ಹೋಮದ ಭಸ್ಮಧಾರಣೆ ಮತ್ತು ಮಹತ್ವ...ವಿಷಯ

[02/01, 7:43 AM] Pandit Venkatesh. Astrologer. Kannada: ಹೋಮದ ಭಸ್ಮಧಾರಣೆ ಮತ್ತು ಮಹತ್ವ...

ಇದು ಎಲ್ಲಾ ರೀತಿಯ ಭಸ್ಮಗಳಿಗಿಂತಲೂ ತುಂಬಾ ಶ್ರೇಷ್ಟವಾದದ್ದು ಮತ್ತು ಶಕ್ತಿಶಾಲಿಯಾದದ್ದು..

೧. ಹೋಮದ ಭಸ್ಮದ ಧಾರಣೆಯಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
ದೇವರ ಅನುಗ್ರಹ ಇದ್ದು, ಸಕಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ..

೩.ಭಸ್ಮಧಾರಣೆಯಿಂದ ಸಕಲ ವಿಧವಾದ ಗೋಚರ ಅಗೋಚರ ದೃಶ್ಯ ಅದೃಶ್ಯ ರೋಗಗಳು ನಿವಾರಣೆಯಾಗುತ್ತದೆ ..

೪. ಶ್ರೀ ಮಹಾಗಣಪತಿ ಹೋಮದ ಭಸ್ಮ ಧರಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ..

೫. ಶ್ರೀ ಸುಬ್ರಹ್ಮಣ್ಯ ಹೋಮದ ಭಸ್ಮ ಉಪಯೋಗಿಸಿದರೆ ಮನೆಯಲ್ಲಿ ಗೃಹಕಲಹ ನಿಂತು ಎಲ್ಲರಿಗೂ ಶಾಂತಿ ಸಿಕ್ಕುತ್ತದೆ..

೬. ಶ್ರೀ ದುರ್ಗಾ ಹೋಮದ ಭಸ್ಮಧಾರಣೆಯಿಂದ ಸಕಲ ಶತೃಗಳೂ ನಾಶವಾಗಿ ನೆಮ್ಮದಿಯ ಸಂಸಾರವನ್ನು ಮಾಡುತ್ತಾರೆ..

೭. ಶ್ರೀ ನವಗ್ರಹ ಹೋಮದ ಭಸ್ಮಧಾರಣೆಯಿಂದ ಯಾವುದೇ ಗ್ರಹಗಳ ಕಾಟವೂ ಇರುವುದಿಲ್ಲ ..

೮. ಶ್ರೀ ಮಹಾಮೃತ್ಯುಂಜಯ ಹೋಮದ ಭಸ್ಮಧಾರಣೆಯಿಂದ ಸಕಲ ವಿಧವಾದ ಅಪಮೃತ್ಯುಗಳು ನಿವಾರಣೆಯಾಗುತ್ತದೆ ..

೯. ಶ್ರೀ ಲಲಿತಾ ತ್ರಿಪುರಸುಂದರೀ , ಶ್ರೀ ರಾಜರಾಜೇಶ್ವರೀ, ಶ್ರೀ ಗಾಯತ್ರೀ ದೇವಿ ಹೋಮದ ಭಸ್ಮಧಾರಣೆಯಿಂದ ಸಕಲ ಕಾರ್ಯಗಳು ದಿಗ್ವಿಜಯ ಹೊಂದಿ, ಆಜೀವಮಾನ ಪೂರ್ತಿ ಸುಖವಂತರಾಗಿರುತ್ತಾರೆ..

೧೦. ಶ್ರೀ ಸುದರ್ಶನ ಹೋಮದ ಭಸ್ಮದಿಂದ ಸಕಲ ಶತೃ ನಿವಾರಣೆಯಾಗುತ್ತದೆ. , ಮಾಟ ಮಂತ್ರ ದೋಷ ನಿವಾರಣೆಯಾಗುತ್ತದೆ ..

೧೧. ಶ್ರೀ ಲಕ್ಷ್ಮೀನಾರಾಯಣ ಹೋಮದ ಭಸ್ಮ ಧಾರಣೆಯಿಂದ ಗಂಡ ಹೆಂಡತಿ ಜಗಳ ನಿವಾರಣೆಯಾಗಿ, ಅನ್ಯೋನ್ಯವಾಗಿರುತ್ತಾರೆ..

೧೨. ಹೋಮದ ಭಸ್ಮಧಾರಣೆಯಿಂದ ಯಾವುದೇ ಮಾಂತ್ರಿಕ ಭಾದೆ , ಶಾಪಗಳು , ದೃಷ್ಟಿಗಳು , ಗ್ರಹಭಾದೆಗಳು ಆಗುವುದಿಲ್ಲ...

ಶುಭವಾಗಲಿ...
[02/01, 7:46 AM] Pandit Venkatesh. Astrologer. Kannada: ✨ನಿತ್ಯಸತ್ಯ✨
 *********ಪೂರ್ವ ಜನ್ಮದ ಫಲ********""
ಈ ಜನ್ಮ ದಲ್ಲಿ ಅನುಭವಿಸಿ ತಿರಲೇ ಬೇಕು.
ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ ವಾಸುದೇವ ಮತ್ತು ದೇವಕಿಯನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.
ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು: "ಮಗು... ನೀನೇ ದೇವರು ಮತ್ತು ನಿನಗೆ ದೈವಿಕ ಶಕ್ತಿಗಳಿವೆ. ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ?"🙏

