*ತನಿ ಎರೆಯುವುದು

[27/12/2022, 8:07 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ  🕉️ ‌       ‌    ‌     ‌     ‌     ‌             ‌            ‌       ‌          ‌          ‌                                                   ‌                                                                                                                              *ತನಿ ಎರೆಯುವುದು* ‌       ‌        ‌      ‌        ‌                                                           ‌  ‌                                                                                    "ತನಿ ಎರೆಯುವುದು" ಎಂದರೆ ಸರ್ಪ ಪ್ರತಿಷ್ಠಾಪನೆಯಾದ ನಾಗರ     ಕಲ್ಲಿಗೆ ಹಾಲು, ತುಪ್ಪ ಅಭಿಷೇಕ ಮಾಡಿ, ಹಸಿಕಡಲೆ, ತಂಬಿಟ್ಟು, ಚಿಗುಳಿ ಮುಂತಾದವುಗಳನ್ನು ನೈವೇದ್ಯ ಮಾಡಿ ಪೂಜಿಸುವುದು.  ‌        ‌                                                           ‌ತನಿ  ಎರೆಯುವುದಕ್ಕೆ ಯಾವುದೇ ರೀತಿಯ ದಿನವನ್ನೂ ನಿಗದಿಪಡಿಸಿರುವುದಿಲ್ಲವಾದರೂ ಸಾಮಾನ್ಯವಾಗಿ - *ಪಂಚಮಿ*,  ಚತುರ್ಥಿ, ಷಷ್ಠೀ ತಿಥಿಗಳಿರುವ ದಿನಗಳಂದು ತನಿ ಎರೆಯುವುದು ವಾಡಿಕೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥಿ ಮತ್ತು ಪಂಚಮಿ ದಿನಗಳಲ್ಲಿ *ನಾಗ ಚತುರ್ಥಿ* ಮತ್ತು *ನಾಗರ ಪಂಚಮಿ* ಹಬ್ಬಗಳನ್ನು ಆಚರಿಸುತ್ತಾರೆ. ಅಂದಿನ ದಿನಗಳಲ್ಲಿ ಬೆಳಗಿನ ಜಾವದಲ್ಲಿ ಬೇಗನೇ ಎದ್ದು ತಣ್ಣೀರಿನ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ಧರಿಸಿ, ನಾಗರ ದೇವತೆಗಳ ಆರಾಧನೆ ಮಾಡುವ ಸಂಪ್ರದಾಯ ದೇಶಾದ್ಯಂತ ಎಲ್ಲೆಡೆ ಆಚರಣೆಯಲ್ಲಿದೆ.  ‌           ‌          ‌   ‌     ‌         ‌                                          ‌                                                                            ‌ತನಿ ಎರೆಯುವ  ಸಂಪ್ರದಾಯಕ್ಕೆ ಸಂಬಂಧಿಸಿದ ಒಂದು  ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರಮಂಥನ ಕಾಲದಲ್ಲಿ ಕಡೆಯುವ ಕೆಲಸವು ಸಾಗಿದಂತೆ ಉಚ್ಛೈಶ್ರವಸ್ಸು ಎಂಬ ಕುದುರೆಯು ಸಮುದ್ರದಿಂದ ಹೊರ ಬಂದಿತು. ಕುದುರೆಯ ಬಾಲವು ಕಪ್ಪಗಿದೆ ಎಂದು ಸರ್ಪಗಳ ಮಾತೆಯಾದ ಕದ್ರುವು ಹಾಗೂ ಬಾಲವು ಬಿಳಿಯದಾಗಿದೆ ಎಂದು ಗರುಡನ ತಾಯಿಯಾದ ವಿನುತೆಯ ಮಧ್ಯೆ ವಿವಾದ ಉಂಟಾಗುತ್ತದೆ. ವಾಸ್ತವವಾಗಿ ಕುದುರೆಯ ಬಾಲವು ಕಪ್ಪಾಗಿ ಇರಲಿಲ್ಲ. ಕದ್ರುವಿಗೆ ತಾನು ಸೋಲುತ್ತೇನೆಂಬ ಭೀತಿಯುಂಟಾಯಿತು. ಕೂಡಲೇ ತನ್ನ ಮಕ್ಕಳಾದ ಸರ್ಪಗಳನ್ನು ಕರೆದು ತಮಗಿರುವ ವಿಷದ ಪ್ರಭಾವದಿಂದಾಗಿ ಬಾಲವನ್ನು ಕಪ್ಪಾಗುವಂತೆ ಮಾಡಲು ಆಜ್ಞಾಪಿಸಿದಳು. ಆದರೆ, ಇದು ಅನ್ಯಾಯವೆಂದು ವಾದಿಸಿದ ಸರ್ಪಗಳು ತಾಯಿಯ ಮಾತಿಗೆ ಬೆಲೆ ಕೊಡಲಿಲ್ಲ. ಮಕ್ಕಳ ಅವಿಧೇಯತೆಯಿಂದ ಕೋಪಗೊಂಡ ಕದ್ರುವು ಸರ್ಪಗಳು ನಾಶವಾಗಲಿ ಎಂದು ಶಪಿಸಿದಳು. ‌     ‌                 ‌ ‌                    ‌       ‌       ‌                                                             ತಾಯಿಯ ಶಾಪವನ್ನು ಕೇಳಿದ ಸರ್ಪಗಳು ಹೆದರಿಕೆಯಿಂದ ಬಳಲಿ ಬೆಂಡಾದವು. ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದ ಕುದುರೆಯ ಬಾಲವು ಕಪ್ಪಗಾಗುವಂತೆ ಮಾಡಿ ಗರುಡನ ತಾಯಿಯಾದ ವಿನುತೆಯು ಕದ್ರುವಿನ ದಾಸಿಯಾಗುವಂತೆ ಮಾಡಿದವು. ಆದರೂ, ತಾಯಿಯ ಶಾಪವು ತನ್ನ ಕೆಲಸವನ್ನು ಮಾಡಲಾರಂಭಿಸಿತು. ಇದರಿಂದ ಸರ್ಪಗಳ ಶರೀರವು ಬಿಸಿಯಾಗಿ ಸುಡಲಾರಂಭಿಸಿತು. ಬಿಸಿಯಿಂದ ಉಂಟಾದ ಉರಿ ಮತ್ತು ದಾಹವನ್ನು ಶಮನ ಮಾಡುವ ಸಲುವಾಗಿ ಸರ್ಪಗಳಿಗೆ ಹಾಲು ಮತ್ತು ತುಪ್ಪದಿಂದ ಸ್ನಾನ ಮಾಡಿಸುವ ಪದ್ಧತಿಯು ಪ್ರಾರಂಭವಾಯಿತು.  ‌‌              ‌     ‌  ‌    ‌                                                                                                                                                                                                                 ತನಿ ಎರೆಯುವ ಸಂಪ್ರದಾಯ ಬರಲು ಮತ್ತೊಂದು ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರ ಮಂಥನ ಮಾಡುವಾಗ ಮಂದರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ದೇವತೆಗಳು ಮತ್ತು ದಾನವರು ಸರ್ಪ ರಾಜನಾದ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ಕಡೆದು ಅಮೃತವನ್ನು ಪಡೆದರು. ಒರಟಾಗಿದ್ದ ಕಲ್ಲು ಬಂಡೆ, ಮುಳ್ಳುಗಳಿಂದ ಕೂಡಿದ್ದ ಮಂದರ ಪರ್ವತಕ್ಕೆ ಹಗ್ಗದಂತೆ ವಾಸುಕಿಯನ್ನು ಸುತ್ತಿ ಸಮುದ್ರವನ್ನು ಕಡೆದದ್ದರಿಂದ ವಾಸುಕಿಯ ಮೈಯೆಲ್ಲವೂ ಕಿತ್ತು ಹೋಗಿ, ತೀವ್ರ ರಕ್ತಸ್ರಾವದಿಂದ ಉರಿ ನೋವುಗಳನ್ನು ಅನುಭವಿಸಬೇಕಾಯಿತು. ಈ ಬಾಧೆಯನ್ನು ಶಮನ ಮಾಡುವ ಸಲುವಾಗಿ ತುಪ್ಪವನ್ನು ಹಚ್ಚಿ ಹಾಲಿನಿಂದ ಅಭಿಷೇಕ ಮಾಡಿ ನೋವು ಉರಿಯನ್ನು ಶಮನ ಮಾಡಲಾಯಿತು. ‌               ‌       ‌     ‌                                                                                                                                                                     ಹಾಲು ತುಪ್ಪ ಎರೆಯುವುದರಿಂದ ಸರ್ಪಗಳು ಶಾಂತಚಿತ್ತವಾಗಿ, ಭೂಲೋಕದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುವ ಮಾನವರನ್ನು ಹರಸಿ, ಅವರ ಸಂಕಟಗಳನ್ಮು ಪರಿಹರಿಸುವರೆಂಬ ನಂಬಿಕೆ ಪ್ರಚಾರಕ್ಕೆ ಬಂದಿರುತ್ತದೆ. ತಲೆಯೆಲ್ಲಾ ಗಾಯಗಳಾಗಿ ಯಾವುದೇ ಔಷಧೋಪಚಾರಗಳಿಂದ ವಾಸಿಯಾಗದಿದ್ದಾಗ, ಕಿವಿ ಸೋರುತ್ತಿದ್ದಾಗ, ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಕಟಗಳನ್ನು ಅನುಭವಿಸುತ್ತಿದ್ದಾಗ, ರೋಗ ರುಜಿನಗಳಿಂದ ಬಳಲುತ್ತಿದ್ದಾಗ ನಾಗರ ಕಲ್ಲಿಗೆ ಭಕ್ತಿಯಿಂದ ತನಿ ಎರೆದು ನಾಗ ದೇವತೆಗಳ ಆಶೀರ್ವಾದ ಬಲದಿಂದ ಸಂಕಟಗಳನ್ನು ಪರಿಹರಿಸಿಕೊಳ್ಳುತ್ತಾರೆ.   ‌     ‌    ‌     ‌    ‌        ‌       ‌                 ‌           ‌         ‌                                                                     *ತನಿ ಎರೆಯುವ ಕ್ರಮ*:-  ನಾಗರ ಕಲ್ಲಿಗೆ ತನಿ ಎರೆಯಲು ನಿಶ್ಚಯಿಸಿದ ಹಿಂದಿನ ದಿನ ಫಲಾಹಾರ ಅಥವಾ ಹಾಲನ್ನಷ್ಟೇ ಸೇವಿಸಬೇಕು. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ,  ಮಡಿ ಬಟ್ಟೆಗಳನ್ನು ಧರಿಸಿ ತನಿ ಎರೆಯಲು ತಯಾರಾಗಬೇಕು. ತಣ್ಣೀರಿನ ಸ್ನಾನ ಮಾಡಲು ಆಗದಿದ್ದವರು ಬಿಸಿ ನೀರಿನ ತಲೆ ಸ್ನಾನ ಮಾಡಬಹುದು. ಈ ಕಾರ್ಯಕ್ರಮಕ್ಕೆ ಬೇಕಾಗಿರುವುದು ಭಕ್ತಿ ಶ್ರದ್ಧೆ ಬಹಳ ಮುಖ್ಯ.  ‌                  ‌                                                        ‌                                                                    *ಪೂಜೆಗೆ ಬೇಕಾಗುವ ಸಾಮಗ್ರಿಗಳು* :- ‌                                                                 ೧. ಅರಿಶಿನ, ಕುಂಕುಮ, ಗಂಧ, ವೀಳ್ಯದೆಲೆ, ಅಡಿಕೆ, ಗಂಧದ ಕಡ್ಡಿ, ಕರ್ಪೂರ.                                                        ೨. ಬಿಡಿ ಹೂಗಳು, ಕಟ್ಟಿದ ಹೂಗಳು, ಗೆಜ್ಜೆ ವಸ್ತ್ರ.                                                               ೩. ತಟ್ಟೆ, ಬಟ್ಟಲು, ಆರತಿ ತಟ್ಟೆ, ಹಲಗಾರತಿ, ಹೂಬತ್ತಿ, ತುಪ್ಪದ ಬತ್ತಿ.                                                                            ೪. ಹಸುವಿನ ಹಾಲು (ಕಾಯಿಸಿರಬಾರದು),  ಹಸುವಿನ ತುಪ್ಪ.                                                                          ೫. ನೈವೇದ್ಯ - ನೆನೆಸಿದ ಹಸಿಕಡಲೆ, ಚಿಗುಳಿ ಉಂಡೆ, ಹಸಿ ಅಕ್ಕಿ ತಂಬಿಟ್ಟು. ಇದನ್ನು ಹೊರತುಪಡಿಸಿ ಸಾಧ್ಯವಾದರೆ ಬೇರೆ ಸಿಹಿ ತಿಂಡಿ - ಕಜ್ಜಾಯ, ಹೋಳಿಗೆ....ಮಾಡಬಹುದು. (ಎಲ್ಲವನ್ನೂ ಸ್ನಾನ ಮಾಡಿ, ಮಡಿಯಿಂದ ಮಾತನಾಡದೇ,  ಎಂಜಲು ಮಾಡದೇ ತಯಾರಿಸಬೇಕು).                                     ೬. ಹಣ್ಣುಗಳು, ತೆಂಗಿನಕಾಯಿ.                                      ‌ ‌                                                                 ‌                             ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ನಾಗರಕಲ್ಲಿಗೆ ತನಿ ಎರೆಯುವ ಪದ್ಧತಿಯು ಸಾಮಾನ್ಯವಾಗಿರುತ್ತದೆ. ಇಂತಹ ಅನುಕೂಲವಿಲ್ಲದವರು ಮನೆಯಲ್ಲಿಯೇ ಬೆಳ್ಳಿಯ ನಾಗಪ್ಪನನ್ನಾಗಲೀ ಅಥವಾ ಬೇರಾವುದೇ ನಾಗರ ಮೂರ್ತಿಯನ್ನಾಗಲೀ ತಟ್ಟೆಯಲ್ಲಿಟ್ಟು  ಹಾಲು ತುಪ್ಪದ ತನಿ ಎರೆಯಬಹುದು. ಹೇಗೆ ಮಾಡಿದರೂ ಭಕ್ತಿ, ಶ್ರದ್ಧೆಗಳಿಂದ ಆಚರಣೆ ಮಾಡಿದ್ದಲ್ಲಿ ಮಾತ್ರ ಫಲಗಳು ಸಿಕ್ಕೇ ಸಿಗುತ್ತವೆ.  ‌        ‌         ‌             ‌                       ‌                   ‌                                                                            *ಪೂಜಾ ವಿಧಾನ* :-  ತನಿ ಎರೆಯುವುದರಲ್ಲಿ ಯಾವುದೇ ಲೋಪದೋಷಗಳನ್ನು ಮಾಡಬಾರದು. ಯಾವುದೇ ರೀತಿಯ ಮೈಲಿಗೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪೂಜೆ ಸಲ್ಲಿಸುವ ಕ್ರಮದಂತೆಯೇ ನೆರವೇರಿಸಬೇಕು. ಸರ್ಪ ಗಾಯತ್ರೀ ಮಂತ್ರ, ಸರ್ಪ ಸೂಕ್ತ, ಸುಬ್ರಹ್ಮಣ್ಯ ಅಷ್ಟೋತ್ತರ ಮುಂತಾದವುಗಳನ್ನು ಹೇಳಿಕೊಳ್ಳುತ್ತಾ ಭಕ್ತಿಯಿಂದ ಆರಾಧನೆ ಮಾಡಬೇಕು. ಮೊದಲಿಗೆ ನಾಗದೇವತೆಗಳಿಗೆ ಸಂಕಲ್ಪ ಮಾಡಿ, ನೀರಿನ ಅಭಿಷೇಕ ಮಾಡಿ. ಹಾಲು ಮತ್ತು ತುಪ್ಪದ ಅಭಿಷೇಕ ಮಾಡಬೇಕು. ಮೂರ್ತಿಗಳನ್ನು ಸ್ವಚ್ಛವಾಗಿ ಯಾವುದೇ ಅಂಟು‌ ಇಲ್ಲದಂತೆ ತೊಳೆಯಬೇಕು.  ಅರಿಶಿನವನ್ನು ಕಲಸಿ ಮೂರ್ತಿಗಳಿಗೆ ಸಂಪೂರ್ಣವಾಗಿ ಲೇಪಿಸಬೇಕು.‌ ಗಂಧ, ಕುಂಕುಮ, ಪುಷ್ಪ ಮಾಲಿಕೆ, ಗೆಜ್ಜೆ ವಸ್ತ್ರಗಳಿಂದ ಅಲಂಕರಿಸಬೇಕು.  ‌ಪುಷ್ಪಾಕ್ಷತೆಗಳಿಂದ ಅರ್ಚಸಿ, ಧೂಪ, ದೀಪ, ನೈವೇದ್ಯವನ್ನು ಸಮರ್ಪಿಸಿ, ಮಂಗಳ ನೀರಾಂಜನ ಸಲ್ಲಿಸಬೇಕು. ನಂತರ ದೇವರಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ, ಮನಸ್ಸಿನಲ್ಲಿರುವ ಕೋರಿಕೆಯನ್ನು ಸಲ್ಲಿಸಿ ಅವುಗಳನ್ನು ಈಡೇರಿಸುವಂತೆ ಸರ್ಪ ದೇವತೆಗಳನ್ನು ಪ್ರಾರ್ಥಿಸಬೇಕು. ಪೂಜೆಯನ್ನು ಸಾಂಗವಾಗಿ ನೆರವೇರಿಸಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ, ಹೂಗಳನ್ನು ನೀಡಬೇಕು. ‌‌ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ ಯಥೋಚಿತವಾಗಿ ದಾನ ಮಾಡಬೇಕು.                                      ‌    ‌         ‌           ‌                                     ‌ 
