎಫ್‍ಐ ಮತ್ತು ಇನ್ನಿತರ ದೇಶವಿರೋಧಿ ಸಂಘಟನೆಗಳಿಗೆ 5 ವರ್ಷಗಳ ಕಾಲ ದೇಶಾದ್ಯಂತ ನಿಷೇಧಿಸಿ ದಿಟ್ಟ ನಿರ್ಧಾರ ಕೈಗೊಂಡ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಪಿಎಫ್‍ಐ ಮೇಲೆ 320 ಕ್ಕೂ ಹೆಚ್ಚು ಪ್ರಕರಣಗಳು. ಮೂರು ಕೊಲೆಯತ್ನ ಹಲವು ದೊಂಬಿ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಗೃಹ ಸಚಿವಾಲಯವು ಪಿಎಫ್‍ಐ ನಿಷೇದಿಸಿ ಹೊರಡಿಸಿರುವ ಅಧಿಸೂಚನೆಯಲ್ಲಿ 4 ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿದೆ. 2006ರಲ್ಲಿ ನಡೆದ ಬೆಂಗಳೂರಿನ ಆರ್.ರುದ್ರೇಶ್ (ಶಿವಾಜಿನಗರ), ಮತ್ತು ಉಡುಪಿ ಜಿಲ್ಲೆಯ ಪ್ರವೀಣ್‍ಪೂಜಾರಿ, 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶರತ್ ಮಡಿವಾಳ್, 2022ರಲ್ಲಿ ಸೂಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳನ್ನು ಕೇಂದ್ರ ಗೃಹ ಸಚಿವಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ 4 ಕೊಲೆ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರು ಭಾಗಿಯಾಗಿರುವುದು ಸ್ಪಷ್ಠವಾಗಿದೆ. 
2020 ದಿನಾಂಕ 11 ಮತ್ತು 12ರ ರಾತ್ರಿ ನಡೆದ ಡಿ.ಜೆ.ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪಿಎಫ್‍ಐ ಸಂಘಟನೆಯ ಕೈವಾಡವಿರುವುದು ಕಂಡು ಬಂದು ಹೆಚ್ಚಿನ ತನಿಖೆಗಾಗಿ ರಾಜ್ಯ ಬಿಜೆಪಿ ಸರ್ಕಾರವು ಈ ಪ್ರಕರಣವನ್ನು ಎನ್‍ಐಎಗೆ ವಹಿಸಿತ್ತು. ಅದರ ಬೆನ್ನಲ್ಲೆ ಪಿಎಫ್‍ಐ ಸೇರಿ 9 ಸಂಘಟನೆಗಳನ್ನು ನಿಷೇಧಿಸಿದೆ. ಸೀಮಿ 16 ವರ್ಷಗಳ ಹಿಂದೆ ತಲೆ ಎತ್ತಿದ ಮೂಲಭೂತವಾದಿ ಸಂಘಟನೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದೆ. 2012ರಲ್ಲಿ ಕೇರಳದ ಉಮಾನ್‍ಚಾಂಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇರಳ ರಾಜ್ಯದಲ್ಲಿ “ಪಿಎಫ್‍ಐ” ಸಂಘಟನೆಗೆ ಬಯೋತ್ಪಾಧಕರ ಜೊತೆ ಸಂಬಂಧವಿದೆ ಎಂದು ಕೇಂದ್ರ ಸರ್ಕಾರಕ್ಕೆ ದೂರನ್ನು ನೀಡಿದ್ದರು. 