ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ರಾತ್ರಿ ed ಬಗ್ಗೆನೀಡಿದ ಪ್ರತಿಕ್ರಿಯೆ...

[07/10, 5:15 PM] Kpcc official: Interaction with educationists on National Education Policy
[07/10, 5:19 PM] Kpcc official: *ಮಾಜಿ ರಾಜ್ಯಸಭಾ ಸದಸ್ಯರಾದ ರಾಜೀವ್ ಗೌಡ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*

ರಾಜೀವ್ ಗೌಡ:

ರಾಹುಲ್ ಗಾಂಧಿ ಅವರು ಇಂದು ಶಿಕ್ಷಣ ತಜ್ಞರ ಜತೆ ಸಭೆ ನಡೆಸಿದ್ದು, ಹಲವು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಶಿಕ್ಷಕಿಯರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಗೂ ಎನ್ ಇಪಿ ಜಾರಿ ನಂತರ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ತೊಂದರೆಗಳ ವಿಚಾರವನ್ನು ರಾಹುಲ್ ಗಾಂಧಿ ಅವರ ಮುಂದೆ ಪ್ರಸ್ತಾಪಿಸಿದರು.

ನ್ಯಾಷನಲ್ ಲಾ ಸ್ಕೂಲ್ ಪ್ರಾಧ್ಯಪಕರು ಮಾತನಾಡಿ ಎನ್ಇಪಿ ಜಾರಿ ನಂತರ ಮೂರು ಸಮಸ್ಯೆಗಳು ಎದುರಾಗಿದ್ದು, ಕೋಮುವಾದಿಕರಣ, ವಾಣಿಜ್ಯಕರಣ ಹಾಗೂ ಕೇಂದ್ರಿಕರಣದಿಂದ ಕಳೆದ 75 ವರ್ಷಗಳಲ್ಲಿ ನಮ್ಮ ದೇಶದ ಶಿಕ್ಷಣ ಕ್ಷೇತ್ರದ ಅಡಿಪಾಯ ನಾಶವಾಗುತ್ತಿದೆ. ಕೋಮುವಾದದ ವಿಷಬೀಜವನ್ನು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. 

ನಮ್ಮ ರಾಜ್ಯದ ಪಠ್ಯಪುಸ್ತಕದಲ್ಲಿ ಸಾರ್ವಕರ್ ವಿಚಾರವಾಗಿ ಇದ್ದ ಪಾಠದಲ್ಲಿ ಬುಲ್ ಬುಲ್ ಹಕ್ಕಿ ಮೇಲೆ ಕೂತು ತಾಯ್ನಾಡನ್ನು ಸಂದರ್ಶಿಸುತ್ತಿದ್ದರು ಎಂಬಂತಹ ಕಟ್ಟು ಕಥೆಗಳು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ವಿಚಾರವೂ ಚರ್ಚೆ ಆಯಿತು. ಈ ರೀತಿ ಮಾಡುತ್ತಿರುವುದೇಕೆ ಎಂದು ಕೇಳಿದಾಗ, ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಹೊಸ ಹೊಸ ಪುರಾಣಗಳನ್ನು ಸೃಷ್ಟಿಸಿ ಅವರು ನಂಬುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಿಗೆ ಪ್ರಾಮುಖ್ಯತೆ ನೀಡಲು ಇಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆರ್ ಎಸ್ಎಸ್ ಗೆ ಆರ್ಥಿಕ ನೆರವು ಹೇಗೆ ಬರುತ್ತಿದೆ ಎಂದು ಕೇಳಿದಾಗ ಅದಕ್ಕೆ ಸರಿಯಾದ ದಾಖಲೆಗಳು ಇಲ್ಲವಾಗಿದೆ. ಆದರೆ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಸಾರ್ವಜನಿಕ ಶಾಲೆಗಳಿಗೆ ಹೋಗಬೇಕಾದ ಅನುದಾನಗಳು ಆರ್ ಎಸ್ಎಸ್ ಶಆಲೆಗಳಿಗೆ ನೀಡಲಾಗುತ್ತಿದೆ ಎಂಬ ವಿಚಾರ ಚರ್ಚೆ ಆಯಿತು. ಕೋವಿಡ್ ಸಮಯದಲ್ಲಿ ಶಾಲೆ ಮುಚ್ಚಿರುವ ಪ್ರಮಾಣದಲ್ಲಿ ದೇಶವೇ ಮೊದಲು. ಈ ಸಂದರ್ಭದಲ್ಲಿ ಶ್ರೀಮಂತರ ಮಕ್ಕಳು ಶಿಕ್ಷಣ ಪಡೆದರು, ಬಡವರು 2 ವರ್ಷ ಶಿಕ್ಷಣದಿಂದ ದೂರವಾಗಿದ್ದರು. ಈ ಮಕ್ಕಳು ಹೇಗೆ ತಮ್ಮ ಶಿಕ್ಷಣದ ಕೊರತೆ ನೀಗಿಸುತ್ತಾರೆ, ಇದಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರಗಳು ಚರ್ಚೆ ಆಗಿವೆ.

