ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ*|*ದಾಸವರ್ಯರಿಗೊಂದಿಪೆ*||

[17/01, 4:43 AM] vijayavitthala blr: *||ಲೇಸಾಗಿ ಭಜಿಸುವೆ ಗೋಪಾಲ ದಾಸರ||*
✍️ಒಮ್ಮೆ ಶ್ರೀ ಭಾಗಣ್ಣ ದಾಸರು ತಮ್ಮ ಸಹೋದರ ರಾದ ಶ್ರೀ ಶೀನಪ್ಪದಾಸರನ್ನು ಕರೆದು *"ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆ ಯನ್ನು ಮಾಡಿ ಅವನ ಅನುಗ್ರಹ ವನ್ನು ಪಡೆದುಕೊಂಡು ಬಾ"* ಎಂದು ಕಳುಹಿಸಿದರು.
ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ
*ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ..*.
ತಕ್ಷಣ ವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.
*ಆಚಾರ್ಯರು  ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದ ರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು..*
ಇದೇ ವೇಳೆಗೆ
 *ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲ ದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ತತ್ಪರರಾಗಿ ಕುಳಿತಿದ್ದರು.*.
*ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು..*.
*ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು..*
*ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ..!!*. *ಅವರ ಎದುರು ಗಡೆ ಶ್ರೀ ಗೋಪಾಲ ದಾಸರು ಬಂದು ನಿಂತು  ಬೆಂಕಿ ಹತ್ತಿದ ವಸ್ತ್ರಕ್ಕೆ  ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು..*.
*ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ!!ಭಾಗಣ್ಣಾ!!ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು..*.
ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ.
ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಬಹು ಭಕ್ತಿ ಇಂದ ಅವರಿಗೆ ನಮಸ್ಕಾರ ಮಾಡುತ್ತಾರೆ.
*ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲ ದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ನಂದಿಸಿಬಂದದ್ದು..*
ಮತ್ತು 
*ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತುಇರುವುದು* 
ಇವು ದಾಸರ ಅಣಿಮಾದಿ ಸಿದ್ದಿಯ ಸಾಧನೆಯನ್ನು ತೋರಿಸುತ್ತದೆ.
*ಸಾಂಶರಾದ ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.*
*ಸಾಂಶರು ಅಂದರೆ ಏಕಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು..*.
ಇಂತಹ ಮಹಿಮೆಯನ್ನು *ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲ ದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ..*.
👇👇
*ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು*|
*ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು*||
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|*
*ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ*|
🙏ಶ್ರೀ ಕೃಷ್ಣಾಯ ನಮಃ🙏
[18/01, 9:27 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
ಸಕಲರಿಗು ಹರಿದಿನದ ನಮನಗಳು.🙏🙏
*ದಿತಿಜ ಬಾಲರಿಗೆಲ್ಲ ತತ್ತ್ವದಿ*| *ಮತಿಯ ಪುಟ್ಟಿಸಿ ನಿತ್ಯದಲಿ*| 
*ಶ್ರೀ ಪತಿಯೆ ಸರ್ವೋತ್ತಮನೆಂಬೀ ಜ್ಞಾನ ಬೋದಿಸಿದೆ.*||
*✍️ಸದಾಕಾಲ ಭಗವಂತನ ಮನೋಹರವಾದ ಕತೆಗಳನ್ನು ಶ್ರದ್ಧೆಯಿಂದ ಶ್ರವಣ ಮಾಡಬೇಕು. ಹರಿಕಥೆ ಎಂಬ ಅಮೃತವನ್ನು ನಿತ್ಯ ಪಾರಾಯಣ ಮಾಡಬೇಕು.* *ಭಗವಂತನ ಅನಂತ ಗುಣ ಮತ್ತು ಕ್ರಿಯೆಗಳನ್ನು ಸದಾ ಹಾಡಿ ಹೊಗಳಬೇಕು.ಅವನ ಲೀಲೆಗಳನ್ನು ಸದಾ ಸ್ಮರಿಸುತ್ತಾ ಇರಬೇಕು.ಭಗವಂತನ ಪ್ರತಿಕಗಳಾದ ವಿಗ್ರಹಗಳು, ಗ್ರಂಥಗಳನ್ನು ಅವುಗಳನ್ನು ದರ್ಶನ,ಅಧ್ಯಯನ, ಭಜನೆ ಮೊದಲಾದ ಎಲ್ಲಾ ರೀತಿಯಲ್ಲಿ ಅವನ ಆರಾಧನಾ ಮಾಡಬೇಕು.* *ಇವುಗಳನ್ನು ಹೊರತುಪಡಿಸಿ ದರೆ ಅವನಲ್ಲಿ ಭಕ್ತಿ ಬರುವದು ಅಸಾಧ್ಯ.*
*ಶ್ರೀ ಹರಿ ಸರ್ವತ್ರ ವ್ಯಾಪ್ತ.ಭಗವಂತನ ಚಲ ಪ್ರತಿಮೆ ಗಳಾದ ಸಾಧು ಸಜ್ಜನರನ್ನು ಆದರಿಸುವದು ,ಅವರ ಮೂಲಕ ದೇವರ ಸೇವೆ ಸಿಕ್ಕಿದೆ ಎಂದು ಭಾವನೆ ಇಂದ ಸೇವಿಸುವುದು ಇದೇ ಮೊದಲಾದ ಕಾರ್ಯಗಳಿಂದ ಭಗವಂತ ಪ್ರೀತಿ ಯಾಗುತ್ತಾನೆ.*
ದೈತ್ಯ ಬಾಲಕರಿಗೆ ಶ್ರೀ ಪ್ರಹ್ಲಾದ ರಾಜರ ಉಪದೇಶ.
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|
*|ಏಳಿರೋ ವೈಕುಂಠಕೆ|*
🙏ಶ್ರೀ ಕೃಷ್ಣಾಯ ನಮಃ🙏
[21/01, 5:32 AM] vijayavitthala blr: *ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ*|
*ದಾಸವರ್ಯರಿಗೊಂದಿಪೆ*||
*ನಾರಾಯಣನ ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ ಹರುಹಿದ*|
*ದಾಸ ವರ್ಯರಿಗೊಂದಿಪೆ*|
*ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ*||
*✍️ದಾಸರೆಂದರೆ ಪುರಂದರ ದಾಸರಯ್ಯ*
ಇಂದು ಅವರ ಆರಾಧನಾ ದಿನ..
ಪುರಂದರಗಡದಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮಮ್ಮ ಎನ್ನುವ ದಂಪತಿಗಳಿಗೆ
 ಅವರ ಮಗನಾಗಿ ಜನಿಸಿ ಶ್ರೀನಿವಾಸ ಎಂಬ ನಾಮದಿಂದ ಪ್ರಸಿದ್ಧಿ ಯಾದರು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅರಮನೆಗೆ ವಜ್ರ ವೈಡೂರ್ಯ ಮುಂತಾದ ಆಭರಣಗಳನ್ನು ನೇರವಾಗಿ ಮಾರಾಟ ಮಾಡುವದು ಇವರ ವೃತ್ತಿ.
ಆಭರಣಗಳನ್ನು ಹೆಚ್ಚಿನ ಬೆಲೆಯನ್ನು ನಮೂದಿಸಿ ಮಾರಾಟ ಮಾಡುತ್ತಾ ಇದ್ದರಿಂದ ನವಕೋಟಿ ನಾರಾಯಣ ಎನ್ನುವ ಹೆಸರು ಬಂತು.
*ದ್ರವ್ಯದ ಸಂಬಂಧವನ್ನು ಇವರಿಂದ ಕಡಿದು ಹಾಕುವುದಕ್ಕೆ ಶ್ರೀ ಹರಿ ವೃದ್ದ ಬ್ರಾಹ್ಮಣ ನಾಗಿ ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ ಹಣ ಕೇಳುವ ದಕ್ಕೆ ಯಾಚಕನಂತೆ ಆರು ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ.*
ಆದರು ಅವರು ಕೊಡಲಿಲ್ಲ. ‌ಭಗವಂತ ಬಿಡಲಿಲ್ಲ.