2014ರಲ್ಲಿ ಕೇರಳದ ಎಡಪಂತೀಯ ಸರ್ಕಾರ ಕೇರಳ ಹೈ-ಕೋರ್ಟ್‍ನಲ್ಲಿ “ಪಿಎಫ್‍ಐ” ಸಂಘಟನೆಗೆ ಉಗ್ರವಾದಿಗಳ ಜೊತೆ ಸಂಬಂಧವಿದೆ ಎಂದು ಅಪಿಡವೇಟ್‍ಅನ್ನು ಸಲ್ಲಿಸಿರುತ್ತಾರೆ. ದುರ್ದೈವವೆಂದರೆ ಎಡಪಂಥೀಯ ಸೀತಾರಾಮ್ ಯೆಚೂರಿಯವರು ಮತ್ತು ಕಾಂಗ್ರೆಸ್ಸಿನ ವಕ್ತಾರರು “ಪಿಎಫ್‍ಐ” ಸಂಘಟನೆ ಉಗ್ರವಾದಿ ಸಂಘಟನೆ ಎನ್ನುವುದಕ್ಕೆ ಸಾಕ್ಷಿಯನ್ನು ಕೇಳುತ್ತಾರೆ. ಆದರೆ ಇಂದಿನ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಉತ್ತರ ಪ್ರದೇಶ, ಕರ್ನಾಟಕ,  ಗುಜರಾತ್ ಕೇರಳದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷವಾದ ಇಂಡಿಯನ್ ಯ್ಯೂನಿಯನ್ ಮುಸ್ಲಿಂ ಲೀಗ್ ಸ್ವಾಗತಮಾಡಿವೆ. ಆದರೆ ದುರ್ದೈವವೆಂದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯರವರು ಕೊಲೆಪಾತಕ ಪಿಎಫ್‍ಐ  ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದು ದೇಶದಲ್ಲಿ ಆರ್.ಎಸ್.ಎಸ್‍ನ್ನು ಕೂಡ ಬ್ಯಾನ್ ಮಾಡಬೇಕೆಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಬಲವಾಗಿ ಖಂಡಿಸುತ್ತದೆ. 
ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸಿದೆ. ಹಾಕಿದ ಕೇಂದ್ರಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ ಕರ್ನಾಟಕದ ಭಾ.ಜ.ಪಾ. ತುಂಬು ಹೃದಯದಿಂದ ಅಭಿನಂದನೆಗಳನ್ನು ಹೇಳಬಯಸುತ್ತದೆ.
2014ರಲ್ಲಿ ಭಾರತವು ಆರ್ಥಿಕವಾಗಿ ಯಾವುದೇ ಸಮಯದಲ್ಲಿ ಕುಸಿಯಬಹುದಾದ ಐದು ರಾಷ್ಟ್ರಗಳಲ್ಲಿ ಒಂದಾಗಿತ್ತು. ಅಂದರೆ “ದುರ್ಬಲ ಐದ”ರ ಭಾಗವಾಗಿತ್ತು. ನಮ್ಮ ದೇಶದ ಬ್ಯಾಂಕುಗಳು (ಎನ್‍ಪಿಎ, ರಾಜಕೀಯ ಒತ್ತಡಗಳಿಂದ) ಕಾರ್ಯ ನಿರ್ವಹಿಸದ ಸ್ವತ್ತುಗಳಾಗಿ ಮಾರ್ಪಟ್ಟು ಕೆಟ್ಟ ಸಾಲಗಳಾಗಿ ಒತ್ತಡಕ್ಕೆ ಒಳಗಾಗಿದ್ದವು. ಈ ಸಂದರ್ಭದಲ್ಲಿ ಹಣದುಬ್ಬರವು ಅತ್ಯಧಿಕವಾಗಿ, ಅಂದರೆ 13%ರಷ್ಟು, 22 ತಿಂಗಳುಗಳ ಕಾಲ ಎರಡಂಕಿಯಲ್ಲಿ ಸಾಗಿತ್ತು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ನಮ್ಮ ದೇಶವು ಆರ್ಥಿಕತೆಯನ್ನು ಸುಧಾರಿಸುವತ್ತ ಹಾಗೂ ಬಲಪಡಿಸುವತ್ತ ಗಮನಹರಿಸಿದೆ. “ಸುಲಭದ ಜೀವನ” (Ease of Living - ಬಡವರ ಕಲ್ಯಾಣ) ಮತ್ತು “ಸುಲಭದ ವ್ಯಾಪಾರ” (ಸಂಪತ್ತನ್ನು ಹೆಚ್ಚಿಸುವುದಕ್ಕೋಸ್ಕರ ವ್ಯಾಪಾರ ಮತ್ತು ವ್ಯವಹಾರಗಳಿಗೆ ಉತ್ತಮ ವಾತಾವರಣವನ್ನು ಸೃಷ್ಠಿಸುವುದತ್ತ ಕೇಂದ್ರ ಸರ್ಕಾರ ಗಮನ ಹರಿಸಿದೆ) ಬಡವರಿಗಾಗಿ ಮೂಲಭೂತ ಸೌಕರ್ಯದೊಂದಿಗೆ ಗೌರವಯುತ ಜೀವನ ನಡೆಸಲು ತ್ವರಿತ ಹಾಗೂ ಬೃಹತ್ ಪ್ರಮಾಣದಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. (12 ಕೋಟಿ ಶೌಚಾಲಯಗಳು, 44 ಕೋಟಿ ಜನ್-ಧನ್ ಖಾತೆಗಳು, 9 ಕೋಟಿ ಅಡುಗೆ ಅನಿಲ ಸಂಪರ್ಕ, 1200ಕ್ಕೂ ಹೆಚ್ಚು ಔಷಧಿಗಳೊಂದಿಗೆ 8,500 ಜನೌಷದಿಯ ಕೇಂದ್ರಗಳು, 50 ಕೋಟಿಗೂ ಹೆಚ್ಚು ಬಡವರಿಗೆ ವರ್ಷಕ್ಕೆ 5 ಲಕ್ಷರೂಗಳ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆಗಳಂತಹ ಕೆಲವು ಪರಿವರ್ತನಾ ಯೋಜನೆಗಳು) ಮತ್ತು ಎಲ್ಲಕ್ಕಿಂತ ಮುಖ್ಯವಾಗಿ 2 ವರ್ಷಗಳ ಕೋವಿಡ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯುಂದಲೂ “ತೀವ್ರ ಬಡತನ”ದಲ್ಲಿ ಇಳಿಕೆಯಾಗಿರುವುದನ್ನು ಖಚಿತಪಡಿಸಿದೆ.
ಈ ನಿಟ್ಟಿನಲ್ಲಿ ಭಾರತೀಯ ಆರ್ಥಿಕತೆಯು ಇಂದು 100 ಯುನಿಕಾರ್ನ್ ಸ್ಟಾರ್ಟ್‍ಅಪ್‍ಗಳೊಂದಿಗೆ ಪ್ರಬಲವಾದ ಆರ್ಥಿಕತೆಯಾಗಿ ಹೊರಹೊಮ್ಮಿದ್ದು ಯುನೈಟೆಡ್ ಕಿಂಗ್‍ಡಮ್‍ನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ. 5ಜಿ ಡಿಜಿಟಲ್ ವಾಣಿಜ್ಯೋದ್ಯಮ ನೆಟ್‍ವರ್ಕ್ ಸೂಪರ್ ಫಾಸ್ಟ್ ವಂದೇ ಭಾರತ್ ರೈಲುಗಳ ಪ್ರಾರಂಭ, ನೂತನ ಲಾಜಿಸ್ಟಿಕ್ಸ್ ನೀತಿಯು ದೇಶದ ಆರ್ಥಿಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ಈ ಹಿನ್ನೆಲೆಯಲ್ಲಿ ಭಾರತವು 2022-23ರ ಆರ್ಥಿಕ ವರ್ಷದ ನಾಲ್ಕು ತಿಂಗಳಿನಲ್ಲಿ 13% ಆರ್ಥಿಕ ಬೆಳವಣಿಕೆಯ ದರದೊಂದಿಗೆ ಸತತವಾಗಿ 7 ತಿಂಗಳುಗಳ ಕಾಲ 1.4 ಲಕ್ಷ ಕೋಟಿ ರೂ ಜಿಎಸ್‍ಟಿಯನ್ನು ಸತತವಾಗಿ ಸಂಗ್ರಹಿಸುತ್ತಿದ್ದು ಇದು ಭಾರತೀಯ ಆರ್ಥಿಕತೆಯ ಶಕ್ತಿಯನ್ನು ತೋರಿಸುತ್ತದೆ. ಭಾರತವು ಇಂದು 5ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾಗಿದ್ದು ಪ್ರಧಾನಿ ಶ್ರೀ ನರೆಂದ್ರ ಮೋದಿಯವರ ಸದೃಢ ಹಾಗೂ ನಿರ್ಣಾಯಕ ನಾಯಕತ್ವಕ್ಕಾಗಿ ನಾವು ಹೃತ್ಪೂರ್ವಕ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