ಮಂಡ್ಯ ಮೂಲದ ಶಿಕ್ಷಕಿ ಮಾತನಾಡಿ, ಪೋಷಕರು ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳತ್ತ ಹೆಚ್ಚಿನ ಒಲವು ತೋರಿದ್ದು, ಅವರ ಪ್ರಕಾರ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಅನುದಾನ, ಶಿಕ್ಷಕರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ಬಡವರು ಕೂಡ ಖಾಸಗಿ ಶಾಲೆಗಳತ್ತ ಮುಖಮಾಡಿದ್ದಾರೆ ಎಂದರು. ಇದಕ್ಕೆ ಪರಿಹಾರ ಏನು ಎಂದು ಕೇಳಿದಾಗ ಉತ್ತರಿಸಿದ ರಾಹುಲ್ ಗಾಂಧಿ ಅವರು, ಸರ್ಕಾರಗಳು ಅನುದಾನಗಳನ್ನು ಹೆಚ್ಚಿಸಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ವಿಚಾರ ಸೇರಿಸುತ್ತೇವೆ. ಸರ್ಕಾರದಿಂದ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಐಐಟಿಗಳೆಲ್ಲವೂ ಸರ್ಕಾರದ ಕಾಲೇಜುಗಳಾಗಿವೆ. ಸರ್ಕಾರ ಮನಸ್ಸು ಮಾಡಿದರೆ ಉತ್ತಮ ಶಿಕ್ಷಣ ನೀಡಬಹುದು ಎಂದರು.

ಇನ್ನು ಈಗಿನ ಪರಿಸ್ಥಿತಿಯಲ್ಲಿ ಉಳ್ಳವರಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ಸಿಗುತ್ತಿದ್ದು, ಬಡವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಹಿಂದುಳಿಯುತ್ತಿದ್ದಾರೆ ಎಂದು ಚರ್ಚಿಸಲಾಯಿತು. ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಿ ಸಮಾನ ಶಿಕ್ಷಣ ನೀಡುವಂತೆ ಮಾಡಬೇಕು ಎಂಬ ಒತ್ತಾಯ ಮಾಡಲಾಯಿತು. ಇದನ್ನು ಒಪ್ಪಿದ ರಾಹುಲ್ ಗಾಂಧಿ 1947ರಿಂದ ನಮ್ಮ ಶಿಕ್ಷಣ ನೀತಿಗಳ್ಲ್ಲಿ ಸಮಾನ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಮುಂದೆಯೂ ಈ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗಿದ್ದು, ಈ ಬಗ್ಗೆ ಜನರಲ್ಲಿ ಅವಿರವು ಮೂಡಿಸಬೇಕು ಎಂದು ತಿಳಿಸಿದರು.

ಇನ್ನು ಮಹಿಳೆಯರ ವಿಚಾರ, ಹಿಜಾಬ್ ವಿವಾದದಿಂದ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುವ ಪ್ರಯತ್ನ, ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಪಠ್ಯ ಕೋಮುವಾದದಿಂದ ತುಂಬುವುದರ ವಿರುದ್ಧ ಚರ್ಚೆ ಮಾಡಿದರು.