ಕೊನೆಗೆ  ಶೀನಪ್ಪ ನಾಯಕರಿಗೆ ಬೇಸರವಾಗಿ ಸವಕಳಿ ಹೊಂದಿದ ನಾಣ್ಯಗಳು ಇರುವ ಚೀಲವನ್ನು ಭಗವಂತನ ಮುಂದೆ ಹಾಕಿ ಇದರಲೊಂದು ದುಡ್ಡು ತೆಗೆದುಕೊಂಡು ಹೋಗು ಅಂತ ಹೇಳಿದರು.
ಭಗವಂತನು ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ ನೇರವಾಗಿ ಅವರ ಪತ್ನಿಯಾದ ಸರಸ್ವತಿ ಬಾಯಿಯ ಬಳಿ ದ್ರವ್ಯ ಸಹಾಯವನ್ನು ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ ಬಳಿ ಇದ್ದ ಮುತ್ತಿನ ಮೂಗುತಿಯನ್ನು ಭಗವಂತನಿಗೆ ದಾನ ಮಾಡುತ್ತಾಳೆ.
ಮತ್ತೆ  ಆ ಮೂಗುತಿಯನ್ನು ಮಾರಾಟ ಮಾಡಲು ಅವರ ಅಂಗಡಿಗೆ ಭಗವಂತನು ಹೋದಾಗ,ಇದು ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ ಬಂದು ಅಲ್ಲಿ ಅಂಗಡಿಯಲ್ಲಿ ಆ ಬ್ರಾಹ್ಮಣ ರೂಪಿ ಪರಮಾತ್ಮನನ್ನು ಕೂಡಿಸಿ ಆ ಮುತ್ತಿನ ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದು ಹೆಂಡತಿಗೆ ಕೇಳಿದಾಗ
*ಆ ಹೆಣ್ಣು ಮಗಳು ದಾನ ಕೊಟ್ಟ ವಿಷಯ ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು*!!
*ದಾನ ಮಾಡಿದ್ದು ಗೊತ್ತಾಗಬಾರದು.ಈ ರೀತಿಯಲ್ಲಿ ಅಪಮಾನ ಆಗುವದರ ಬದಲು ಸಾಯುವದೇ ಮೇಲೆಂದು ವಿಷವನ್ನು ಕುಡಿಯಲು ಬಟ್ಟಲು ಎತ್ತಿದಾಗ ಶ್ರೀ ಹರಿ ಅದರಲ್ಲಿ ಮೂಗುತಿ ಹಾಕುತ್ತಾನೆ.*. ತಕ್ಷಣ ತಮ್ಮ ಪತಿಗೆ ಬಂದು ತೋರಿಸಲು, ಅದನ್ನು ತೆಗೆದುಕೊಂಡು ಅಂಗಡಿಗೆ ಬಂದಾಗ ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ ಇರುವದಿಲ್ಲ.ಮತ್ತುಬ್ರಾಹ್ಮಣ ಸಹ ಮಾಯವಾಗಿದ್ದ.
*ಬಹು ಸೋಜಿಗದಿಂದ ಹೆಂಡತಿಗೆ ಕೇಳಿದಾಗ ನಡೆದ ಸಂಗತಿ ತಿಳಿದು, ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ ಕುಟುಂಬ ಸಮೇತರಾಗಿ ಪಂಡರಾಪುರಕ್ಕೆ ಬರುತ್ತಾರೆ.* ಪಾಂಡುರಂಗ ನ ಬಳಿ ಬಂದಾಗ ಸ್ವಪ್ನದಲ್ಲಿ ವಿಠ್ಠಲ ಬಂದು 
*ವಿಜಯನಗರ ದಲ್ಲಿ ಇರುವ  ಶ್ರೀವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ  ಅಂಕಿತ ತೆಗೆದುಕೊಂಡು ನನ್ನ ದಾಸನಾಗು* ಎಂದು ಸೂಚಿಸಲು
*ವಿಜಯನಗರ ಕ್ಕೆ ಬಂದು ಗುರು ವ್ಯಾಸರಾಯರಿಂದ *ಪುರಂದರ ವಿಠ್ಠಲ*  ಎಂಬ ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ.