2025-26ರ ವೇಳೆಗೆ ಭಾರತವು 5 ಟ್ರಿಲಿಯನ್ ಯುಎಸ್‍ಡಿ ಆರ್ಥಿಕತೆಯನ್ನು ತಲುಪುತ್ತದೆ ಹಾಗೂ 2030ರ ವೇಳೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ‘ಅಮೃತ ಕಾಲ’ ಧ್ಯೇಯದೊಂದಿಗೆ 10 ಟ್ರಿಲಿಯನ್ ಯುಎಸ್‍ಡಿ ಆರ್ಥಿಕತೆಯ ಮೈಲಿಗಲ್ಲಿನೊಂದಿಗೆ ಭಾರತವು “ಅಭಿವೃದ್ಧಿ ಹೊಂದಿದ ರಾಷ್ಟ್ರ”ವಾಗಿ ಹೊರಹೊಮ್ಮಲಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ರೈತ, ದಲಿತ ಹಾಗೂ ಶೋಷಿತರ ಏಳಿಗೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಲಿದ್ದು, ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವಲ್ಲಿ ಶ್ರಮಿಸುತ್ತಿದೆ. ಪಿ.ಎಸ್.ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದÀ ತಕ್ಷಣ ಸರ್ಕಾರವೇ ಸ್ವಯಂ ಪ್ರೇರಿತವಾಗಿ ತನಿಖೆಗೆ ಆದೇಶಿಸಿದೆ. ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ದಸ್ತಗಿರಿ ಮಾಡಿ ನೈತಿಕತೆಯನ್ನು ಪ್ರದರ್ಶಿಸಿದೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪರಿಕ್ಷೆ ಬರೆಯದೇ ಶಿಕ್ಷಕರಾಗಿ ನೇಮಕಗೊಂಡಿದ್ದನ್ನು ಪರಿಶೀಲಿಸಿ ಈವರೆಗೆ 80 ಕ್ಕೂ ಹೆಚ್ಚು ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಮಾಣದ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಬಹಳಷ್ಟು ಹಿಂದಿನಿಂದಲೇ ಈ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿರುತ್ತದೆ. ಸಿದ್ದರಾಮಯ್ಯನವರ ಸರ್ಕಾರ ಕೊಟ್ಟ ಕುಮ್ಮಕ್ಕಿನಿಂದಲೇ ಇಂತಹ ಅಧಿಕಾರಿಗಳು ಈ ಮಟ್ಟಕ್ಕೆ ಅಕ್ರಮ ಕೈಗೊಳ್ಳಲು ಸಾಧ್ಯವಾಗಿರುತ್ತದೆ. ಇಂತಹ ಅಕ್ರಮಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾದ ಕಾಂಗ್ರೆಸ್ ಸರ್ಕಾರವು ಇಂದು ಬೊಬ್ಬೆ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಬಿಜೆಪಿ ನೇತೃತ್ವದ ಸರ್ಕಾರವು ಇಂತಹ ಅಕ್ರಮಗಳನ್ನು ಸಂಪೂರ್ಣ ನಿಯಂತ್ರಿಸಲು ಬದ್ಧವಾಗಿದೆ. 