ಶ್ರೀಕೃಷ್ಣ ಉತ್ತರಿಸಿದ: "ದೇವ ಸ್ವರೂಪಿ ತಾಯಿಯೆ ನನ್ನನ್ನು ಕ್ಷಮಿಸಿ. ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ?"🙏

ದೇವಕಿಯು ಆಶ್ಚರ್ಯಚಕಿತಳಾಗಿ: "ಕೃಷ್ಣ, ಇದು ಹೇಗೆ ಸಾಧ್ಯ? ನೀನು ಯಾಕೆ ಹೀಗೆ ಹೇಳುತ್ತಿದ್ದೀ?"🙏

ಕೃಷ್ಣನು ಉತ್ತರಿಸಿದ: "ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ."🙏

ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು:
"ಹಾಗಾದರೆ‌ ಈಗ ಕೌಸಲ್ಯ ಯಾರು?"🙏
ಶ್ರೀ ಕೃಷ್ಣ ನಗುತ್ತ ಉತ್ತರಿಸಿದ:
"ತಾಯಿ ಯಶೋದಾ. ಹದಿನಾಲ್ಕು ವರ್ಷಗಳ ತಾಯಿಯ ಪ್ರೀತಿಯು ಅವಳ ಹಿಂದಿನ ಜನ್ಮದಲ್ಲಿ ನಿನ್ನಿಂದಾಗಿ ವಂಚಿತವಾಯಿತು. ಅದನ್ನು ಅವಳು ಈ ಜೀವನದಲ್ಲಿ ಪಡೆದುಕೊಂಡಿದ್ದಾಳೆ".🙏
*ನೆನಪಿಡಿ*
ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ಅನುಭವಿಸಬೇಕು
ದೇವತೆಗಳು ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇನ್ನು ನೀವು ಯಾವ ಕರ್ಮವನ್ನು ಸಂಪಾದಿಸಬೇಕು ಎಂಬುದರ ಮೇಲೆ ಕಣ್ಣಿಡಿ.🙏
ಹರಿ ಓಂ...!

ನೀ ಮಾಡಿದ *ಪೂರ್ವ ಜನ್ಮದ ಫಲ* ಖಂಡಿತವಾಗಿಯೂ ಬಿಡದು.

ಕೃಷ್ಣಾರ್ಪಣಮಸ್ತುಃ✨💞👌
[02/01, 7:54 AM] Pandit Venkatesh. Astrologer. Kannada: #ರಮ್ಯಪುರಾಣಪುಣ್ಯಕಥೆಗಳು
              ವೈಕುಂಠ ಏಕಾದಶಿಯ  ವಿಶೇಷ :- 

"ವೈಕುಂಠ ಏಕಾದಶಿ" ಇದನ್ನ ಮುಕ್ಕೋಟಿ  ಏಕಾದಶಿ ಎಂತಲೂ ಕರೆಯುತ್ತಾರೆ. ಇಂದು  ವೈಕುಂಠದ ದ್ವಾರ ತೆರೆದಿರುತ್ತದೆ. ಇದನ್ನ ಮುಕ್ಕೋಟಿ ಏಕಾದಶಿ ಎಂದು ಏಕೆ ಕರೆಯುತ್ತಾರೆ ಎಂದರೆ ಈ ದಿನ ಶ್ರೀಮಹಾವಿಷ್ಣುವು ಶ್ರೀದೇವಿ ಭೂದೇವಿ ಸಹಿತ ನಾಗಿ ಗರುಡವಾಹನ ರೂಢನಾಗಿ ವೈಕುಂಠದಲ್ಲಿ ಉತ್ತರ ದ್ವಾರದ ಕಡೆ ಬಂದಾಗ ಸಕಲ ದೇವಾನುದೇವತೆಗಳ ಶ್ರೀ ಮಹಾವಿಷ್ಣುವಿನ ದರ್ಶನವನ್ನು ಪಡೆಯುತ್ತಾರೆ. ಮುಕ್ಕೋಟಿ ದೇವತೆಗಳು ಒಟ್ಟಿಗೆ ಸೇರಿ ವಿಷ್ಣುವಿನ ದರ್ಶನ ಪಡೆಯುವ ವಿಶೇಷ ದಿನವೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎಂದು ಕರೆಯುತ್ತಾರೆ. ಈ ದಿನ ಯಾರು ಉಪವಾಸವನ್ನು ಮಾಡಿ ಭಗವಂತನ ನಾಮ ಸ್ಮರಣೆಯಲ್ಲಿ ಕಳೆಯುತ್ತಾರೆ ಅಂತವರಿಗೆ  ಶ್ರೀ ಮಹಾವಿಷ್ಣುವಿನ ಅನುಗ್ರಹದೊಂದಿಗೆ,  ಸಕಲ ಇಷ್ಟಾರ್ಥಗಳು ನೆರವೇರುತ್ತದೆ.  ದೈವಾನುಗ್ರಹ  ಲಭಿಸುತ್ತದೆ. ಎಂದು ಪ್ರತೀತಿ ಇದೆ. 