*ಒಟ್ಟು ೪,೭೫,೦೦೦ಕೃತಿಗಳನ್ನು ದಾಸರು ರಚಿಸಿದ್ದಾರೆ*.
೫ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ. ಆದರೇನು ಮಾಡುವದು.ಹರಿ ಇಚ್ಚೆ. ಉಳಿದ ೨೫,೦೦೦ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವ ಪತಿಗೆ ಮುಂದಿನ ಜನ್ಮ ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ.
ಅವರೇ ಮುಂದೆ ಶ್ರೀವಿಜಯದಾಸರಾಗಿ ಅವತರಿಸಿ ಅದನ್ನು ಸಂಪೂರ್ಣಗೊಳಿಸುತ್ತಾರೆ.
ಶ್ರೀಪುರಂದರ ದಾಸರು ತಮ್ಮ *ಕೊನೆಯ ಕಾಲದಲ್ಲಿ ವಿಜಯನಗರ ದಲ್ಲಿ ವಾಸವಾಗಿದ್ದು ಶಾ.ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.*.
🙏ಶ್ರೀ ಕೃಷ್ಣಾರ್ಪಣಮಸ್ತು🙏
*ರಾಯರ ಭಾಗ್ಯವಿದು ಪುರಂದರ ರಾಯರ ಭಾಗ್ಯವಿದು*|
*ಶ್ರೀಯರಸನ ಪ್ರಿಯ ಪುರಂದರ ರಾಯರ ಭಾಗ್ಯವಿದು*||
*ನಾರದ ಮುನಿ ಕರದಲಿ ವೀಣಾ ಧಾರಿಯಾಗಿ ಧರಾತಳದೊಳಗೆ*|
*ಶ್ರೀ ರಮಣನ ವಿಸ್ತರಾ ಮಹಿಮೆಯನು*|
*ಬೀರುತ ಭವ ಮಂದಿರ ಪೊಕ್ಕಾ*||

*ದಾಸೋತ್ತಮರ ವಿಶೇಷ ಮಹಿಮೆಗಳ*
*ನೇಸು ಜನ್ಮದಿ ಪೇಳಲೊಶವಲ್ಲ*|
*ವಾಸುದೇವ ಪ್ರಾಣೇಶ ವಿಠ್ಠಲ*|
*ಪ್ರಕಾಶಿಪ ಮನದಲ್ಲಿ ಇವರ ನಂಬಿದರೆ*||
🙏ಶ್ರೀ ಕಪಿಲಾಯ ನಮಃ🙏
[21/01, 5:34 AM] vijayavitthala blr: *ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ*|
*ದಾಸವರ್ಯರಿಗೊಂದಿಪೆ*||
*ನಾರಾಯಣನ ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ ಹರುಹಿದ*|
*ದಾಸ ವರ್ಯರಿಗೊಂದಿಪೆ*|
*ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ*||
*✍️ದಾಸರೆಂದರೆ ಪುರಂದರ ದಾಸರಯ್ಯ*
ಇಂದು ಅವರ ಆರಾಧನಾ ದಿನ..
ಪುರಂದರಗಡದಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮಮ್ಮ ಎನ್ನುವ ದಂಪತಿಗಳಿಗೆ
 ಅವರ ಮಗನಾಗಿ ಜನಿಸಿ ಶ್ರೀನಿವಾಸ ಎಂಬ ನಾಮದಿಂದ ಪ್ರಸಿದ್ಧಿ ಯಾದರು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅರಮನೆಗೆ ವಜ್ರ ವೈಡೂರ್ಯ ಮುಂತಾದ ಆಭರಣಗಳನ್ನು ನೇರವಾಗಿ ಮಾರಾಟ ಮಾಡುವದು ಇವರ ವೃತ್ತಿ.