ಕಡೆಯದಾಗಿ ರಾಹುಲ್ ಗಾಂಧಿ ಅವರು ಮಾತನಾಡಿ, ಇದು ಚಿಕ್ಕ ಚರ್ಚೆ ಮಾಡಿದ್ದೇವೆ ಅಷ್ಟೇ. ಇನ್ನುಮುಂದೆ, ನಮ್ಮ ರಾಜ್ಯದ ಪ್ರಣಾಳಿಕೆ, ಹಾಗೂ ರಾಷ್ಟ್ರ ಪ್ರಣಾಳಿಕೆಗಳಲ್ಲಿ ನಿಮ್ಮ ಅಭಿಪ್ರಾಯ ಸಂಗ್ರಹಿಸಿ ಜನರ ಪ್ರಣಾಳಿಕೆ ಮಾಡಲಾಗುವುದು ಎಂದರು.


*ಪ್ರಿಯಾಂಕ್ ಖರ್ಗೆ:*  

ಇಂದು ಸಂವಾದಕ್ಕೆ ಆಗಮಿಸಿದ್ದ ಶಿಕ್ಷಣ ತಜ್ಞರು ಶಿಕ್ಷಣ ಕ್ಷೇತ್ರದ ತುರ್ತುಪರಿಸ್ಥಿತಿಯಲ್ಲಿ ಆಗುತ್ತಿರುವ ಮೂರು C ವಿಚಾರಗಳನ್ನು ಪ್ರಸ್ತಾಪಿಸಿದರು. ಅವುಗಳೆಂದರೆ ಕಮ್ಯುನಲೈಸೇಷನ್, ಸೆಂಟ್ರಲೈಸೇಷನ್, ಕಮರ್ಷಿಯಲೈಸೇಷನ್ ವಿಚಾರವನ್ನು ತಿಳಿಸುತ್ತಾರೆ.

ಪಠ್ಯ ಪುಸ್ತಕ ಪಿರಿಷ್ಕರಣೆ ಹೆಸರಲ್ಲಿ ಮಾಡಿರುವ ಅವಾಂತರ ಹೇಗಿದೆ ಎಂದು ನಿಮಗೆ ಗೊತ್ತಿದೆ. ಇತಿಹಾಸ ತಿರುಚುವುದು, ತತ್ವಜ್ಞಾನಿಗಳಿಗೆ ಅಪಮಾನ, ವೈಜ್ಞಾನಿಕತೆ ಬಿಟ್ಟು ಪಠ್ಯಗಳ ಸೇರ್ಪಡೆ ವಿರುದ್ಧ ಧ್ವನಿ ಎತ್ತಿದರು.

ಈ ಸಂವಾದದಲ್ಲಿ ಭಾಗಿಯಾಗಿದ್ದವರು ಒಂದು ಮಾತು ಹೇಳಿದರು. ನಮಗೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿಲ್ಲ. ಆದರೂ ಈ ಯಾತ್ರೆಯಲ್ಲಿ ಭಾಗವಹಿಸಿರುವುದು ಏಕೆ ಎಂದರೆ, ನಾವು ಸಂವಿಧಾನ ಉಳಿಸಬೇಕಾದರೆ, ಅದು ಶಾಲೆಗಳಿಂದ ಆರಂಭವಾಗಬೇಕು. ಶಾಲೆಯಲ್ಲಿ ಯಾರೂ ಜಾತಿ, ಧರ್ಮ ಕೇಳುವುದಿಲ್ಲ. ಎಲ್ಲರೂ ಒಟ್ಟಾಗಿ ಆಟವಾಡಿ ಪಾಠ ಕಲಿಯುತ್ತಾರೆ. ಆದರೆ ಇತ್ತೀಚಿನ ಕೇಸರಿಕರಣದ ಪರಿಣಾಮ ಪ್ರಗತಿಪರವಾಗಿದ್ದ ಕರ್ನಾಟಕಕ್ಕೆ ಧಕ್ಕೆಯಾಗುತ್ತದೆ. ಇಲ್ಲಿ ಯುಪಿ ಮಾದರಿ ಜಾರಿಗೆ ತಂದರೆ ಅದು ರಾಜ್ಯದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ತಿಳಿಸಿದರು.