ಏಕಾದಶಿ ಉಪವಾಸ,  ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಅತ್ಯುತ್ತಮವಾಗಿದ್ದು.  ಇದು ಆತ್ಮವನ್ನು ಶುದ್ಧೀಕರಿಸಲು  ಹಾಗೂ ಮೋಕ್ಷವನ್ನು ಸಾಧಿಸಲು  ಸಹಾಯಕವಾಗುತ್ತದೆ.   ಹಿಂದೂ  ಪಂಚಾಂಗದ ಪ್ರಕಾರ ಏಕಾದಶಿ ಹನ್ನೊಂದನೇ ದಿನ ಬರುತ್ತದೆ. ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ 11ನೇ ದಿನವೇ ಏಕಾದಶಿ. ಹಿಂದೂ ಸಂಪ್ರದಾಯಸ್ಥರು ಇದನ್ನು ಶುಭದಿನವೆಂದು  ಪರಿಗಣಿ ಸುತ್ತಾರೆ. ಈ ದಿನ ನಿಟ್ಟುಪವಾಸ ಮಾಡುವುದರ ಹೊರತಾಗಿಯೂ ಕೆಲವರು ಲಘು ಫಲಹಾರವನ್ನು  ತೆಗೆದುಕೊಳ್ಳುತ್ತಾರೆ. ಅಂದರೆ ಹಣ್ಣು, ಹಾಲು ಮುಸುರೆಯಲ್ಲದ ಪದಾರ್ಥ ತೆಗೆದುಕೊಂಡು  ಜನಗಳ ಸಂಪರ್ಕದಿಂದ ದೂರವಿದ್ದು ಹರಿ ನಾಮ ಜಪದಲ್ಲಿ ದಿನವನ್ನು  ಕಳೆಯುತ್ತಾರೆ.  ಅಂದಾಜಿನಂತೆ  ಒಂದು ವರ್ಷದಲ್ಲಿ  24 ಏಕಾದಶಿ ಬರುತ್ತದೆ. ಇವೆಲ್ಲ ವಿಷ್ಣುವಿನ ಒಂದೊಂದು ಅವತಾರವೆಂದು ತಿಳಿಸಲಾಗಿದೆ. ಮಾನಸಿಕವಾಗಿ, ಬೌದ್ಧಿಕವಾಗಿ ,ದೃಢಚಿತ್ತ  ಹೊಂದಲು ಏಕಾದಶಿ ಉಪವಾಸ ಪೂರಕವಾಗಿದೆ. 

ಈ  ದಿನವೇ   ಏಕೆ  ಉಪವಾಸ  ಮಾಡಬೇಕೆಂದರೆ, ಹನ್ನೊಂದನೇ ದಿನ ಅಂದರೆ  ಏಕಾದಶಿ  ಬರುವ  ದಿನದಲ್ಲಿ,  ಹುಣ್ಣಿಮೆ ಅಥವಾ ಅಮಾವಾಸ್ಯೆ  ಹತ್ತಿರವೇ ಇರುವುದರಿಂದ, ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.  ಅಂದರೆ ರಜಸ- ತಾಮಸ ಗುಣಗಳೇ ಜಾಸ್ತಿ ಇರುತ್ತದೆ.  ಇದು ದೇಹ ಮತ್ತು ಮನಸ್ಸಿನ ಮೇಲೆ ಅಹಿತಕರ ಪ್ರಭಾವವನ್ನು ಬೀರುತ್ತದೆ. ಆದುದರಿಂದ ಏಕಾದಶಿ ದಿನದಂದು ಉಪವಾಸ ಮಾಡಿ ಭಗವಂತನ  ಸ್ಮರಣೆ, ಮಾಡಿದರೆ ಸಾತ್ವಿಕ ಗುಣ ಹೆಚ್ಚಾಗುತ್ತದೆ.  ಸಾತ್ವಿಕ ಗುಣ ಹೆಚ್ಚಾದರೆ,  ಶರೀರ ಮತ್ತು ಮನಸ್ಸು ಸದೃಢವಾಗಿರುತ್ತದೆ. ‌ ಆಹಾರಕ್ಕೂ -ದೇಹಕ್ಕೂ- ಮನಸ್ಸಿಗೂ, ಒಂದಕ್ಕೊಂದು ಸಂಬಂಧವಿರುವುದರಿಂದ ಏಕಾದಶಿಯಂದು ಉಪವಾಸ ಅಥವಾ ಅಲ್ಪ ಆಹಾರ ಸೇವನೆ ಮಾಡಿ ದೇವರ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ  ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ. 