*ಮುಖ್ಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳು* :                                                         ೧.  ವ್ರತಾಚರಣೆ ಮಾಡುವವರು ಹಿಂದಿನ ದಿನ ಹಾಗೂ ಪೂಜೆಯ ದಿನ ಮಾಂಸ ಮದಿರೆಗಳ ಸೇವನೆ ಮಾಡಿರಬಾರದು.                                                               ೨‌. ಪೂಜೆಯ ದಿನ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿಗಳನ್ನು ಬಳಸಬಾರದು.                                                         ೩. ಪೂಜೆ ಸಲ್ಲಿಸುವವರು ಅವಶ್ಯವಾಗಿ ಮಡಿ ವಸ್ತ್ರಗಳನ್ನು ಧರಿಸಬೇಕು. ಪುರುಷರು ಪಂಚೆ ಮತ್ತು ಶಲ್ಯ,  ಸ್ತ್ರೀಯರು ಸೀರೆ ಕುಪ್ಪಸ. ಯಾವುದೇ ಕಾರಣಕ್ಕೂ ಪಾಶ್ಚಿಮಾತ್ಯ ವಸ್ತ್ರಗಳನ್ನು ಧರಿಸಿ ಮಾಡಬಾರದು.                                                               ೪. ಹಾಲು ತುಪ್ಪಗಳನ್ನು ಬೆಳ್ಳಿ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸಿ ಅರ್ಪಿಸಬೇಕು‌. ಹಾಲಿನ ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ಹಾಕಬಾರದು.                                                          ೫. ಕೆಲವು ಜನರಿಗೆ ಹಾಲ ಅಥವಾ ಮೊಸರನ್ನು ಸುರಿದು ಹಾಗೆ ಹೋಗುವ ಅಭ್ಯಾಸ ಇರುತ್ತದೆ. ಇಂತಹವರು ಮಹಾ ದೋಷಕ್ಕೆ ಗುರಿಯಾಗುತ್ತಾರೆ. ‌           ‌             ‌       ‌                                                                ‌   
‌  *ಸರ್ಪಾರಾಧನೆ* ‌        ‌‌         ‌     ‌         ‌          ‌                                                                                                 ಸರ್ಪ ದೇವತೆಗಳ ಆರಾಧನೆಯನ್ನು ಪ್ರತಿ ಮಾಸದ ಶುಕ್ಲ ಪಕ್ಷದ ಮುಖ್ಯವಾಗಿ ಪಂಚಮಿ, ಷಷ್ಠೀ ದಿನಗಳಂದು, ಅಲ್ಲದೇ ಬಿದಿಗೆ,‌ ತದಿಗೆ, ಚೌತಿ, ಸಪ್ತಮಿ, ಅಷ್ಟಮಿ ಅಥವಾ ಪೂರ್ಣಿಮಾ ತಿಥಿಗಳಲ್ಲಿ, ಮಂಗಳವಾರ, ಗುರುವಾರ, ಶುಕ್ರವಾರ, ಸೋಮವಾರ ದಿನಗಳಲ್ಲಿ ಮಾಡಬಹುದು. ಈ ದಿನಗಳಲ್ಲಿ ಆರಿದ್ರಾ ಅಥವಾ ಆಶ್ಲೇಷ ನಕ್ಷತ್ರಗಳು ಬಂದರೆ ಇನ್ನೂ ವಿಶೇಷ ಫಲದಾಯಕವಾಗಿರುತ್ತದೆ. ತಿಳಿದೋ ಅಥವಾ ತಿಳಿಯದೆಯೋ ಮಾಡಿರಬಹುದಾಗಿರುವ ಸರ್ಪ ನಿಂದನೆ, ಸರ್ಪ ಹತ್ಯೆ, ಸರ್ಪ ವಾಸಸ್ಥಾನ ನಾಶ, ಇವೇ ಮೊದಲಾದ ಅಪಚಾರಗಳಿಂದ ಉಂಟಾಗಿರುವ ಸರ್ಪಶಾಪ, ಸರ್ಪದೋಷ ಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು  ನಾಗದೇವತೆಗಳ ಆರಾಧನೆ ಅತ್ಯಂತ ಸುಲಭದ ಮಾರ್ಗ.  ‌          ‌      ‌           ‌      ‌         ‌                                                                                                                                                                                   ನಾಗ ಪೂಜೆಯನ್ನು ಪರಿಶುದ್ಧವಾಗಿರುವ ಸ್ಥಳದಲ್ಲಿಯೇ ಆಚರಿಸಬೇಕು. ಮನೆಯಲ್ಲಿ ಮಾಡುವುದಾದರೂ ಸ್ಥಳವನ್ನು ಶುದ್ಧೀಕರಿಸಿ ಪೂಜೆಯನ್ನು ಮಾಡಬೇಕು.‌        ‌    ‌    ‌                                                                                                                                                           ‌ll ಶ್ರೀ ನವನಾಗ ಅಷ್ಟೋತ್ತರ ಶತನಾಮಾವಳಿ ll 