ಕೇಸರಿ ಶಾಲು ಹಾಗೂ ಹಿಜಾಬ್ ವಿವಾದದಿಂದ 22 ಸಾವಿರ ವಿದ್ಯಾರ್ಥಿಗಳು ಇಂದು ಶಾಲೆ ತ್ಯಜಿಸಿದ್ದಾರೆ. ಇನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗುತ್ತಿರುವ ಅನುದಾನ ಚರ್ಚೆ ಆಯಿತು. ಇನ್ನು 13 ಸಾವಿರ ಶಾಲೆಗಳ ಒಕ್ಕೂಟ ರುಪ್ಸಾ ಸಂಸ್ಥೆ ನೋಂದಣಿಯಾಗಿರುವ ಸಂಸ್ಥೆಯಾಗಿದ್ದು, ಈ ಸಂಸ್ಥೆ 40% ಸರ್ಕಾರದ ವಿರುದ್ಧ ದೂರು ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಇದೇ ರುಪ್ಸಾ ಅವರ ಸಲಹೆ ಕೇಳಿ ಮಕ್ಕಲಿಗೆ ಪಾಠ ಮಾಡುತ್ತಿದ್ದ ಸರ್ಕಾರ, ಇವರಿಂದ 40% ಕಮಿಷನ್ ಕೇಳಲು ಮುಂದಾಯಿತು. ಈ ಬಗ್ಗೆ ಸಂಸ್ಥೆಯವರು ಪ್ರಧಾನಮಂತ್ರಿಗೆ ಪತ್ರ ಬರೆದಾಗ ಈ ಸಂಸ್ಥೆಯ ಅಢಿಯಲ್ಲಿರುವ ಎಲ್ಲ ಶಾಲೆಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ನಾವು ಗ್ರಾಮೀಣ ಪ್ರದೇಶದಲ್ಲಿ ಬಡವರು, ಹಿಂದುಳಿದವರು, ದಲಿತರ ಮಕ್ಕಲಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈಗ ನಮ್ಮ ಶಾಲೆಗಳಿಗೆ ನೊಟೀಸ್ ನೀಡಿ ಬಂದ್ ಮಾಡಿಸಲು ಮುಂದಾಗಿದ್ದಾರೆ. ಆಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಇನ್ನು ಕನ್ನಡದ ಅಸ್ಮಿತೆ ಬಗ್ಗೆ ರಾಹುಲ್ ಗಾಂಧಿ ಅವರ ಜತೆ ಚರ್ಚೆ ಆಯಿತು. ಆಗ ರಾಹುಲ್ ಗಾಂಧಿ ಅವರು ಪ್ರತಿಯೊಬ್ಬರಿಗೂ ಅವರ ಮಾತೃಭಾಷೆ ಮುಖ್ಯ. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ. ಹೀಗಾಗಿ ಹಿಂದಿ ರಾಷ್ಟ್ರ ಭಾಷೆ ಮಾಡಿ ನಿಮ್ಮ ಭಾಷೆ ಅಸ್ಮಿತೆಗೆ ಧಕ್ಕೆ ಮಾಡುವ ಉದ್ದೇಶ ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. 

ಶಿಕ್ಷಣ ಹಕ್ಕು ಕಾಯ್ದೆ ವಿಚಾರವಾಗಿಯೂ ಚರ್ಚೆ ಮಾಡಲಾಗಿದ್ದು, ಈ ಮುನ್ನ 1.5 ಲಕ್ಷ ಮಂದಿ ಇದರ ಲಾಭ ಪಡೆಯುತ್ತಿದ್ದರು. ಈಗ ಇದು ನಿರ್ಣಾಮವಾಗಿದ್ದು ಶೇ.9ರಷ್ಟು ಜನರು ಇದರ ಲಾಭ ಪಡೆಯುತ್ತಿಲ್ಲ. ಈಗ ಕೇವಲ 15 ಸಾವಿರ ಜನ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಆಗ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದರ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸುತ್ತೇವೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾದ ಕಾಳಜಿ ವಹಿಸಬೇಕು. ಅನುದಾನ ಹೆಚ್ಚಳ ನೀಡುವುದು, ವಿದ್ಯಾರ್ಥಿಗಲಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಬಗ್ಗೆ ರಾಜೀವ್ ಗೌಡ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಈ ಎಲ್ಲರ ಸಲಹೆ ಪಡೆದು ರಾಜ್ಯದಲ್ಲಿ ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ.   