ಪುರಾಣದ ಪ್ರಕಾರ ಏಕಾದಶಿ ಮಹತ್ವವುಳ್ಳದ್ದಾಗಿದೆ ಎಂಬುದಕ್ಕೆ ಇದಕ್ಕೊಂದು ಕಥೆ ಇದೆ:-   ಒಮ್ಮೆ ದೇವತೆಗಳ ರಾಜನಾದ ಇಂದ್ರನು ತನ್ನ ಐರಾವತದ ಮೇಲೇರಿ ಸವಾರಿ ಮಾಡುತ್ತಿದ್ದನು. ಅದೇ  ಸಮಯಕ್ಕೆ ಎದುರಿಗೆ ದೂರ್ವಾಸ ಮಹರ್ಷಿಗಳು ಬಂದರು.  ರಾಜನಿಗೆ ಗೌರವ ಸಲ್ಲಿಸುವುದು ಕರ್ತವ್ಯ ಅಂದುಕೊಂಡು  ಎಲ್ಲಕ್ಕೂ ಶೋಭಾಯಮಾನವಾಗಿ, ಸುವಾಸನೆಯುಳ್ಳ ಹೂವಿನ ಮಾಲೆಯನ್ನು ಇಂದ್ರನಿಗೆ ಗೌರವದಿಂದ ಕೊಟ್ಟರು.  ಇಂದ್ರನು ಒಂದು ತರಹ ತಿರಸ್ಕಾರ ಹಾಗೂ ದುರಹಂಕಾರದಿಂದ ಆ ಹೂವಿನ ಮಾಲೆಯನ್ನು ಆನೆಯ ಕುತ್ತಿಗೆಗೆ  ಎಸೆದನು. ಆನೆಗೆ ಆ ಹೂವಿನ ಸುಗಂಧ ಸಹ್ಯವಾಗದೇ ರೊಚ್ಚಿಗೆದ್ದು ಅದನ್ನು ನೆಲದ ಮೇಲೆ ಹಾಕಿ ತನ್ನ ಕಾಲಿನಿಂದ ತುಳಿದು ಹೊಸಕಿ ಹಾಕುತ್ತದೆ.  ಇದನ್ನು ನೋಡಿದ ದುರ್ವಾಸ ಮುನಿಗಳಿಗೆ  ಕೋಪ  ನೆತ್ತಿಗೇರುತ್ತದೆ.  ಋಷಿಮುನಿಗಳು   ಆಶೀರ್ವಾದ ರೂಪದಲ್ಲಿ ಕೊಟ್ಟ ಹೂವಿನ ಮಾಲೆಯನ್ನು ಇಂದ್ರನು  ತಿರಸ್ಕಾರದಿಂದ ಆನೆಗೆ ಹಾಕಿ ಅದರ  ಕಾಲಲ್ಲಿ ತುಳಿಸಿ ಅವಮರ್ಯಾದೆ ಮಾಡಿದನಲ್ಲ ಎಂದುಕೊಂಡ
ಅವರು  ತಮ್ಮ ಕಮಂಡಲದಿಂದ ನೀರನ್ನು ತೆಗೆದು "ಇಂದ್ರನ ಸಮೇತ ದೇವಾನು-ದೇವತೆಗಳ ಶಕ್ತಿ ಹೋಗಲಿ ಐಶ್ವರ್ಯ ನಶಿಸಿ ಹೋಗಲಿ" ಎಂದು ಶಾಪ ಕೊಟ್ಟರು.  ಕೆಟ್ಟ ಮೇಲೆ ಬುದ್ಧಿ ಬಂತು ಅಟ್ಟ ಮೇಲೆ ಒಲೆ ಉರಿಯಿತು ಎಂಬಂತೆ ಇಂದ್ರನಿಗೆ ಬುದ್ಧಿ ಬಂತು,  ಅಂಬಾರಿ ಯಿಂದ ಕೆಳಗಿಳಿದು ದುರ್ವಾಸ ಮುನಿಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಾನೆ. ಆದರೆ ಫಲಿಸಲಿಲ್ಲ. 

ಶಾಪದ ಕಾರಣದಿಂದ ಸ್ವಲ್ಪ ಸಮಯದಲ್ಲೇ ರಾಕ್ಷಸರು ದೇವತೆಗಳ ಮೇಲೆ ಯುದ್ಧ ಸಾರಿದರು. ಎಷ್ಟು ಸಾರಿ ಯುದ್ಧಮಾಡಿದರು, ದೇವತೆಗಳೆಲ್ಲ ಶಕ್ತಿಹೀನ ರಾದ  ಕಾರಣ ರಾಕ್ಷಸರೇ ಗೆಲ್ಲುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾಕ್ಷಸರ ರಾಜ ಬಲಿಚಕ್ರವರ್ತಿ ಮೂರು ಲೋಕಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಹಾಕಿಕೊಂಡನು.  ದೇವತೆಗಳು ಹೆದರಿ ವಿಷ್ಣುವಿನ ಹತ್ತಿರ ಬಂದು ತಮ್ಮ ಸಂಕಟವನ್ನು ಹೇಳಿಕೊಂಡು, ದೇವಾ, ಬಲಿಚಕ್ರವರ್ತಿ ಮೂರು ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡರೆ ಲೋಕಕ್ಕೆ ಅವನು  ಕಂಟಕ ನಾಗುತ್ತಾನೆ.  ಅವನನ್ನು ಈಗಲೇ ನಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.  ದೇವತೆಗಳ ಮಾತನ್ನು ಆಲಿಸಿದ ವಿಷ್ಣು ಕಾರ್ಯ ಪ್ರವೃತ್ತನಾಗಿ,  ವಾಮನಾವತಾರ  ಧರಿಸಿ, ಮೂರು ಹೆಜ್ಜೆ ಮೂಲಕ ಬಲಿಚಕ್ರವರ್ತಿಯ ಎಲ್ಲಾ ಸಂಪತ್ತುನ್ನು  ಪಡೆದು ಗೌರವಯುತವಾಗಿ ಪಾತಾಳಲೋಕಕ್ಕೆ ಕಳಿಸುತ್ತಾನೆ. 

