ಜನವರಿ 21, 2023 | , | 1:55PM |
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಆಧಾರವಾಗಲಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ದೇಶದಲ್ಲಿರುವ ಪ್ರತಿಭಾವಂತರ ಬಳಗದ ಕುರಿತು ಮಾತನಾಡಿದ ಡಾ.ಜಿತೇಂದ್ರ ಸಿಂಗ್, ನಮ್ಮ ದೇಶದಲ್ಲಿ ಯಾವತ್ತೂ ಪ್ರತಿಭೆಗಳಿಗೆ ಕೊರತೆ ಇರಲಿಲ್ಲ. ಜನರ ಸಾಮರ್ಥ್ಯ ಮತ್ತು ಉತ್ಸಾಹ ಕೂಡ ಕಡಿಮೆ ಇರಲಿಲ್ಲ, ಆದರೆ ಬಹುಶಃ ಆಗ ಹೆಚ್ಚು ಅನುಕೂಲಕರ ವಾತಾವರಣ ಇರಲಿಲ್ಲ ಆದರೆ ಈಗ ವಾತಾವರಣ ಬದಲಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ವೈಜ್ಞಾನಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರೋತ್ಸಾಹಿಸುವುದಲ್ಲದೆ ಹೊಸ ಪ್ರಯೋಗಗಳನ್ನು ನಿರಂತರವಾಗಿ ಉತ್ತೇಜಿಸುತ್ತಿದೆ.
ಮಧ್ಯಪ್ರದೇಶದ ಹೊಸ ಪ್ರದೇಶಗಳಲ್ಲಿ ಸ್ಟಾರ್ಟ್ಅಪ್ಗಳ ಸಾಧ್ಯತೆಗಳನ್ನು ಪ್ರಸ್ತಾಪಿಸಿದ ಶ್ರೀ ಸಿಂಗ್, ಮಧ್ಯಪ್ರದೇಶದ ಕೃಷಿ ವಲಯದಲ್ಲಿ ಸ್ಟಾರ್ಟ್ಅಪ್ಗಳಿಗೆ ಅಪಾರ ಸಾಧ್ಯತೆಗಳಿವೆ ಎಂದು ಸಲಹೆ ನೀಡಿದರು. ಬಿದಿರು ಮಧ್ಯಪ್ರದೇಶದಲ್ಲಿ ಹೇರಳವಾಗಿ ಕಂಡುಬರುತ್ತದೆ ಮತ್ತು ಮಧ್ಯಪ್ರದೇಶವು ತ್ಯಾಜ್ಯದಿಂದ ಸಂಪತ್ತಿಗೆ ಸಾಕಷ್ಟು ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಧರ್ಮ ಮತ್ತು ವಿಜ್ಞಾನ ಒಂದಕ್ಕೊಂದು ಅಡ್ಡಿಯಲ್ಲ ಎಂದರು. ವಿಜ್ಞಾನದ ಮಿತಿಗಳು ಎಲ್ಲಿ ಕೊನೆಗೊಳ್ಳುತ್ತವೆಯೋ, ಅಲ್ಲಿಂದ ಆಧ್ಯಾತ್ಮ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು. ಉತ್ಸವದಲ್ಲಿ 15 ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ವಿದ್ಯಾರ್ಥಿ ವಿಜ್ಞಾನ ಗ್ರಾಮ, ಯುವ ವಿಜ್ಞಾನಿ ಸಮ್ಮೇಳನ ಮತ್ತು ಮೆಗಾ ಸ್ಟಾರ್ಟ್ಅಪ್ ಎಕ್ಸ್ಪೋ ಅವುಗಳಲ್ಲಿ ಪ್ರಮುಖವಾಗಿವೆ.
Post a Comment