*ಪ್ರಶ್ನೋತ್ತರ:*
ಎನ್ ಇಪಿ ಮಾರ್ಪಾಡಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣಕ್ಕೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಾಠಗಳನ್ನು ಕಲಿಸಬೇಕು’ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಈ ಎನ್ಇಪಿ ವಿಚಾರವಾಗಿ ಕೇಂದ್ರ ಸರ್ಕಾರ ಸದನದಲ್ಲಿ ಚರ್ಚೆ ಮಾಡಿಲ್ಲ. ನಾಗ್ಪುರದ ಸಿದ್ಧಾಂತವನ್ನು ಇಲ್ಲಿಗೆ ತಂದು ಹಾಕಿದ್ದಾರೆ’ ಎಂದರು.

ಕಾಂಗ್ರೆಸ್ ಸರ್ಕಾರ ಬಂದರೆ ಎನ್ ಇಪಿ ರದ್ದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಶಿಕ್ಷಣವು ಕೇಂದ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ರಾಜ್ಯದ ವಿಚಾರ. ಹೀಗಾಗಿ ನಮ್ಮ ಸರ್ಕಾರ ಬಂದರೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು. ನಂತರ ಮಾತನಾಡಿದ ಜೈರಾಮ್ ರಮೇಶ್ ಅವರು ‘ನಮ್ಮ ಸರ್ಕಾರ ಬಂದರೆ ಈ ಎನ್ಇಪಿಯ ಪ್ರತಿ ಪದವನ್ನು ರದ್ದು ಮಾಡಲಾಗುವುದು’ ಎಂದರು.

ನಂತರ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ರಾಜ್ಯ ಸರ್ಕಾರ ಎನ್ ಇಪಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವತಃ ಸರ್ಕಾರವೇ ಈ ಎನ್ಇಪಿಗೆ ರಾಜ್ಯ ಸಿದ್ಧವಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರಲು ಹಲವು ವರ್ಷಗಳು ಬೇಕಿದೆ ಎಂದು ಹೇಳಿದೆ. ಕೆಲವು ಮಂತ್ರಿಗಳು ಈ ಎನ್ಇಪಿ ಜಾರಿ ಮಾಡಿದರೆ ನಾಗ್ಪುರದವರನ್ನು ಮೆಚ್ಚಿಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದು ಮಂತ್ರಿಗಳ ಅನುಕೂಲಕ್ಕೆ ಹೊರತು, ವಿದ್ಯಾರ್ಥಿಗಳಿಗೆ ಅಲ್ಲ’ ಎಂದರು.

ಆರ್ ಎಸ್ಎಸ್ ನವರು 5 ವಿವಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಚಾಣಕ್ಯ ವಿವಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿವಿಗೆ ಕಡಿಮೆ ಬೆಲೆಗೆ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಸದನದಲ್ಲಿ ನಮಗೆ ಸಂಖ್ಯಾಬಲದ ಕೊರತೆಯಿಂದ ಇದನ್ನು ತಡೆಯಲು ಆಗಲಿಲ್ಲ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಬೇಕಾದರೆ ಕಾಂಗ್ರೆಸ್ ಪಕ್ಷವೇ ಉತ್ತಮ ಆಯ್ಕೆ’ ಎಂದರು.

ಈ ವೇಳೆ ಎನ್ಇಪಿ ವಿಚಾರವಾಗಿ ಮಾತನಾಡಿದ ಜೈರಾಮ್ ರಮೇಶ್ ಅವರು, ‘1996ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. ಅಲ್ಲಿ ಎಲ್ಲ ವರ್ಗದವರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು ಶಿಕ್ಷಣದ ಖಾಸಗಿಕರಣ ಬಹಳ ಅಪಾಯಕಾರಿ’ ಎಂದರು.

ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯು ತನ್ನ ವರದಿ ನೀಡಿ ಎರಡೂವರೆ ವರ್ಷವಾಗಿದೆ. ಸಮಿತಿ ವರದಿ ಮೇಲೆ ಮತ್ತೊಂದು ಸಮಿತಿ ಮಾಡಿರುವುದು ಕಾಲಹರಣದ ಪ್ರಯತ್ನವಲ್ಲದೇ ಬೇರೆನೂ ಅಲ್ಲ’ ಎಂದು ತಿಳಿಸಿದರು.
[07/10, 6:01 PM] Kpcc official: *ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*

ಪಿಎಫ್ ಐ ಸದಸ್ಯರ ವಿರುದ್ಧ ಪ್ರಕರಣಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ಹಿಂಪಡೆದಿತ್ತು ಎಂದು ಬಿಜೆಪಿ ನಾಯಕರು ತಲೆಬುಡ ಇಲ್ಲದ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಸಿ.ಟಿ.ರವಿ, ನಳೀನ್ ಕುಮಾರ್ ಕಟೀಲ್, ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಬಿಜೆಪಿ ಸರ್ಕಾರದ ಸಂಪುಟ ಸಚಿವರು ಸುಳ್ಳಿನ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆ ಮೂಲಕ ಪಿಎಫ್ ಐ ಬೆಳೆಸಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ಉತ್ತರ ಕುಮಾರರ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಬಿಜೆಪಿಯವರು ಇಂತಹ ಆರೋಪ ಮಾಡುವ ಮುನ್ನ ಪಿಎಫ್ಐ ಸಂಘಟನೆ ಕೈವಾಡವಿದ್ದ ಯಾವ ಪ್ರಕರಣವನ್ನು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಹಿಂಪಡೆಯಲಾಗಿತ್ತು ಎಂದು ದಾಖಲೆಯನ್ನು ಬಹಿರಂಗಪಡಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇವೆ.

ನಾನು ಇತ್ತೀಚೆಗೆ ಪಡೆದ ಆರ್ ಟಿಐ ಮಾಹಿತಿ ಪ್ರಕಾರ 2013-14ನೇ ಸಾಲಿನಿಂದ 2022 ಜನವರಿವರೆಗೂ ಹಿಂಪಡೆದಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದೆ. 251 ಪುಟಗಳ ದಾಖಲಾತಿಯನ್ನು ಸರ್ಕಾರ ಒದಗಿಸಿದೆ. ಅದರ ಮಾಹಿತಿ ಪ್ರಕಾರ, 2015ರಲ್ಲಿ ಸುಮಾರು 135 ಪ್ರಕರಣಗಳಲ್ಲಿ ಚಸ್ಲಿಮಾ ಲೇಖಕಿ ಅವರ ಪ್ರಕರಣ ಹಿಂಪಡೆಯಲಾಗಿತ್ತು. 2015ರಲ್ಲಿ ವಿಜಯಪುರ ಹಾಗೂ ಸದಾಶಿವನಗರದಲ್ಲಿ ದೇವರಾಜ ಅರಸು ಅವರ ಪ್ರತಿಮೆ ದ್ವಂಸ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದಾಗ ದಾಖಲೆಯಾದ ಪ್ರಕರಣ ಹಿಂಪಡೆಯಲಾಗಿತ್ತು.