ಆಭರಣಗಳನ್ನು ಹೆಚ್ಚಿನ ಬೆಲೆಯನ್ನು ನಮೂದಿಸಿ ಮಾರಾಟ ಮಾಡುತ್ತಾ ಇದ್ದರಿಂದ ನವಕೋಟಿ ನಾರಾಯಣ ಎನ್ನುವ ಹೆಸರು ಬಂತು.
*ದ್ರವ್ಯದ ಸಂಬಂಧವನ್ನು ಇವರಿಂದ ಕಡಿದು ಹಾಕುವುದಕ್ಕಾಗಿ ಮತ್ತು ಮುಂದೆ ಇವರಿಂದ ಅನೇಕ ಸುಜೀವಿಗಳ ಉದ್ದಾರ ಮಾಡಲೋಸುಗವಾಗಿ ಶ್ರೀ ಹರಿಯು ತಾನು ವೃದ್ದ ಬ್ರಾಹ್ಮಣನ ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ ಹಣ ಕೇಳುವ ದಕ್ಕೆ ಯಾಚಕನಂತೆ ಆರು ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ.*
*ಆದರು ಅವರು ಕೊಡಲಿಲ್ಲ. ‌ಭಗವಂತ ಬಿಡಲಿಲ್ಲ.*
ಕೊನೆಗೆ  ಶೀನಪ್ಪ ನಾಯಕರಿಗೆ ಬೇಸರವಾಗಿ ಸವಕಳಿ ಹೊಂದಿದ ನಾಣ್ಯಗಳು ಇರುವ ಚೀಲವನ್ನು ಭಗವಂತನ ಮುಂದೆ ಹಾಕಿ ಇದರಲೊಂದು ದುಡ್ಡು ತೆಗೆದುಕೊಂಡು ಹೋಗು ಅಂತ ಹೇಳಿದರು.
ಭಗವಂತನು ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ ನೇರವಾಗಿ ಅವರ ಪತ್ನಿಯಾದ ಸರಸ್ವತಿ ಬಾಯಿಯ ಬಳಿ ದ್ರವ್ಯ ಸಹಾಯವನ್ನು ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ ಬಳಿ ಇದ್ದ ಮುತ್ತಿನ ಮೂಗುತಿಯನ್ನು ಭಗವಂತನಿಗೆ ದಾನ ಮಾಡುತ್ತಾಳೆ.
ಮತ್ತೆ  ಆ ಮೂಗುತಿಯನ್ನು ಮಾರಾಟ ಮಾಡಲು ಅವರ ಅಂಗಡಿಗೆ ಭಗವಂತನು ಹೋದಾಗ,ಇದು ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ ಬಂದು ಅಲ್ಲಿ ಅಂಗಡಿಯಲ್ಲಿ ಆ ಬ್ರಾಹ್ಮಣ ರೂಪಿ ಪರಮಾತ್ಮನನ್ನು ಕೂಡಿಸಿ ಆ ಮುತ್ತಿನ ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದು ಹೆಂಡತಿಗೆ ಕೇಳಿದಾಗ
*ಆ ಹೆಣ್ಣು ಮಗಳು ದಾನ ಕೊಟ್ಟ ವಿಷಯ ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು*!!
*ದಾನ ಮಾಡಿದ್ದು ಗೊತ್ತಾಗಬಾರದು.ಈ ರೀತಿಯಲ್ಲಿ ಅಪಮಾನ ಆಗುವದರ ಬದಲು ಸಾಯುವದೇ ಮೇಲೆಂದು ವಿಷವನ್ನು ಕುಡಿಯಲು ಬಟ್ಟಲು ಎತ್ತಿದಾಗ ಶ್ರೀ ಹರಿ ಅದರಲ್ಲಿ ಮೂಗುತಿ ಹಾಕುತ್ತಾನೆ.*. ತಕ್ಷಣ ತಮ್ಮ ಪತಿಗೆ ಬಂದು ತೋರಿಸಲು, ಅದನ್ನು ತೆಗೆದುಕೊಂಡು ಅಂಗಡಿಗೆ ಬಂದಾಗ ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ ಇರುವದಿಲ್ಲ.ಮತ್ತುಬ್ರಾಹ್ಮಣ ಸಹ ಮಾಯವಾಗಿದ್ದ.