ಓಂ ಅನಂತನಾಗಾಯ ನಮಃ
ಓಂ ಅನನ್ತರಾಯ  ನಮಃ
ಓಂ ಅನನ್ತಮಾತ್ರಾಯ  ನಮಃ
ಓಂ ಅನಾಮಧೇಯಾಯ ನಮಃ  
ಓಂ ಅನ್ತರಾತ್ಮನೇ ನಮಃ
ಓಂ ಅನನ್ತಾಯ ನಮಃ
ಓಂ ಅನಾಭಾಸಾಯ ನಮಃ 
ಓಂ ಅನಾಧಾರಾಯ ನಮಃ 
ಓಂ ಅನಾಶ್ರಯಾಯ ನಮಃ 
ಓಂ ಅನಿರುಕ್ತಾಯ ನಮಃ
ಓಂ ಅನನ್ನಮಯಾಯ ನಮಃ 
ಓಂ ಅನಿರ್ವಚನೀಯಾಯ ನಮಃ 12

ಓಂ ವಾಸುಕಿನಾಗಾಯ ನಮಃ
ಓಂ ವಾಸಸಕಲಾಧಾರಾಯ ನಮಃ
ಓಂ ವಾಸವಾದ್ಯರ್ಚಿತಾಯ ನಮಃ
ಓಂ ವಾಗ್ವಿಚಕ್ಷಣಾಯ ನಮಃ
ಓಂ ವಾಕ್ಯಸಮಾವೃತಾಯ ನಮಃ
ಓಂ ವಾಮಪಾಶಾಯ ನಮಃ 
ಓಂ ವಾರಿವಸ್ಕೃತಾಯ ನಮಃ
ಓಂ ವನನರ್ತಕಾಯ ನಮಃ
ಓಂ ವಪಯೇ ನಮಃ
ಓಂ ವಾರಾಂಗನಾರ್ಚಿತಾಯ ನಮಃ 
ಓಂ ವಾಮಾಗಮಪೂಜಿತಾಯ ನಮಃ
ಓಂ ವಾಹನಾದಿವಿಶೇಷಿತಾಯ ನಮಃ 24

ಓಂ ಶೇಷನಾಗಾಯ ನಮಃ
ಓಂ ಶಾನ್ತಾತ್ಮನೇ ನಮಃ
ಓಂ ಶಾಶ್ವತಾಯ ನಮಃ
ಓಂ ಶಾನ್ತಿದಾಯ ನಮಃ
ಓಂ ಶಾನ್ತಾರಯೇ ನಮಃ 
ಓಂ ಶಂಗಾಯ ನಮಃ 
ಓಂ ಶಾನ್ತಪ್ರಿಯಾಯ ನಮಃ
ಓಂ ಶುಭಾನನಾಯ ನಮಃ
ಓಂ ಶಮಾಯ ನಮಃ
ಓಂ ಶುಭಾತ್ಮನೇ ನಮಃ 
ಓಂ ಶುದ್ಧಾತ್ಮನೇ ನಮಃ
ಓಂ ಶಕ್ತಿಮಾರ್ಗಪರಾಯಣಾಯ ನಮಃ
36

ಓಂ ಪದ್ಮನಾಭನಾಗಾಯ ನಮಃ
ಓಂ ಪರಮಾಯ ನಮಃ 
ಓಂ ಪದಾಯ ನಮಃ 
ಓಂ ಪರಮಾಯ  ನಮಃ
ಓಂ ಪರಮಾದಾಯ ನಮಃ
ಓಂ ಪರವಿದ್ಯಾವಿಕರ್ಷಣಾಯ ನಮಃ 
ಓಂ ಪತಯೇ ನಮಃ 
ಓಂ ಪಾತಿತ್ಯಸಂಹರ್ತ್ರೇ ನಮಃ 
ಓಂ ಪರೋನ್ನತಿಮತೇ ನಮಃ 
ಓಂ ಪರಮಸನ್ತೋಷಾಯ ನಮಃ 
ಓಂ ಪರನಿರ್ವಾಣತೃಪ್ತಯೇ ನಮಃ 
ಓಂ ಪರಸಚ್ಚಿತ್ಸುಖಾತ್ಮಕಾಯ ನಮಃ 48

ಓಂ ಕಂಬಲನಾಗಾಯ ನಮಃ
ಓಂ ಕರುಣಾಕರಾಯ ನಮಃ 
ಓಂ ಕಲ್ಪಾತೀತಾಯ ನಮಃ
ಓಂ ಕಲ್ಪನಾರಹಿತಾಯ ನಮಃ 
ಓಂ ಕಲ್ಪಸಾಕ್ಷಿಣೇ ನಮಃ
ಓಂ ಕಲ್ಪಕವತ್ಸ್ಥಿತಾಯ ನಮಃ
ಓಂ ಕರ್ಮಾಧ್ಯಕ್ಷಾಯ ನಮಃ
ಓಂ ಕುಂತಸಿದ್ಧಾಯ ನಮಃ 
ಓಂ ಕುಂತಮೇಧಾಯ ನಮಃ
ಓಂ ಕೃತಿಸಾರಜ್ಞಾಯ ನಮಃ
ಓಂ ಕರುಣಾತ್ಮನೇ ನಮಃ
ಓಂ ಕಾರಣಸಾಕ್ಷಿಣೇ ನಮಃ 60