2015ರಲ್ಲಿ ಒಟ್ಟು 45 ಕೇಸ್ ಹಿಂಪಡೆದಿದ್ದು, 2015ರಲ್ಲೇ ಟೊಯೋಟಾ ಕಿರ್ಲೋಸ್ಕರ್ ವಾಜಗೊಂಡ ನೌಕರರ ವಿರುದ್ಧದ ಪ್ರಕರಣ ಹಿಂಪಡೆದಿದ್ದೇವೆ. 2015ರಲ್ಲಿ ಸಾಹಿತಿ ಮೇಲೆ ಕೇಸ್ ಹಿಪಡೆಯಲಾಗಿತ್ತು, ಹೊನ್ನಾಳೆಯಲ್ಲಿ ರೈತರ ಮೇಲಿನ ಪ್ರಕರಣ, ದಲಿತ ಸಂಘರ್ಷ ಸಮಿತಿ, ಎನ್ಎಸ್ ಯುಐ ಸದಸ್ಯರ ಮೇಲಿನ ಪ್ರಕರಣ, ಎಸ್ ಇಪಿಎಂ ಕಾರ್ಯಕರ್ತರು ಮಡೆಸ್ನಾನ ವಿರುದ್ಧ ಮಾಡಿದ್ದ ಪ್ರತಿಭಟನೆ ಪ್ರಕರಣ, ಹಿಂದೂ ಮುಸ್ಲಿಂ ಕೋಮು ಗಲಭೆ ಸಂಬಂಧಿಸಿದಂತೆ ಪ್ರಕರಣ ಹಿಂಪಡೆಯಿದ್ದು, ಈ ಎಲ್ಲ ಪ್ರಕರಣ ಬಿಜೆಪಿ ಸರ್ಕಾರ ಅವಧಿಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕರ ಹೋರಾಟ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ ಪ್ರಕರಣ, ವಿದ್ಯುತ್ ಸ್ಥಾವರ ವಿರೋಧಿಸಿ ನಡೆದ ಪ್ರತಿಭಟನೆ ವಿರುದ್ಧದ ಪ್ರಕರಣ, ರೈತರ ಪ್ರತಿಭಟನೆ ಪ್ರಕರಣ, ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸಿ ಮಾಡಿದ ಪ್ರತಿಭಟನೆ ಪ್ರಕರಣಗಳನ್ನು ನಮ್ಮ ಸರ್ಕಾರದಲ್ಲಿ ಹಿಂಪಡೆಯಲಾಗಿತ್ತು.

ಸಮ್ಮಿಶ್ರ ಸರ್ಕಾರ ಸೇರಿದಂತೆ ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 294 ಪ್ರಕರಣಗಳನ್ನು ಹಿಂಪಡೆಯಲಾಗಿದ್ದು, ಈ ಪ್ರಕರಣಗಳಲ್ಲಿ ಹಿಂದೂ ಮುಸ್ಲಿಂ ಗಲಭೆಯಲ್ಲಿ ಕೇವಲ ವ್ಯಕ್ತಿಗಳ ಮೇಲೆ ಆರೋಪ ಇತ್ತೇ ಹೊರತು ಯಾವುದೇ ಸಂಘಟನೆಗಳ ಹೆಸರು ಪ್ರಸ್ತಾಪ ಆಗಿರಲಿಲ್ಲ. ರೈತರು, ಕಳಸಾ ಬಂಡೂರಿ, ಸಾರ್ವಜನಿಕರು, ಪೌರಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣ ಹಿಂಪಡೆಯಲಾಗಿದೆಯೇ ಹೊರತು ಕಾಂಗ್ರೆಸ್ ಸರ್ಕಾರ ಪಿಎಫ್ಐಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಹಿಂಪಡೆದಿಲ್ಲ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 269 ಪ್ರಕರಣಗಳನ್ನು ಹಿಂಪಡೆದಿದ್ದು, ಅದರಲ್ಲಿ 2019ರಲ್ಲಿ ಹುಣಸೂರಿನಲ್ಲಿ ಹನುಮಜಯಂತಿ ವಿಚಾರ ಹಾಗೂ ಇತರೆ ಸಂಘ ಪರಿವಾರಕ್ಕೆ ಸೇರಿದಂತೆ 61 ಪ್ರಕರಣ ಹಿಂಪಡೆಯಲಾಗಿದೆ. ಟಿಪ್ಪು ಗಲಾಟೆ ಸಂಬಂಧಿಸಿದಂತೆ 21 ಪ್ರಕರಣ, ಇತರೆ 6, ಸಾರ್ವಜನಿಕ ಗಲಭೆ 11, ಕೋಮುಗಲಭೆ 8 ಪ್ರಕರಣ ಸೇರಿದಂತೆ 2020ರಲ್ಲಿ ಒಟ್ಟು 46 ಪ್ರಕರಣ ಹಿಂಪಡೆಯುತ್ತಾರೆ. ಹೀಗೆ ಒಟ್ಟು ಸಂಘಪರಿವಾರಕ್ಕೆ ಸೇರಿದ 100ಕ್ಕೂ ಹೆಚ್ಚು ಪ್ರಕರಣ ಹಿಂಪಡೆದಿದ್ದಾರೆ. 