 ಕುಟೀರ ಜ್ಯೋತಿ – ಉಚಿತ ವಿದ್ಯುತ್ ಸರಬರಾಜು 75 ಯೂನಿಟ್‍ಗಳಿಗೆ ಏರಿಕೆ. 
 “ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ” ಯೋಜನೆಯಡಿ ರೂ. 250 ಕೋಟಿ ವೆಚ್ಚದಲ್ಲಿ 5 ಜಿಲ್ಲೆಗಳಲ್ಲಿ ತಲಾ 1,000 ಸಾಮಥ್ರ್ಯದ ವಿದ್ಯಾರ್ಥಿನಿಲಯ ಸಮುಚ್ಛಯಗಳ ನಿರ್ಮಾಣಕ್ಕೆ ಕ್ರಮ. 
 28.42ಲಕ್ಷ ರೈತರಿಗೆ ರೂ. 20,971.79 ಕೋಟಿ ಕೃಷಿ ಸಾಲ ವಿತರಣೆ. 
 ಯಶಸ್ವಿನಿ ಯೋಜನೆ ಮರುಜಾರಿಗೆ ಆದೇಶ ಹೊರಡಿಸಲಾಗಿದೆ. 
 ಹಾಲು ಉತ್ಪಾದಕರ ಅನುಕೂಲಕ್ಕೆ ಕ್ಷೀರಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಯೋಜನೆ. 
 ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ: ಬೆಂಗಳೂರು ನಗರದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ರೂ. 6,000 ಕೋಟಿ. 
 1,240 ಉಪನ್ಯಾಸಕರು, 15,000 ಶಾಲಾ ಶಿಕ್ಷಕರ ನೇಮಕಾತಿ. 
 “ನಮ್ಮ ಕ್ಲಿನಿಕ್ ಸ್ಥಾಪನೆ” 438 ನಗರ ಪ್ರದೇಶದ ಬಡ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಾಗಿ ಸ್ಥಾಪನೆಮಾಡಿ ಜನಪರ ಯೋಜನೆಗಳನ್ನು ನೀಡುವ ಮುಖೇನ ಅಭಿವೃದ್ಧಿ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಭಾರತೀಯ ಜನತಾಪಾರ್ಟಿಯು ರಾಜ್ಯಕಾರ್ಯಕಾರಿಣಿಯಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.
 ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವ 11,133 ಪೌರಕಾರ್ಮಿಕರನ್ನು ರಾಜ್ಯ ಸರ್ಕಾರ ಖಾಯಂ ಗೊಳಿಸಿರುವುದರಿಂದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತದೆ.

ನಿರ್ಣಯ – 2 
ಮೌಲ್ಯಾಧಾರಿತ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು ಜಾತಿ ಮತಗಳ ಹೆಸರಿನಲ್ಲಿ ದೇಶವನ್ನು ಛಿದ್ರಗೊಳಿಸಿ, ಭ್ರಷ್ಟಾಚಾರವನ್ನು ಬಿತ್ತಿ ಬೆಳೆಸಿದ ಕಾಂಗ್ರೆಸ್‍ನ ದೇಶ ವಿರೋಧಿ ಮಾನಸಿಕತೆಗೆ ಖಂಡನೆ 
