*||ಪಿಬತ ಭಾಗವತಂ ರಸಮಾಲಯಂ||*

*||ಪಿಬತ ಭಾಗವತಂ ರಸಮಾಲಯಂ||*
✍️ಶ್ರೀ ಮದ್ಭಾಗವತದಲ್ಲಿ ಬರುವ ಅಷ್ಟಮ ಸ್ಕಂಧದಲ್ಲಿ  ಶಾಪರೂಪದಿಂದ ಗಜೇಂದ್ರ ನಾಗಿ ಜನಿಸಿದ ಇಂದ್ರದ್ಯುಮ್ನನ ಕಥೆ ಯನ್ನು ಕೇಳಿರುತ್ತೇವೆ.
*ಭಗವಂತನ ಭಕ್ತರಾದ ಮತ್ತು ಜ್ಞಾನಿಗಳಾದ ದೇವಲ ಋಷಿಗಳಿಗೆ ಮತ್ತು ಅಗಸ್ತ್ಯ ಮಹರ್ಷಿಗಳಿಗೆ ಮಾಡಿದ ಅಪಚಾರ ,ಅವರಿಂದ ಬಂದ ಶಾಪ ದಿಂದ ಅವನಿಗೆ ಆನೆಯ ಜನ್ಮ ಬಂದಿತ್ತು.*
*ನಂತರದಲ್ಲಿ ಆ ಶಾಪವನ್ನು ಭಗವಂತ ಕಳೆದ.*
ಮುಂದೆ ಬರುವ ಕತೆಯಲ್ಲಿ *ಸ್ವರ್ಗಕ್ಕೆ ಅಧಿಪತಿ ಯಾದ ದೇವೇಂದ್ರ ದೂರ್ವಾಸ ಋಷಿಗಳಿಗೆ ತೋರಿದ ಅನಾದರ,ಮತ್ತು ಅವರನ್ನು ಅವಮಾನಿಸಿದ ಪರಿಣಾಮ ತನ್ನ ಸ್ವರ್ಗದ ಸಂಪತ್ತು ಕಳೆದುಕೊಂಡರು.*
ಇಲ್ಲಿ ಶ್ರೀ ಮದ್ಭಾಗವತ ನಮಗೆ ಒಂದು ಸೂಕ್ಷ್ಮ ವಿಷಯ ತಿಳಿಸಿ ಕೊಡುತ್ತದೆ. 
*ಇಂದ್ರದ್ಯುಮ್ನನೋ ಮತ್ತು ದೇವೇಂದ್ರ ಯಾರಾದರೂ ಆಗಲಿ ದೊಡ್ಡವರು,  ಭಗವಂತನ ಭಕ್ತರಿಗೆ ಮತ್ತು ಜ್ಞಾನಿಗಳಿಗೆ ಮಾಡಿದ ಅಪಚಾರ ಅದರ ಫಲವನ್ನು ಅನುಭವಿಸಲೇಬೇಕು ಎಂದು.*
ಅವರು ದೊಡ್ಡವರು. *ಭಗವಂತನ ಅನುಗ್ರಹದಿಂದ ತಮ್ಮ ದೋಷವನ್ನು ಕಳೆದಕೊಂಡರು.*
*ನಾವು ಸಹ ತಿಳಿದೋ ತಿಳಿಯದೇ ದೊಡ್ಡವರು, ಜ್ಞಾನಿಗಳ, ಭಗವಂತನ ಭಕುತರಿಗೆ ಅಪಹಾಸ್ಯ, ಅವಮಾನ ಮಾಡಿರುತ್ತೇವೆ.ಇವುಗಳ ದೋಷವನ್ನು ಆ ಶ್ರೀಹರಿಯೇ ಕಳೆಯಬೇಕು ಎಂದು ಪ್ರಾರ್ಥನೆ ಮಾಡುತ್ತಾ*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post