ಓಂ ಶಂಕಪಾಲನಾಗಾಯ ನಮಃ
ಓಂ ಶತಯಾಗಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶಮಪ್ರಾಪ್ಯಾಯ
ಓಂ ಶರ್ಮದಾಯ ನಮಃ
ಓಂ ಶತಕ್ರತವೇ ನಮಃ
ಓಂ ಶುಭದಕ್ಷಾಯ ನಮಃ
ಓಂ ಶಮನಕ್ಷಮಾಯ ನಮಃ
ಓಂ ಶರ್ವಾಯ ನಮಃ
ಓಂ ಶುಷ್ಕ್ಯಾಯ ನಮಃ
ಓಂ ಶೃಂಗಾರರೂಪಾಯ ನಮಃ
ಓಂ ಶುದ್ಧಹೃದಯಾಯ ನಮಃ 72

ಓಂ ದೃತರಾಷ್ಟ್ರನಾಗಾಯ ನಮಃ
ಓಂ ದೃಢವ್ರತಾಯ ನಮಃ
ಓಂ ದೃಪ್ತಾಯ ನಮಃ
ಓಂ ದ್ರಷ್ಟ್ರೇ ನಮಃ
ಓಂ ದ್ರುಹಿಣಾಯ ನಮಃ
ಓಂ ದೂರಾಯ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ದ್ವಿತನವೇ ನಮಃ
ಓಂ ದೃಢಾಯುಧಾಯ ನಮಃ
ಓಂ ದೃಷ್ಟಿಪ್ರದಾಯ ನಮಃ
ಓಂ ದ್ರೌಣಿರಕ್ಷಾವಿಚಕ್ಷಣಾಯ ನಮಃ
ಓಂ ದೃಪ್ತಕ್ಷತ್ರಕುಲಾಂತಕಾಯ ನಮಃ 86

ಓಂ ತಕ್ಷಕನಾಗಾಯ ನಮಃ
ಓಂ ತದಾಕಾರಾಯ ನಮಃ
ಓಂ ತತ್ತ್ವದಾಯ ನಮಃ
ಓಂ ತರಣಿಪ್ರಿಯಾಯ ನಮಃ
ಓಂ ತಾನ್ತ್ರೇಯಾಯ ನಮಃ
ಓಂ ತಮೋಘ್ನೇ ನಮಃ
ಓಂ ತನ್ವಿನೇ ನಮಃ
ಓಂ ತರುಪ್ರಿಯಾಯ ನಮಃ
ಓಂ ತಪಸ್ವಿನೇ ನಮಃ
ಓಂ ತಾಪಸಿನೇ ನಮಃ
ಓಂ ತಾಪತ್ರಯಾತೀತಾಯ ನಮಃ
ಓಂ ತದಾಕಾರಸ್ತಾಂಡವಿನೇ ನಮಃ 96

ಓಂ ಕಾಲಿಯನಾಗಾಯ ನಮಃ
ಓಂ ಕಾಲಿಯೋಗಾಯ ನಮಃ
ಓಂ ಕಾಲಿಸಮಾಯ ನಮಃ
ಓಂ ಕಾಲಿನಮ್ರಾಯ ನಮಃ
ಓಂ ಕಾಲಾಯ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಲಕೃಪಾನಿಧಯೇ ನಮಃ
ಓಂ ಕಾಲವಿತ್ಕಾಲಾಯ ನಮಃ
ಓಂ ಕಾಲಚಕ್ರಪ್ರವರ್ತಕಾಯ ನಮಃ
ಓಂ ಕಾರ್ಯಾನುತುದಾಯ ನಮಃ
ಓಂ ಕಾರ್ಯಕಾರಣರೂಪಾಯ ನಮಃ
ಓಂ ಕಾರ್ಯಾನನ್ದವಿಹೀನಾಯ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ನವನಾಗ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
[27/12/2022, 1:39 PM] Pandit Venkatesh. Astrologer. Kannada: ಷಷ್ಠಿ ಪ್ರಯುಕ್ತ ಒಂದು ಉಪಯುಕ್ತ ಮಾಹಿತಿ ಇದೆ ಓದಿ
     ‌      ‌                                           ‌          
*ಇನ್ನೂ ಮಕ್ಕಳಾಗಿಲ್ಲವೇ ? ಈ ಮಂತ್ರವನ್ನು ಪಠಿಸಿದರೆ ಶೀಘ್ರವೇ ಗರ್ಭಧಾರಣೆಯಾಗುವುದು*

ಮದುವೆಯಾದ ದಂಪತಿಗಳು ಮಗುವಿಗಾಗಿ ಪ್ರಯತ್ನಿಸಿ, ಮಕ್ಕಳಾಗುವ ಸೂಚನೆ ಕಂಡು ಬರದಿದ್ದಾಗ ವೈದ್ಯರಲ್ಲಿಗೆ ಹೋಗುವುದು ಸಾಮಾನ್ಯ. ವೈದ್ಯರು ನೀಡುವ ಔಷಧಿಯೊಂದಿಗೆ ಕೆಲವು ಪರಿಣಾಮಕಾರಿ ಮಂತ್ರಗಳನ್ನು ಪಠಿಸಿದರೂ ಸಂತಾನ ಭಾಗ್ಯ ನಿಮಗೆ ಒಲಿಯಬಹುದು.
  
ಮದುವೆಯಾದ ಎಲ್ಲಾ ದಂಪತಿಗಳ ಆಸೆ ಮಗು. ತಮ್ಮದೇ ರಕ್ತವನ್ನು ಹಂಚಿಕೊಂಡು ಬೆಳೆಯುವ ಮಗುವಿನ ಮೇಲೆ ಎಲ್ಲಾ ದಂಪತಿಗಳಿಗೂ ಅಪಾರ ನಿರೀಕ್ಷೆ, ಆಸೆಗಳಿರುತ್ತದೆ. ಮಗುವಾದ ಮೇಲೆ ತಮ್ಮ ಕೌಟುಂಬಿಕ ಜೀವನಕ್ಕೊಂದು ಸಂಪೂರ್ಣವಾದ ಅರ್ಥ ಬರುತ್ತದೆ ಎಂಬ ನಂಬಿಕೆ ದಂಪತಿಗಳದ್ದು ಆದರೆ ಈ ನಿರೀಕ್ಷೆಗಳನ್ನು ಈಡೇರಿಸಲು ಹಲವಾರು ಕಷ್ಟಗಳು ಕಂಡು ಬರಬಹುದು. ದೈಹಿಕ ಅಥವಾ ಇತರ ಕಾರಣಗಳು ಮಗುವಾಗದಿರಲು ಕಾರಣವಾಗಬಹುದು. ಕೆಲವೊಂದು ಪೂಜೆ, ಮಂತ್ರಗಳನ್ನು ಪಠಿಸುವ ಮೂಲಕ ಮಗುವಿಗಾಗಿ ಪ್ರಯತ್ನಿಸಿ. ಇಂತಹ ಕೆಲವೊಂದು ಪೂಜೆ, ಮಂತ್ರಗಳ ಮಾಹಿತಿ ಇಲ್ಲಿದೆ ನೋಡಿ.

*ಷಷ್ಠಿ ಪೂಜೆ:* ಮದುವೆಯಾದ ಮಹಿಳೆಯರಲ್ಲಿ ಮಕ್ಕಳಾಗಲು ಷಷ್ಠಿ ಪೂಜೆ ಅತ್ಯಂತ ಪರಿಣಾಮಕಾರಿ ಪೂಜೆಯಾಗಿದೆ. ಷಷ್ಠಿ ತಿಥಿಯಂದು ಮಾಡುವ ಪೂಜೆಯೇ ಷಷ್ಠಿ ಪೂಜೆ. ಈ ಪೂಜೆಯನ್ನು ಚಾಂದ್ರಮಾಸದ, ಶುಕ್ಲಪಕ್ಷದ ಆರನೇ ದಿನದಂದು ಮಾಡಲಾಗುತ್ತದೆ. ಅಮಾವಾಸ್ಯೆ ನಂತರ ಬರುವ ಆರನೇ ದಿನದಲ್ಲಿ ಈ ಪೂಜೆಯನ್ನು ಮಾಡಲಾಗುತ್ತದೆ. ಷಷ್ಠಿ ಪೂಜೆಯಂದು ಶಿವ ಹಾಗೂ ಪಾರ್ವತಿಯರ ಪುತ್ರನಾದ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. ಷಷ್ಠಿ ಪೂಜೆಯ ಮುಖ್ಯ ಅಂಶವೆಂದರೆ ವ್ರತ ಅಥವಾ ಉಪವಾಸ ವ್ರತ, ಷಷ್ಠಿಯ ದಿನದಂದು ಮುಂಜಾನೆ ಎದ್ದು ಮನೆಯ ಸದಸ್ಯರೆಲ್ಲರೂ ಪವಿತ್ರ ಸ್ನಾನ ಮಾಡಬೇಕು. ನಂತರ ಪೂಜೆ ಮಾಡುವಂತಹ ಪೂಜಾ ಕೋಣೆಯನ್ನು ಶುಚಿಗೊಳಿಸಿ, ಮೊದಲಿಗೆ ವಿಘ್ನ ನಿವಾರಕ ಗಣಪತಿಯ ಪೂಜೆ, ನಂತರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು. ಸೂರ್ಯೋದಯದ ನಂತರ ಆಹಾರ ಸೇವನೆ ಮಾಡಬಾರದು.

ಗಣಪತಿ ಹಾಗೂ ಸುಬ್ರಹ್ಮಣ್ಯನ ಮೂರ್ತಿಯನ್ನು ಅರಿಶಿಣ ಕುಂಕುಮ, ಗಂಧದಿಂದ ಅಲಂಕರಿಸಿ ನಂತರ ದೀಪ ಹಾಗೂ ಗಂಧದ ಕಡ್ಡಿಯನ್ನು ಬೆಳಗಬೇಕು. ಸುಬ್ರಹ್ಮಣ್ಯನ ಮೂರ್ತಿ ಮನೆಯಲ್ಲಿದ್ದರೆ ಅಭಿಷೇಕ ಮಾಡಬಹುದು. ಅದರಲ್ಲೂ ಹಾಲಿನ ಅಭಿಷೇಕ ಮಾಡುವುದು ಒಳ್ಳೆಯದು. ಇದರೊಂದಿಗೆ, ಮೊಸರು, ಜೇನುತುಪ್ಪ, ಎಳನೀರು, ಗಂಧದ ನೀರು, ಗುಲಾಬಿ ಜಲ, ವಿಭೂತಿ ಹಾಗೂ ಹಣ್ಣುಗಳಿಂದ ಅಭಿಷೇಕ ಮಾಡಬೇಕು.

ಮನೆಯಲ್ಲಿ ಅಭೀಷೇಕ ಮಾಡಲು ಸಾಧ್ಯವಾಗದಿದ್ದಲ್ಲಿ ಮನೆಯ ಹತ್ತಿರವಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಮುಂಚಿತವಾಗಿ ಅಭಿಷೇಕವನ್ನು ಬರೆಯಿಸಿ, ದೇವಸ್ಥಾನದ ಆಚರಣೆಯಂತೆ ಅಭಿಷೇಕದಲ್ಲಿ ಭಾಗಿಯಾಗಿ. ಮಂಗಳಾರಾತಿಯೊಂದಿಗೆ ಪೂಜೆಯನ್ನು ಸಮಾಪ್ತಿಗೊಳಿಸಿ. ಮನೆಯಲ್ಲೇ ಆಗಲಿ ಅಥವಾ ದೇವಸ್ಥಾನದಲ್ಲಿ ಆಗಲಿ ಪೂಜೆ ನೆರವೇರಿಸಿದಲ್ಲಿ ಕೊನೆಯಲ್ಲಿ ಪ್ರಸಾದವನ್ನು ಸ್ವೀಕರಿಸುವುದನ್ನು ಮರೆಯದಿರಿ.