ವಿಷ್ಣು ಪಾತಾಳಲೋಕಕ್ಕೆನೂ  ಬಲಿಯನ್ನು  ತಳ್ಳಿದ. ಆದರೆ ದೇವತೆಗಳ ಶಕ್ತಿ ಮಾತ್ರ  ದೀನೇ ದೀನೇ  ಕ್ಷೀಣಿಸುತ್ತಿತ್ತು. ಮತ್ತೆ ದೇವತೆಗಳು  ವಿಷ್ಣುವಿನ ಹತ್ತಿರ ಹೋಗಿ ಪರಿಹಾರ ಕೇಳಿದರು.  ಕ್ಷೀರ ಸಾಗರವನ್ನು ಕಡೆದು ಅಲ್ಲಿ ದೊರೆಯುವ ಅಮೃತವನ್ನು ದೇವತೆಗಳು ಸೇವಿಸಿದರೆ ಕಳೆದುಹೋದ ಶಕ್ತಿ  ಮರಳಿ ದೊರೆಯುತ್ತದೆ  ಎಂದು ವಿಷ್ಣು  ಸಲಹೆ ಕೊಟ್ಟನು. ಭಗವಂತ ನೀನು ಹೇಳಿದ್ದೇನೋ ಸರಿ.  ಆದರೆ ನಾವು ಅಮೃತಕ್ಕಾಗಿ ಸಮುದ್ರಮಥನ  ಮಾಡಲು ಹೋದರೆ  ರಾಕ್ಷಸರು ಬರುತ್ತಾರೆ‌  ಏನು ಮಾಡುವುದು ಎಂದು ಕೇಳಿದರು.  ಮತ್ತೆ ವಿಷ್ಣು ಇನ್ನೊಂದು ಉಪಾಯ ಹೇಳಿದ. ರಾಕ್ಷಸರು  ಕೇಳಿದರೆ ಅವರಿಗೆ ಸಮುದ್ರಮಥನ ಕಾರ್ಯದಲ್ಲಿ  ನೀವು ನಮಗೆ  ಸಹಾಯ ಮಾಡಿ ಬರುವ ಅಮೃತದಲ್ಲಿ  ಇಬ್ಬರು ಸಮಪಾಲು  ಹಂಚಿಕೊಳ್ಳೋಣ ಎಂದು ಹೇಳಿ ಇದೇ ಸಲಹೆಯನ್ನು  ರಾಕ್ಷಸರಿಗೆ  ತಿಳಿಸಿದರು.  ಈ ರೀತಿ ರಾಕ್ಷಸರನ್ನು  ದೇವತೆಗಳು 
ಸಮಾಧಾನಪಡಿಸಿದರು.   ಸಮುದ್ರಮಥನ  ಮಾಡಲು  ಮಂದರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಯನ್ನು‌ ಹಗ್ಗವಾಗಿಯೊ  ಮಾಡಿಕೊಂಡು  ದೇವ- ದಾನವರು   ಜೊತೆಯಾಗಿ ಕ್ಷೀರ ಸಮುದ್ರವನ್ನು ಕಡೆ 
ಯುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ದೇವತೆಗಳಿಗೆ ಶಕ್ತಿ ಬರಲಿ, ಮತ್ತು ಅಧಿಕಾರ , ಸಂಪತ್ತು ,ಸೌಭಾಗ್ಯ ಸಿದ್ಧಿಸಲಿ  ಎಲ್ಲರಿಗೂ ಸನ್ಮಂಗಳವಾಗಲಿ ಎಂದು, ಋಷಿಮುನಿಗಳು ಇಡೀ ದಿನ  ಉಪವಾಸವಿದ್ದು ಭಗವಂತನನ್ನು ಪ್ರಾರ್ಥಿಸುತ್ತಾ ಯಾಗ ಮಾಡುತ್ತಾರೆ.
ಶ್ರೀ ಸೂಕ್ತ ,ಪುರುಷುಕ್ತ ವನ್ನು  ದಿನವಿಡೀ ಪಟಿಸುತ್ತಾರೆ, ದೇವತೆಗಳ ಒಳತಿಗಾಗಿ
ಋಷಿ ಮುನಿಗಳೆಲ್ಲ ಇಡೀ ದಿನ ಉಪವಾಸವಿದ್ದು ,  ಶ್ರದ್ಧಾ ಭಕ್ತಿಯಿಂದ  ಯಜ್ಞ ಯಾಗಾದಿ ಗಳನ್ನು ಮಾಡಿ, ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವನ್ನಾಮ ಸ್ಮರಣೆ  ಮಾಡುತ್ತಾ ಪ್ರಾರ್ಥಿಸಿದರು.

ಅಂತಹ ಶುಭದಿನವೆ  'ಏಕಾದಶಿ' ಯಾಗಿದ್ದು , ಅಂದಿನಿಂದಲೇ ಇಂತಹ ಪವಿತ್ರವಾದ  'ಏಕಾದಶಿ ವ್ರತ' ಆಚರಣೆಗೆ  ಬಂದಿತು. ಈ ರೀತಿಯಾಗಿ ಏಕಾದಶಿಯಂದು ಉಪವಾಸ ಮಾಡಿ ಭಗವಂತನ ಧ್ಯಾನ ಮಾಡಿದರೆ ಆಯುರಾರೋಗ್ಯ ಐಶ್ವರ್ಯಾದಿಗಳು ಅಭಿವೃದ್ಧಿಯಾಗುತ್ತದೆ ಎಂದು ಶ್ರೀಕೃಷ್ಣನು ಏಕಾದಶಿ ವ್ರತದ ಮಹತ್ವವನ್ನು ಧರ್ಮರಾಯನಿಗೆ ತಿಳಿಸುತ್ತಾನೆ. 

ಅಚ್ಯುತಂ ಕೇಶವಂ ರಾಮ ನಾರಾಯಣಂ 
ಕೃಷ್ಣ ದಾಮೋದರಂ ವಾಸುದೇವಂ ಹರಿಂ!
ಶ್ರೀಧರಂ  ಮಾಧವಂ ಗೋಪಿಕಾವಲ್ಲಭಂ
ಜಾನಕಿ ನಾಯಕಂ ರಾಮಚಂದ್ರಂ ಭಜೆ!! 

ವಂದನೆಗಳೊಂದಿಗೆ,
🕉️ಶ್ರೀ ವೆಂಕಟೇಶ ಜ್ಯೋತಿಷಿ 📱9482655011🙏🙏🙏
[02/01, 7:58 AM] Pandit Venkatesh. Astrologer. Kannada: #ವೈಕುಂಠ_ಏಕಾದಶಿ.

 02-01-2023 ಸೋಮವಾರ
*************************
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

ಇನ್ನು “ಏಕಾದಶಿ” ಎಂದರೆ

 ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ. 

ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.

ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. 

ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.

 ಎಂದರೆ ಶುಚಿರ್ ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. 

ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.

ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ : 

 ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದನು.

ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.

 ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.

ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು. 

ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು.

 ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. 

ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು. 

ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.

ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ವೈಕುಂಠ ಕಾಣಿಸಿತು,

 ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿರಬಹುದೆಂದು ಊಹಿಸಬಹುದು.

ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.

 ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ.

ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. 

ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.

ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. 

ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ..

ವೈಕುಂಠ ಏಕಾದಶಿ...!!!
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

 ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.

ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

 ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ 

ಉಪದೇಶಿಸಿದ ಎಂಬ ನಂಬಿಕೆ ಇದೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ . 

ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋದ ವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾನಂತೆ ಈ ಕತೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂತದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.

 ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .

ಆದರೆ, ವೈಕುಂಠ ಏಕಾದಶಿದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ . 

ಮುಕ್ಕೋಟಿ ಏಕಾದಶಿ ದಿನದಂದು ಅಂದರೆ ಧನುರ್ಮಾಸ ಶುಕ್ಲ ಏಕಾದಶಿ ದಿನದಂದು ಉಪಾಸವಿರ ಬೇಕಂತೆ ಇದಕ್ಕೆ ಕಾರಣವೇನೆಂದರೆ.. 

ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .

ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸ ವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

.🙏🙏🙏
[02/01, 8:08 AM] Pandit Venkatesh. Astrologer. Kannada: :
ಹಿಂದೂ ಧರ್ಮ...
ಇದು ತಿಳಿದಿರಲೇ ಬೇಕು.
******************
ವೇದ (೪) - ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.
*********************
ರಾಶೀ (೧೨) - ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ.
*********************
ಋತು (೬) ಮತ್ತು ಮಾಸ (೧೨) - ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಅಷಢ) , ವರ್ಷಾ (ಶ್ರಾವಣ-ಭಾದ್ರಪದ), ಶರದ (ಅಶ್ವಿನ-ಕಾರ್ತಿಕ), ಹೇಮಂತ (ಮಾರ್ಗಶಿರ-ಪೌಷ), ಶಿಶಿರ (ಮಾಘ-ಫಾಲ್ಗುಣ).
*******************
ದಿಕ್ಕು (೧೦) - ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.
******************
ಸಂಸ್ಕಾರ (೧೬) - ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.
******************
ಸಪ್ತಋಷಿ (೭) - ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ.
******************
ಸಪ್ತಪರ್ವತ - ಹಿಮಾಲಯ (ಉತ್ತರ ಭಾರತ) , ಮಲಯ (ಕರ್ನಾಟಕ ಮತ್ತು ತಮಿಳನಾಡು) , ಸಹ್ಯಾದ್ರೀ (ಮಹಾರಾಷ್ಟ್ರ) , ಮಹೇಂದ್ರ (ಉಡಿಸಾ), ವಿಂಧ್ಯಾಚಲ (ಮಧ್ಯಪ್ರದೇಶ), ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)
******************
ಜ್ಯೋತಿರ್ಲಿಂಗ (೧೨) - ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ), ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ), ಓಂಕಾರೇಶ್ವರ (ಮಧ್ಯಪ್ರದೇಶ) , ಕೇದಾರನಾಥ (ಉತ್ತರಾಂಚಲ), ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ, ತ್ರ್ಯಂಬಕೇಶ್ವರ , ಘೃಷ್ಣೇಶ್ವರ , ಭೀಮಾಶಂಕರ (ಮಹಾರಾಷ್ಟ್ರ).
*****************
ಪೀಠ (೪) - ಶಾರದಾಪೀಠ (ದ್ವಾರಕಾ - ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ - ಉತ್ತರಾಂಚಲ), ಗೋವರ್ಧನಪೀಠ (ಜಗನ್ನಾಥಪುರೀ - ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
****************
ಚಾರಧಾಮ - ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು), ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).
**************
ಸಪ್ತಪುರಿ - ಅಯೋಧ್ಯಾ, ಮಥುರಾ, ಕಾಶೀ (ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು) , ಅವಂತಿಕಾ (ಉಜ್ಜೈನ - ಮ.ಪ್ರ.), ದ್ವಾರಿಕಾ (ಗುಜರಾಥ).
********************
ಚಾರಕುಂಭ - ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತ ಪ್ರದೇಶ), ಉಜ್ಜೈನ (ಮಧ್ಯ ಪ್ರದೇಶ) ,ನಾಶಿಕ (ಮಹಾರಾಷ್ಟ್ರ)
***********************
ಪ್ರಾತ:ಸ್ಮರಣೀಯ ನದಿಗಳು - ಗಂಗಾ , ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ.
********************
ಅಷ್ಟಲಕ್ಷ್ಮೀ (೮) - ಆದಿಲಕ್ಷ್ಮೀ , ವಿದ್ಯಾಲಕ್ಷ್ಮೀ , ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.
*********************
ಯುಗ (೪) - ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.
********************
ಪುರುಷಾರ್ಥ (೪) - ಧರ್ಮ , ಅರ್ಥ , ಕಾಮ , ಮೋಕ್ಷ.
***********************
ಪ್ರಕೃತಿಯ ಗುಣ (೩) - ಸತ್ವ , ರಜ ,ತಮ.
*******************
ನಕ್ಷತ್ರ (೨೮) - ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ.
******************
ದಶಾವತಾರ - ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.
*******************
ಸಿಖ್ ಧರ್ಮಗುರು (೧೦) - ನಾನಕದೇವ, ಅಂಗದದೇವ, ಅಮರದಾಸ, ರಾಮದಾಸ, ಅರ್ಜನ್ದೇವ, ಹರಕಿಶನ, ಹರರಾಯ, ಹರಗೋವಿಂದ, ತೇಗಬಹಾದ್ದೂರ, ಗೋವಿಂದಸಿಂಹ.
[03/01, 8:15 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌                  ‌                                                           ‌                                                                                                            
*ಪಂಚಭೂತ ತತ್ವಗಳ ದಿವ್ಯ ಕ್ಷೇತ್ರಗಳು*

ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತ ಅಥವಾ ಐದು ತತ್ವಗಳಿಂದ (ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ) ಮಾಡಲ್ಪಟ್ಟಿದ್ದು ಅದರ ಒಡೆಯನಾದ ಶಿವ ಪರಮಾತ್ಮನಿಗೆ ಸಮರ್ಪಿತವಾದ ಪ್ರತ್ಯೇಕ ದೇವಸ್ಥಾನಗಳನ್ನು ಪಂಚಭೂತ ಸ್ಥಳಗಳೆನ್ನುತ್ತಾರೆ. ಈ ಪಂಚಭೂತ ಸ್ಥಳಗಳಲ್ಲಿ ಐದು ಶಿವಲಿಂಗಗಳಿದ್ದು ಅದರಲ್ಲಿ ನಾಲ್ಕು ಸ್ಥಳಗಳು ತಮಿಳುನಾಡಿನಲ್ಲಿದ್ದು, ಒಂದು ಸ್ಥಳವು ಪ್ರಸ್ತುತ ಆಂಧ್ರ ಪ್ರದೇಶದಲ್ಲಿದೆ.

*ಪಂಚಭೂತಂ ಕುರಿತು ಸಂಕ್ಷಿಪ್ತ ಮಾಹಿತಿ*                                            ‌                                                                                                                                                ಹಿಂದೂ ತತ್ವದ ಅನುಸಾರ ಜಗತ್ತಿನ ಸಕಲ ಜೀವರಾಶಿಗಳು, ಸೌರವ್ಯೂಹದಲ್ಲಿರುವ ಗ್ರಹಗತಿ ಹಾಗು ಪಂಚ ತತ್ವಗಳಾದ ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿಗಳಿಂದ ರಚನೆಯಾಗಿವೆ. ಭೂತವೆಂದರೆ ಸಂಸ್ಕೃತದಲ್ಲಿ ಕಣ ಅಥವಾ ಅಂಶವೆಂದೂ ಮಹಾಭೂತವೆಂದರೆ ಮಹಾನ್ ಕಣ ಅಥವಾ ಅಂಶ ಎಂದಾಗುತ್ತದೆ.

ಪುರಾತನ ಹಿಂದೂ ವೈದ್ಯಶಾಸ್ತ್ರ ಆಯುರ್ವೇದದ ಪ್ರಕಾರ, ಶರೀರ ಹಾಗೂ ಪಂಚಭೂತಗಳ ನಡುವಿನ ಸಮತೋಲನವು ಕೆಲವು ಪ್ರಧಾನ ಅಂಶಗಳಿಂದ ನಿರ್ವಹಿಸಲ್ಪಡುತ್ತದೆ. ಅವುಗಳೆಂದರೆ ಶ್ಲೇಷ್ಮ (ಕಫ), ಪಿತ್ತರಸ (ಪಿತ್ತ), ವಾಯು, ಧಾತು ಹಾಗು ಮಲ (ಕಸ).

ಹಾಗಾದರೆ ಬನ್ನಿ ಒಮ್ಮೆ ಆ ಪವಿತ್ರ ಐದು ಪಂಚಭೂತ ಸ್ಥಳಗಳ ದರುಶನ ಮಾಡಿಕೊಂಡು ಬರೋಣ.

*ಏಕಾಂಬರೇಶ್ವರರ್ ದೇವಾಲಯ* (ಪೃಥ್ವಿ ಅಥವಾ ಭೂಮಿ)

ತಮಿಳುನಾಡಿನ ಕಾಂಚೀಪುರಂ ಪಟ್ಟಣದಲ್ಲಿರುವ ಈ ಬೃಹತ್ ದೇವಾಲಯವು ಪಂಚಭೂತಗಳಲ್ಲೊಂದಾದ ಭೂಮಿ ಅಥವಾ ಪೃಥ್ವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಪಟ್ಟಣದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ಈ ದೇವಾಲಯವು 59 ಮೀ ಎತ್ತರದ ಗೋಪುರವನ್ನು ಹೊಂದಿದ್ದು, ಭಾರತದಲ್ಲಿರುವ ಎತ್ತರದ ಗೋಪುರ ದೇವಾಲಯಗಳ ಪೈಕಿ ಒಂದೆನಿಸಿದೆ. ಮುಖ್ಯ ಬಸ್ ನಿಲ್ದಾಣದಿಂದ 1.6 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ರಾಜಾ ಸ್ಟ್ರೀಟ್ ಮೂಲಕ ಸುಲಭವಾಗಿ ತಲುಪಬಹುದು.

