ಡಾ. ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಕಾರ್ಯಕ್ರಮ ದಲ್ಲಿ ಸಿಎಂ
*ಯಶಸ್ಸು ಬಂದಾಗ ನಮ್ರತೆ ಹಾಗೂ ವಿನಯತೆ ಇರಲಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್.01 : ಯಶಸ್ಸು ಬಂದಾಗ ನಮ್ರತೆ ಹಾಗೂ ವಿನಯತೆಯಿಂದ ನಡೆದುಕೊಂಡರೆ ಅದು ಮುಂದಿನ ದಾರಿ ತೋರಿಸುತ್ತೆ. ಅಹಂ ಅಥವಾ ಗರ್ವ ಬಂದರೆ ಅದು ಯಶಸ್ಸಿನ ಅಂತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಡಾ. ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಪಿಎಸ್ಸಿ 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು.
ಅಧಿಕಾರ ಎಂದರೆ ಸುಲಭವಲ್ಲ. ಅಧಿಕಾರ ನಡೆಸುವಾಗ ಸ್ಥಿತಪ್ರಜ್ಞೆ ಮತ್ತು ಸಮಯ ಪ್ರಜ್ಞೆಯನ್ನು ಎಂದಿಗೂ ಮರೆಯಬಾರದು. ಜತೆಗೆ ಈ ಸ್ಥಾನಕ್ಕೆ ಬರಲು ಸಹಾಯ ಮಾಡಿದ ಯಾರನ್ನೂ ಮರೆಯಬಾರದು. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಟ್ಟಿಗೆ ಕೆಲಸ ಮಾಡಬೇಕು. ಕೆಲವೊಮ್ಮೆ ಇದರಿಂದ ಸಂಘರ್ಷವೂ ಆಗುತ್ತದೆ. ಆದರೆ ಸ್ಪಷ್ಟತೆ ಇದ್ದರೆ ಸಮಸ್ಯೆ ಬೇಗ ಬಗೆಹರಿಯುತ್ತದೆ ಎಂದು ಆಯ್ಕೆಯಾದ ಪ್ರೊಬೆಷನರ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
*ಸರ್ಕಾರದ ನಿರ್ಧಾರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉತ್ತಮ ಆಡಳಿತಗಾರರು ಮುಖ್ಯ*
ಅಧಿಕಾರಿಗಳು ಸರಿಯಾದ ಸಂದರ್ಭದಲ್ಲಿ ಜನಪರ ನಿರ್ಣಯಗಳನ್ನು ತೆಗೆದುಕೊಂಡಾಗ ಮಾತ್ರ ಒಳ್ಳೆಯ ಹೆಸರು ಬರುತ್ತದೆ. ಬಡವರಿಗೆ ಸಹಾಯ ಮಾಡಲು ಇದು ಒಳ್ಳೆಯ ಅವಕಾಶ. ಸಮಾಜದ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನು ನೆನಪು ಮಾಡಿಕೊಂಡು ನಿರ್ಣಯ ಮಾಡಿ. ಆಗ ಈ ರಾಜ್ಯ ಬಹಳಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಅಧಿಕಾರ ಇಲ್ಲದಿರುವ ಜನ ನಿಮ್ಮ ಕಚೇರಿ ಬಾಗಿಲಿಗೆ ಬಂದಾಗ ಸೌಜನ್ಯ - ಸಂಯಮದಿಂದ ನಡೆದುಕೊಳ್ಳಿ. ಸಮಸ್ಯೆಯಿಂದ ವಿಮುಖನಾಗದೇ ಅದನ್ನು ಎದುರಿಸಿ. ಅದು ಉತ್ತಮ ಆಡಳಿತಗಾರನ ಲಕ್ಷಣ. ಸರ್ಕಾರದ ನಿರ್ಧಾರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉತ್ತಮ ಆಡಳಿತಗಾರರು ಬಹಳ ಮುಖ್ಯ. ಅಂತಹ ಉತ್ತಮ ಆಡಳಿತಗಾರರನ್ನು ಈ ಅಕಾಡೆಮಿ ಕೊಡುತ್ತಿದೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಡಾ. ರಾಜ್ ಕುಮಾರ್ ದಂತಕಥೆ*