ರಾಜ್ಯದಲ್ಲಿ 2013 ರಿಂದ 2018ರ ವರೆಗೆ ಅಧಿಕಾರ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾಗಿ ರೈತರಿಗೆ ಸಾವಿನ ಭಾಗ್ಯವನ್ನು ತಂದುಕೊಟ್ಟ ಸರ್ಕಾರವಾಗಿತ್ತು. ಸಿದ್ದರಾಮಯ್ಯನವರ ಸರ್ಕಾರವು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಲ್ಲದೇ, ಇಡೀ ದೇಶಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ತನಿಖಾ ಸಂಸ್ಥೆಯನ್ನು ದುರ್ಭಲಗೊಳಿಸಿ, ತನ್ನ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸಲು “ಎಸಿಬಿ” ಎಂಬ ತನಿಖಾ ಸಂಸ್ಥೆಯನ್ನು ಪ್ರಾರಂಭಿಸಿ, ರಾಜ್ಯದಲ್ಲಿ ಎಗ್ಗಿಲ್ಲದೇ ನಡೆದ ಭ್ರಷ್ಠಾಚಾರಕ್ಕೆ ಸಿದ್ದರಾಮಯ್ಯ ಮತ್ತು ಅವರ ಪಟಾಲಮ್ ಕಾರಣ. ಪರಿಶಿಷ್ಠ ಜಾತಿ ವಿದ್ಯಾರ್ಥಿ ನಿಲಯಗಳಿಗೆ ಖರೀದಿ ಮಾಡಿದ್ದ ಹಾಸಿಗೆ, ದಿಂಬು, ಚಂಬು, ತಟ್ಟೆ-ಲೋಟದಲ್ಲಿ ವ್ಯಾಪಕ ಭ್ರಷ್ಠಾಚಾರ. ಗಂಗಾ ಕಲ್ಯಾಣ ಯೋಜನೆಯಲ್ಲಿ ಪರಿಶಿಷ್ಠ ಜಾತಿಗೆ ನೀಡಬೇಕಿದ್ದ ಬೋರ್‍ವೆಲ್‍ಗಳ ಸೌಲಭ್ಯವನ್ನು ಬೋರ್‍ವೆಲ್ ಕೊರೆಸದೇ ಬಿಲ್ಲುಮಾಡಿಸಿ 100% ಅವ್ಯವಹಾರ ನಡೆಸಿದರು. ಇದರ ಬಗ್ಗೆ ತನಿಖೆಯನ್ನಾಗಲೀ ಅಥವಾ ಸದನ ಸಮಿತಿಯನ್ನಾಗಲೀ ನೇಮಿಸಲಿಲ್ಲ. ಸೋಲಾರ್ ಟೆಂಡರ್ ಹರಗರಣದಲ್ಲಿ ಅಂದಿನ ಇಂಧನ ಸಚಿವ ಇಂದಿನ ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರವರು ಭಾಗಿಯಾಗಿದ್ದರು, ಅದರ ಬಗ್ಗೆ ಸೊಲ್ಲೆತ್ತದ ಅರ್ಕಾವತಿ ಡಿನೋಟಿಪಿಕೇಷನ್ ಪ್ರಕರಣಕ್ಕೆ “ರೀಡು” ಎಂಬ ವ್ಯಾಖ್ಯಾನವನ್ನು ನೀಡಿ ಸಾವಿರಾರು ಕೋಟಿ ಅವ್ಯವಹಾರಕ್ಕೆ ಕಾರಣೀಭೂತರಾದ  ಸಿದ್ದರಾಮಯ್ಯ ಇಂದು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಕ್ಕೆ ಮತ್ತು ಸರ್ಕಾರಕ್ಕೆ ಅವಮಾನವಾಗುವ ರೀತಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ, ಯಾವುದೇ ಆಧಾರವೂ ಇಲ್ಲದೇ ರಸ್ತೆ-ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಿ ಸರ್ಕಾರದ ವಿರುದ್ಧ ರಾಜ್ಯದ ಗೌರವಕ್ಕೆ ಧಕ್ಕೆ ತಂದಿದ್ದಾರೆ. 
ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರಗಳು ಹಾಗೂ ನಿರ್ವಹಣೆಯನ್ನು ಇಡೀ ದೇಶವೇ ಮೆಚ್ಚ್ಚುವಂತೆ “ಇಂಡಿಯಾ ಟುಡೇ” ಸಂಸ್ಥೆ ರಾಜ್ಯ ಸರ್ಕಾರಕ್ಕೆ ಪ್ರಶಂಸೆಯನ್ನು ನೀಡಿದೆ. ಆದರೆ ಕೋವಿಡ್ ನಿರ್ವಹಣೆ ಬಗ್ಗೆ ಬಾಯಿಚಪಲಕ್ಕೆ ಅಪಪ್ರಚಾರ ಮಾಡಿದ ಸಿದ್ದರಾಮಯ್ಯ ಯಾವುದೇ ದಾಖಲೆಗಳೊಂದಿಗೆ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರ ಮುಸುಕಿನ ಗುದ್ದಾಟವನ್ನು ಮರೆಮಾಚಲು ಕರ್ನಾಟಕ ‘ಕಾಂಟ್ರಾಕ್ಟ್ ಅಸೋಸಿಯೇಷನ್’ ಸಂಘವನ್ನು ದುರುಪಯೋಗ ಪಡಿಸಿಕೊಂಡಿತ್ತು. ಗುತ್ತಿಗೆದಾರರ ಸಂಘ ಮಾಡಿದ ಆಪಾಧನೆ ವಿರುದ್ಧ ಈಗಾಗಲೇ ರಾಜ್ಯ ಸರ್ಕಾರದ ಸಚಿವರೊಬ್ಬರು ಸಂಘದ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 
ಸರ್ಕಾರದ ಮೇಲೆ ಮಾಡಿದ ಭ್ರಷ್ಟಾಚಾರದ ಆರೋಪದ ಬಗ್ಗೆ ಗುತ್ತಿಗೆದಾರರ ಸಂಘವಾಗಲೀ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಾಗಲೀ, ಕೆ.ಪಿ.ಸಿ.ಸಿ ಅಧ್ಯಕ್ಷರಾಗಲೀ ದಾಖಲೆ ಸಮೇತ ವಿಧಾನಸಭೆ ಅಧಿವೇಶನದಲ್ಲಾಗಲೀ ಅಥವಾ ತನಿಖಾ ಸಂಸ್ಥೆಗಳ ಎದುರಾಗಲೀ, ಸಾಕ್ಷಿಗಳ ಸಮೇತ ದಾಖಲೆಗಳನ್ನು ಸಲ್ಲಿಸಲಿಲ್ಲ. ಲೋಕಾಯುಕ್ತ ಎಂಬ ಭಲಿಷ್ಠ ತನಿಖಾ ಸಂಸ್ಥೆಯ ಶಕ್ತಿಯನ್ನು ಕುಗ್ಗಿಸಿ, ನಿಮ್ಮ ಮೂಗಿನ ನೇರಕ್ಕೆ ನಡೆಸಿಕೊಳ್ಳಲು ನೀವೇ ರಚನೆ ಮಾಡಿದ ಎಸಿಬಿಯನ್ನ ಕರ್ನಾಟಕ ಘನ ನ್ಯಾಯಾಲಯವು ರದ್ದು ಮಾಡಿ, ಮತ್ತೆ ಲೋಕಾಯುಕ್ತಕ್ಕೆ ಬಲ ತುಂಬಿದೆ ಈ ಹೈ-ಕೋರ್ಟ್ ತೀರ್ಪು ಭ್ರಷ್ಠಾಚಾರದ ಪಿತಾಮಹ, ಸಿದ್ದರಾಮಯ್ಯನವರಿಗೆ ಆದ ಚೀಮಾರಿ ಎಂದೇ ಭಾವಿಸಬೇಕು.