ಇದೆಲ್ಲವೂ ಸರ್ಕಾರ ನೀಡಿರುವ ಮಾಹಿತಿ. ನಮ್ಮ ಅವಧಿಯಲ್ಲಿ ಪಿಎಫ್ಐ ವಿರುದ್ಧದ ಪ್ರಕರಣ ಹಿಂಪಡೆದಿಲ್ಲ. ಹಿಂಪಡೆದಿದ್ದರೆ, ಅವರು ಕೊಟ್ಟಿರುವ ದಾಖಲೆಯಲ್ಲಿ ಅವರ ಪ್ರಕರಣಗಳು ಇರಬೇಕಿತ್ತು. ಪಿಎಫ್ಐ ವಿರುದ್ಧ ಯಾವ ಪ್ರಕರಣವನ್ನು ನಾವು ಹಿಂಪಡೆದಿದ್ದೇವೆ ಎಂದು ಬಿಜೆಪಿ ನಾಯಕರು ತೋರಿಸಲಿ. ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿರುವ ಬಿಜೆಪಿ ತನ್ನ ಆರೋಪ ಹಿಂಪಡೆಯಬೇಕು. ಅವರು ದಾಖಲೆ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಲು ಬಯಸುತ್ತೇನೆ. ನಮ್ಮ ಪಕ್ಷ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಬಿಜೆಪಿಯವರಿಗೆ ಸುಳ್ಳು ಹೇಳದಿದ್ದರೆ, ತಿಂದದ್ದು ಜೀರ್ಣವಾಗುವುದಿಲ್ಲ. ಸುಳ್ಳು ಎಂಬುದು ಅವರ ರಕ್ತದ ಕಣ ಕಣಗಳಲ್ಲಿ ಬೆರೆತಿದೆ. ಇನ್ನಾದರೂ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ, ದಾಖಲೆ ಇಟ್ಟು ಮಾತನಾಡುವುದನ್ನು ಕಲಿಯಲಿ.
[07/10, 9:59 PM] Kpcc official: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ರಾತ್ರಿ ನೀಡಿದ ಪ್ರತಿಕ್ರಿಯೆ...
[07/10, 10:39 PM] Kpcc official: *ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನೀಡಿದ ಮಾಧ್ಯಮ ಪ್ರತಿಕ್ರಿಯೆ*

ಇ.ಡಿ. ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದಾರೆ. ನಾನು ಸಮಯಾವಕಾಶ ಕೋರಿದ್ದೇನೆ. 

ಯಂಗ್ ಇಂಡಿಯಾ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ಅವರು ಮಾಹಿತಿ ಕೇಳಿದರು. ಜವಾಹರಲಾಲ್ ನೆಹರು ಹಾಗೂ ಗಾಂಧಿ ಅವರ ಕಾಲದಲ್ಲಿ ನಮ್ಮ ಮುಖಂಡರು ಮಾಡಿರುವ ಸಂಸ್ಥೆಗಳಿಗೆ ನಾವು ಹಣ ನೀಡಿದ್ದೇವೆ ಎಂದು ಹೇಳಿದ್ದೇವೆ. ಅವರು ನೀವು ಹಣ ಯಾಕೆ ಕೊಟ್ಟಿರಿ? ಹೇಗೆ ಕೊಟ್ಟಿರಿ? ಅದರ ಮೂಲ ಏನು ಎಂದು ಕೇಳಿದ್ದಾರೆ.

ರಾಜಕಾರಣವನ್ನು ಫೀಲ್ಡ್ ನಲ್ಲಿ ಮಾಡಬೇಕೇ ಹೊರತು ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ಭಾರತ ಜೋಡೋ ಪಾದಯಾತ್ರೆ  ನಿಮಿತ್ತ ರಾಹುಲ್ ಗಾಂಧಿ ಅವರು ನಮ್ಮ ಭಾಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಇವತ್ತು ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಇವತ್ತೇ ಈ ವಿಚಾರಣೆ ಮಾಡುವ ಅಗತ್ಯ ಏನಿತ್ತು? ನಾನು ಅ. 23 ರ ನಂತರ ಯಾವುದೇ ದಿನ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಸಮಯ ಕೇಳಿದ್ದರೂ ಅವಕಾಶ ನೀಡಲಿಲ್ಲ. ಇವತ್ತೇ ಹಾಜರಾಗುವಂತೆ ಸೂಚಿಸಿದ್ದರು.

Post a Comment

Previous Post Next Post