*ಬಹು ಸೋಜಿಗದಿಂದ ಹೆಂಡತಿಗೆ ಕೇಳಿದಾಗ ನಡೆದ ಸಂಗತಿ ತಿಳಿದು, ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ ಕುಟುಂಬ ಸಮೇತರಾಗಿ ಪಂಡರಾಪುರಕ್ಕೆ ಬರುತ್ತಾರೆ.* ಪಾಂಡುರಂಗ ನ ಬಳಿ ಬಂದಾಗ ಸ್ವಪ್ನದಲ್ಲಿ ವಿಠ್ಠಲ ಬಂದು 
*ವಿಜಯನಗರ ದಲ್ಲಿ ಇರುವ  ಶ್ರೀವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ  ಅಂಕಿತ ತೆಗೆದುಕೊಂಡು ನನ್ನ ದಾಸನಾಗು* ಎಂದು ಸೂಚಿಸಲು
*ವಿಜಯನಗರ ಕ್ಕೆ ಬಂದು ಗುರು ವ್ಯಾಸರಾಯರಿಂದ *ಪುರಂದರ ವಿಠ್ಠಲ*  ಎಂಬ ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ.
*ಒಟ್ಟು ೪,೭೫,೦೦೦ಕೃತಿಗಳನ್ನು ದಾಸರು ರಚಿಸಿದ್ದಾರೆ*.
೫ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ. ಆದರೇನು ಮಾಡುವದು,ಶ್ರೀಹರಿ ಇಚ್ಚೆ. ಉಳಿದ ೨೫,೦೦೦ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವ ಪತಿಗೆ ಮುಂದಿನ ಜನ್ಮ ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ.
ಅವರೇ ಮುಂದೆ ಶ್ರೀವಿಜಯಪ್ರಭುಗಳಾಗಿ ಅವತರಿಸಿ ಅದನ್ನು ಸಂಪೂರ್ಣಗೊಳಿಸುತ್ತಾರೆ.
ಶ್ರೀಪುರಂದರ ದಾಸರು ತಮ್ಮ *ಕೊನೆಯ ಕಾಲದಲ್ಲಿ ವಿಜಯನಗರ ದಲ್ಲಿ ವಾಸವಾಗಿದ್ದು ಶಾ.ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.*.
🙏ಶ್ರೀ ಕೃಷ್ಣಾರ್ಪಣಮಸ್ತು🙏
*ರಾಯರ ಭಾಗ್ಯವಿದು ಪುರಂದರ ರಾಯರ ಭಾಗ್ಯವಿದು*|
*ಶ್ರೀಯರಸನ ಪ್ರಿಯ ಪುರಂದರ ರಾಯರ ಭಾಗ್ಯವಿದು*||
*ನಾರದ ಮುನಿ ಕರದಲಿ ವೀಣಾ ಧಾರಿಯಾಗಿ ಧರಾತಳದೊಳಗೆ*|
*ಶ್ರೀ ರಮಣನ ವಿಸ್ತರಾ ಮಹಿಮೆಯನು*|
*ಬೀರುತ ಭವ ಮಂದಿರ ಪೊಕ್ಕಾ*||

*ದಾಸೋತ್ತಮರ ವಿಶೇಷ ಮಹಿಮೆಗಳ*
*ನೇಸು ಜನ್ಮದಿ ಪೇಳಲೊಶವಲ್ಲ*|
*ವಾಸುದೇವ ಪ್ರಾಣೇಶ ವಿಠ್ಠಲ*|
*ಪ್ರಕಾಶಿಪ ಮನದಲ್ಲಿ ಇವರ ನಂಬಿದರೆ*||
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post