“ಹಾಸ್ಯಾಸ್ಪದವಾದ ಭಾರತ್ ಜೋಡೋ ಯಾತ್ರೆ”
ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಭಾರತದ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯ ಚಳುವಳಿ ಮಾಡಿ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆಹರುರವರ ಸ್ವಾರ್ಥ, ಕುಟಿಲತೆ ಮತ್ತು ಅಧಿಕಾರದ ಹಪಾಹಪಿಗಾಗಿ ಭಾರತವನ್ನು ಎರಡು ರಾಷ್ಟ್ರಗಳಾಗಿ ತುಂಡು ಮಾಡಿ ಪಾಕಿಸ್ತಾನವನ್ನು ಮುಸ್ಲಿಂರಾಷ್ಟ್ರ ಎಂದು ಘೋಷಿಸಿಕೊಂಡರು. ಭಾರತವನ್ನು ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿ, ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಜಾರಿಗೆ ತರುವ ಮೂಲಕ ಕಾಶ್ಮೀರಿ ಪಂಡಿತರನ್ನು ಬೀದಿಗೆ ಬೀಳುವಂತೆ ಮಾಡಿ ದೇಶದೊಳಗೆ ರಾಜ್ಯವನ್ನು ವಿಭಜಿಸುವ ಕೆಲಸ ಮಾಡಿದ ಕಾಂಗ್ರೆಸ್, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಜಾರಿಗೆ ತಂದು ಜಾತಿ/ಧರ್ಮಗಳ ನಡುವೆ ಸಮಾಜವನ್ನು ಒಡೆದು, ಕರ್ನಾಟಕದಲ್ಲಿ ಮತಾಂಧ “ಟಿಪ್ಪು ಜಯಂತಿ”ಯನ್ನು ಪ್ರಾರಂಭ ಮಾಡಿ ಭಯೋತ್ಪಾದಕ ಸಂಘಟನೆಗಳ ಪರನಿಂತ ಸಿದ್ದರಾಮಯ್ಯ, ಕೊಡಗಿನಲ್ಲಿ ಕುಟ್ಟಪ್ಪ ಎಂಬ ಕಾರ್ಯಕರ್ತನ ಕೊಲೆಗೆ ಕಾರಣೀಭೂತರಾದರು. ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಯ ಸಂದರ್ಭದಲ್ಲಿ ದೇಶಾದ್ಯಂತ ಕೋವಿಡ್ ಸಂದರ್ಭದಲ್ಲಿ ನಿಧನ ಹೊಂದಿದ ಕುಟುಂಬದ ಮಗುವಿನ ಕೈಯಲ್ಲಿ ಮಾಧ್ಯಮದ ಮುಂದೆ ಹೇಳಿಕೆ ಕೊಡಿಸುವ ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡ ವಿಷಯದ ಕುರಿತು ಸದಾ ಸುಮ್ಮನಿರುವುದು ಅವರ ಆಷಾಡಭೂತಿತನಕ್ಕೆ ಸಾಕ್ಷಿ. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸುವರ್ಣಸೌಧದ ಮುಂಭಾಗ ವಿಠ್ಠಲ್ ಅರಭಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ. ಮಂಡ್ಯದ ಪಾಂಡವಪುರದಲ್ಲಿ ಲಿಂಗೇಗೌಡ ಎಂಬ ರೈತ ತಾನು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಎಂದು ತಾನು ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಇಟ್ಟು ತಾನು ಸಹ ಆತ್ಮಹತ್ಯೆ ಮಾಡಿಕೊಂಡ. ಆದರೆ ಭಾರತ್‍ಜೋಡೋ ಯಾತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯಾವ ರೈತ ಕುಟುಂಬಕ್ಕೂ  ಕಾಂಗ್ರೆಸ್ ನಾಯಕರು ಭೇಟಿ ನೀಡಿ ಧೈರ್ಯ ಹೇಳಲಿಲ್ಲ. ಇದು ಭಾರತ್‍ಜೋಡೋ ಯಾತ್ರೆಯೋ ಅಥವಾ ಕಾಂಗ್ರೆಸ್ ಓಡೋ ಯಾತ್ರೆಯೋ.
ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರ ಸರ್ಕಾರ ಜಾತಿ ಮತಗಳ ನಡುವೆ ವೈಷಮ್ಯ ಮೂಡಿಸಿ, ಭ್ರಷ್ಟ ರಾಜಕಾರಣದ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ ಕಾಂಗ್ರೆಸ್‍ನ ಈ ಭ್ರಷ್ಟ ನೀತಿಯನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಲಾಗಿದೆ.


(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Post a Comment

Previous Post Next Post