ಡಾ. ರಾಜ್ ಕುಮಾರ್ ಅವರು ಒಂದು ದಂತಕಥೆ. ರಾಜ್ ಕುಮಾರ್ ಅವರು ಕರ್ನಾಟಕದ ಕಣಕಣದಲ್ಲಿ ಜೀವಂತವಾಗಿದ್ದಾರೆ. ಅವರ ಜೀವನಮಾನದಲ್ಲಿ ನಾವೂ ಕೂಡ ಇದ್ದೆವು ಅನ್ನೋದೇ ನಮಗೆ ಹೆಮ್ಮೆಯ ವಿಚಾರ. ಅವರು ಎಲ್ಲಕ್ಕಿಂತ ಮೊದಲು ಶ್ರೇಷ್ಠ ಮಾನವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ರಾಜ್ ಕುಮಾರ್ ಕುಟುಂಬದ ಸದಸ್ಯರು ಅತ್ಯಂತ ಪ್ರಾಮಾಣಿಕವಾಗಿ ಅವರ ಹೆಸರಿಗೆ ಹಿರಿಮೆ ತರುವ ರೀತಿಯಲ್ಲಿ ಈ ಅಕಾಡೆಮಿ ನಡೆಸುತ್ತಿದ್ದಾರೆ. ಈ ಎಲ್ಲ ಕೆಲಸಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರ ಅಂತಃಸತ್ವ ಮತ್ತು ಎಂದೂ ಮರೆಯಲಾಗದ ನಮ್ಮ ಅಪ್ಪು ಪ್ರಮುಖ ಕಾರಣ ಎಂದರು. ಹೇಳಿದ ಮುಖ್ಯಮಂತ್ರಿಗಳು ಆಯ್ಕೆಯಾದ ಎಲ್ಲ ಪ್ರೊಬೆಷನರಿ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಸಾಧನೆಯ ಹಿಂದೆ ಬಹಳ ದೊಡ್ಡ ಶ್ರಮ ಇದೆ. ಸ್ಪರ್ಧೆಯ ಬಗ್ಗೆ ಚಿಂತೆ ಮಾಡಬಾರದು. ಅಂಥವರು ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಗುರಿ ಹಾಗೂ ದಾರಿಯ ಬಗ್ಗೆ ಲಕ್ಷ್ಯ ಕೊಟ್ಟರೆ ನಿಮ್ಮ ಗುರಿ ನೀವು ಮುಟ್ಟುತ್ತೀರಿ. ಇದಕ್ಕೆ ನಿಮಗೆ ಉತ್ತಮ ಉದಾಹರಣೆ ಎಂದರೆ ಡಾ ರಾಜ್ ಕುಮಾರ್. ಅವರ ಜೀವನದಲ್ಲಿ ಅಡ್ಡದಾರಿ ಇರಲಿಲ್ಲ. ಕಠಿಣ ಪರಿಶ್ರಮ ಪಟ್ಟು ಅವರು ಮೇರುನಟರಾದರು ಸಾಧನೆ ಮಾಡಿರುವ ನಿಮ್ಮ ಕಣ್ಣುಗಳಲ್ಲಿ ಭರವಸೆಯ ಮಿಂಚಿದೆ ಹಾಗೂ ಕಷ್ಟ ಪಟ್ಟು ಸಾಧನೆ ಮಾಡಿದ ನಮ್ಮದಿ ಕಾಣಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ ಶ್ರೀನಿವಾಸನ್, ಎಸ್ ವಿ ರಂಗನಾಥ್, ಐ ಎಂ ವಿಠಲ್ ಮೂರ್ತಿ, ಪ್ರಸ್ತುತ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. *ಕ್ರೀಡೆಯಿಂದ ಜೀವನದಲ್ಲಿ ಶಿಸ್ತು ಬೆಳೆಯುತ್ತೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 01: ಕ್ರೀಡೆಯಿಂದ ದೇಹದ ಆರೋಗ್ಯ ಚೆನ್ನಾಗಿರುತ್ತೆ ಹಾಗೂ ಶಿಸ್ತು ಬೆಳೆ ಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಮಲ್ಲೇಶ್ವರಂನ ಸೇನಾಪತಿ ಚಂದ್ರಶೇಖರ್ ಅಜಾದ್ ಆಟದ ಮೈದಾನದಲ್ಲಿ ಶ್ರೀ ನರೇಂದ್ರ ಮೋದಿಯವರ 72ನೇ ಜನ್ಮದಿನಾಚರಣೆ ಪ್ರಯುಕ್ತ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ “ನಮೋ ಕಿಸಾನ್ ಕಪ್ 2022” ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ “ಸೇನಾಪತಿ ಚಂದ್ರಶೇಖರ್ ಅಜಾದ್ ಕ್ರೀಡಾಂಗಣ” ಉದ್ಘಾಟನೆ ಮಾಡಿದ ಮುಖ್ಯಮಂತ್ರಿಗಳು, ನಮೋ (ನರೇಂದ್ರ ಮೋದಿ) ಹೆಸರಲ್ಲೇ ಸ್ಫೂರ್ತಿ ಇದೆ. ಇದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಬೆಳೆಸಿ ಎಂದು ಆಟಗಾರರಿಗೆ ಸಲಹೆ ನೀಡಿದರು. ನಮ್ಮ ಸರ್ಕಾರ ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೊಖೊ, ಕುಸ್ತಿ, ಎತ್ತಿನ ಗಾಡಿ ಓಟದ ಸ್ಪರ್ಧೆ ಮತ್ತು ಕರಾವಳಿ ಕಂಬಳವನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ವರೆಗೂ ಅಧಿಕೃತ ಮಾಡಿದೆ. ಎಲ್ಲರೂ ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ರವಿ ಕುಮಾರ್ ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
[ ಬೆಂಗಳೂರು, ಅಕ್ಟೋಬರ್ 01: *ವಾರ್ತಾ ಇಲಾಖೆ ನಿರ್ಮಿಸಿರುವ* ಚಿತ್ರಕ್ಕೆ *ರಾಷ್ಟ್ರೀಯ ರಜತ ಪ್ರಶಸ್ತಿ* ದೊರೆತಿರುವ ಬಗ್ಗೆ *ಮಾನ್ಯ* *ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ ಅವರು* *ಮಾತನಾಡಿದರು.
ಬೆಂಗಳೂರು, ಅಕ್ಟೋಬರ್ 01: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಡಾ. ರಾಜ್ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ ಕೆಪಿಎಸ್ಸಿ ಯ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭದಲ್ಲಿ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ನಿವೃತ್ತ ಐ.ಎ. ಎಸ್ ಅಧಿಕಾರಿಗಳಾದ ಐ.ಎಂ.ವಿಠಲ್ ಮೂರ್ತಿ, ಎಸ್.ವಿ.ರಂಗನಾಥ್,ಡಾ: ಶ್ರೀನಿವಾಸನ್ ಮೊದಲಾದವರು ಉಪಸ್ಥಿತರಿದ್ದರು.
[ ಬೆಂಗಳೂರು, ಅಕ್ಟೋಬರ್ 01: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* *ಡಾ. ರಾಜ್ಕುಮಾರ್* *ಸಿವಿಲ್ ಸರ್ವೀಸ್* ಅಕಾಡೆಮಿಯ ವತಿಯಿಂದ *ಜ್ಞಾನಜ್ಯೋತಿ ಸಭಾಂಗಣದಲ್ಲಿ* ಆಯೋಜಿಸಿರುವ *ಕೆಪಿಎಸ್ಸಿ ಯ* *2017-18ನೇ ಸಾಲಿನ* *ಗೆಜೆಟೆಡ್ ಪ್ರೊಬೇಷನರ್* ಪರೀಕ್ಷೆಯಲ್ಲಿ ಯಶಸ್ವಿಯಾದ *ಅಭ್ಯರ್ಥಿಗಳಿಗೆ ಅಭಿನಂದನಾ* *ಸಮಾರಂಭದಲ್ಲಿ ಪಾಲ್ಗೊಂಡು* ಮಾತನಾಡಿದರು.
ಬೆಂಗಳೂರು, ಅಕ್ಟೋಬರ್ 01: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ದುರ್ಗಾ ಪೂಜಾ ಸಮಿತಿಯ ವತಿಯಿಂದ ನಾಗವಾರದ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿರುವ ದಕ್ಷಿಣ ಭಾರತದ ಅತಿದೊಡ್ಡ ದುರ್ಗೋತ್ಸವ-2022ರ ಉದ್ಘಾಟನೆ ಮತ್ತು ಪೆವಿಲಿಯನ್ ಫಾರ್ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡದರು.
ಬೆಂಗಳೂರು ದುರ್ಗಾ ಪೂಜಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
.
Post a Comment