*ಅರುಣಾಚಲೇಶ್ವರರ್ ದೇವಾಲಯ (ಅಗ್ನಿ)*

ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಅಗ್ನಿ ತತ್ವಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಇಲ್ಲಿರುವ ಶಿವಸ್ವರೂಪಿ ಲಿಂಗವನ್ನು ಅಣ್ಣಮಲಯರ್ ಅಥವಾ ಅರುಣಾಚಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. 10 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ತಾಗಿ ಹರಡಿರುವ ಈ ದೇವಾಲಯ ಸಂಕೀರ್ಣವು ಹಲವು ಎತ್ತರದ ಗೋಪುರಗಳನ್ನು ಹೊಂದಿದ್ದು ಪೂರ್ವಭಾಗದ ಗೋಪುರವು ಅತ್ಯಂತ ಎತ್ತರದ ಗೋಪುರವಾಗಿದೆ. ಇದರ ಎತ್ತರ ಸುಮಾರು 217 ಅಡಿ ಅಥವಾ 66 ಮೀಟರ್ ಗಳಷ್ಟು.

ಪ್ರತಿದಿನ ಆರು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತಿದ್ದು ಬೆಳಿಗ್ಗೆ 5.30 ರಿಂದ ರಾತ್ರಿ 10 ಘಂಟೆಯಯವರೆಗೆ ತೆರೆದಿರುತ್ತದೆ. ತಿರುವಣ್ಣಾಮಲೈ ರೈಲು ನಿಲ್ದಾಣದಿಂದ ಕೇವಲ 1.6 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

*ಜಂಬುಕೇಶ್ವರ ದೇವಾಲಯ (ಜಲ)*

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಈ ದೇವಾಲಯವು ಜಂಬುಕೇಶ್ವರ ದೇವಾಲಯವೆಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದು ಪಂಚಭೂತಗಳಲ್ಲೊಂದಾದ ನೀರಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಮತ್ತೊಂದು ಪ್ರಸಿದ್ಧ ಯಾತ್ರಾಕ್ಷೇತ್ರವಾದ ಶ್ರೀ ರಂಗನಾಥಸ್ವಾಮಿ ದೇವಾಲಯವಿರುವ ಶ್ರೀರಂಗಂನ ದ್ವೀಪದಲ್ಲಿ ನೆಲೆಸಿದೆ. ಜಂಬುಕೇಶ್ವರ ದೇವಾಲಯದ ಗರ್ಭಗುಡಿಯ ಕೆಳಗೆ ಎಂದಿಗೂ ಬತ್ತಲಾರದ ಚಿಲುಮೆಯೊಂದಿದ್ದು, ಸುಮಾರು 1800 ವರ್ಷಗಳ ಇತಿಹಾಸವನ್ನು ಈ ದೇವಾಲಯ ಹೊಂದಿದೆ.

ಇಲ್ಲಿನ ಶಿವಸ್ವರೂಪಿ ಲಿಂಗವನ್ನು ಅಪ್ಪು ಲಿಂಗಂ ಅಥವಾ ನೀರಿನ ಲಿಂಗ ಎಂದು ಕರೆಯಲಾಗುತ್ತದೆ. ಈ ಜಂಬುಕೇಶ್ವರ ಅಖಿಲಾಂಡೇಶ್ವರಿ ದೇವಾಲಯವು ಪಟ್ಟಣದ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

*ತಿಳ್ಳೈ ನಟರಾಜ ದೇವಾಲಯ (ಆಕಾಶ)*

ತಮಿಳುನಾಡಿನ ಪೂರ್ವ ಮಧ್ಯ ಭಾಗದ ಚಿದಂಬರಂ ಪಟ್ಟಣದಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಆಕಾಶಕ್ಕೆ ಸಮರ್ಪಿತವಾದುದಾಗಿದೆ. ಇಲ್ಲಿನ ಶಿವಸ್ವರೂಪಿ ಲಿಂಗವನ್ನು ತಿಳ್ಳೈ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ವೈದಿಕ ಬ್ರಾಹ್ಮಣರಾದ ದಿಕ್ಷೀತರ್ ರಿಂದ ಈ ದೇವಸ್ಥಾನವು ನಿರ್ವಹಿಸಲ್ಪಡುತ್ತದೆ. ಇವರನ್ನು ಪತಂಜಲಿಯವರು ದೇವಾಲಯದ ವಿಧಿವತ್ತಾದ ನಿರ್ವಹಣೆಗಾಗಿ ಕೈಲಾಸ ಪರ್ವತದಿಂದ ಕರೆತಂದಿದ್ದರು ಎನ್ನಲಾಗಿದೆ.

ಈ ದೇವಾಲಯವು ಚಿದಂಬರಂ ಬಸ್ಸು ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿ ನೆಲೆಸಿದ್ದು ಪಟ್ಟಣದ ಯಾವುದೇ ಭಾಗದಿಂದ ಸುಲಭವಾಗಿ ತಲುಪಬಹುದಾಗಿದೆ.

*ಶ್ರೀಕಾಳಹಸ್ತಿ ದೇವಾಲಯ (ವಾಯು)*  
 ‌                                                                                       ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿ ಯಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ವಾಯುವಿಗೆ ಸಂಬಂಧಿಸಿದುದಾಗಿದೆ. ಶಿವಸ್ವರೂಪಿಯಾದ ವಾಯುಲಿಂಗಂ ಅನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ಸ್ಥಳವು ಮತ್ತೊಂದು ವಿಶ್ವವಿಖ್ಯಾತ ತಾಣವಾದ ತಿರುಪತಿಯಿಂದ ಈಶಾನ್ಯ ಭಾಗಕ್ಕೆ ಕೇವಲ 36 ಕಿ.ಮೀ ದೂರದಲ್ಲಿ ನೆಲೆಸಿದೆ. ಶ್ರೀಕಾಳಹಸ್ತಿ ರೈಲು ನಿಲ್ದಾಣದಿಂದ 2.6 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದೆ.

Post a Comment

Previous Post Next Post