ದೇವಸ್ಥಾನದಲ್ಲಿ ಪೂಜೆಯಾದ ನಂತರ ಸುಬ್ರಹ್ಮಣ್ಯನ ಪಾದಕ್ಕೆ ಹೂವನ್ನು ಅರ್ಪಿಸಿ ನಂತರ ಪ್ರಸಾದ ಸ್ವೀಕರಿಸಿ, ಮನೆಯಲ್ಲಿ ಷಷ್ಠಿ ಪೂಜೆ ಮಾಡಿದ್ದರೆ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ. ಕೆಲವರು ಪೂಜೆಯ ನಂತರ ಮಾತ್ರ ಸ್ವೀಕರಿಸಿ ಉಪವಾಸ ವೃತವನ್ನು ಸಂಜೆ ಕೈಬಿಡುತ್ತಾರೆ. ಕೆಲವರು ಮಧ್ಯಾಹ್ನ ಪೂಜೆಯ ಪ್ರಸಾದವನ್ನು ಸೂರ್ಯಾಸ್ತದ ನಂತರ ಸೇವಿಸಿ ಉಪವಾಸವನ್ನು ಕೊನೆಗೊಳಿಸುತ್ತಾರೆ.

ಪೂಜೆಯನ್ನು ಹೊರತು ಪಡಿಸಿ ಸುಬ್ರಹ್ಮಣ್ಯ ಕವಚಂ ಮಂತ್ರವನ್ನು ಪಠಿಸಬಹುದು. ಸಂತಾನ ಪ್ರಾಪ್ತಿಯನ್ನು ಪ್ರತಿನಿಧಿಸುವ ನಾಗದೇವತೆಯನ್ನೂ ಈ ದಿನ ಆರಾಧಿಸಬಹುದು. ಕೆಲವರು ಹಾವಿನ ಹುತ್ತ, ನಾಗರ ಕಲ್ಲು ಇರುವ ದೇವಸ್ಥಾನಗಳಲ್ಲಿ ಹಾಲು ಹಾಗೂ ಇತರ ವಸ್ತುಗಳನ್ನು ಅರ್ಪಿಸುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ನಾಗ ದೇವತೆಗೆ ಅಭಿಷೇಕವನ್ನೂ ಮಾಡಲಾಗುತ್ತದೆ. ಷಷ್ಠಿ ವ್ರತವನ್ನು ಅನುಕ್ರಮವಾಗಿ ಆರು ಬಾರಿ ಮಾಡಬೇಕೆನ್ನುವುದು ಸಂಪ್ರದಾಯ.

*ಗರ್ಭಧರಿಸಲು ಪರಿಣಾಮಕಾರಿ ಮಂತ್ರಗಳು*
ಮದುವೆಯಾದ ದಂಪತಿಗಳು ಮಗುವಿಗಾಗಿ ಪ್ರಯತ್ನಿಸಿ, ಮಕ್ಕಳಾಗುವ ಸೂಚನೆ ಕಂಡು ಬರದಿದ್ದಾಗ ವೈದ್ಯರಲ್ಲಿಗೆ ಹೋಗುವುದು ಸಾಮಾನ್ಯ. ವೈದ್ಯರು ನೀಡುವ ಔಷಧಿಯೊಂದಿಗೆ ಕೆಲವು ಪರಿಣಾಮಕಾರಿ ಮಂತ್ರಗಳನ್ನು ಪಠಿಸಿದರೂ ಸಂತಾನ ಭಾಗ್ಯ ನಿಮಗೆ ಒಲಿಯಬಹುದು...

1. *ಸಂತಾನ ಗೋಪಾಲ ಮಂತ್ರ:* ಈ ಮಂತ್ರವನ್ನು ಪಠಿಸುವಾಗ ನಿಮ್ಮ ತೋಳಿನಲ್ಲಿ ಮಗುವಿದೆಯೆಂದು ಭಾವಿಸಿಕೊಳ್ಳಿ, ಇನ್ನೊಂದು ಮುಖ್ಯ ಅಂಶವೆಂದರೆ ವೈದ್ಯರು ಹೇಳಿದರು ಸಹ, ಮಕ್ಕಳಾಗುವ ಭರವಸೆಯನ್ನು ಬಿಟ್ಟು ಬಿಡಬೇಡಿ. ನಿಮ್ಮ ಮೇಲೆ ನಿಮಗಿರುವ ಭರವಸೆಯಿಂದಲೇ ಮಕ್ಕಳಾಗಬಹುದು. ಈ ಮಂತ್ರವನ್ನು ಹೆರಿಗೆಯಾಗುವವರೆಗೂ ನಿತ್ಯ ಪಠಿಸಬಹುದು. ನಿಮ್ಮ ಸಂತತಿಯನ್ನು ವೃದ್ಧಿಸಲು ಈ ಮಂತ್ರ ಪಠಿಸುತ್ತಾ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯುವ ಮೂಲಕ ಸಂತಾನ ಪ್ರಾಪ್ತಿಯನ್ನು ಶೀಘ್ರದಲ್ಲಿ ಪಡೆಯಬಹುದು.

*ಓಂ ಶ್ರೀಂ ಹ್ರೀಂ ಕ್ಲೀಂ ಗ್ಲಂ ದೇವಕಿಸುತ ಗೋವಿಂದ | ವಾಸುದೇವ ಜಗಪತೇ ದೇಹಿ ಮೇ ತನಯಂ |*
*ಕೃಷ್ಣ ತ್ವಮಹಂ ಶರಣಾಗತಃ*

2.   *ಗಂಡು ಮಗುವಾಗಲುಮಂತ್ರ*:  ಅನೇಕರಿಗೆ ತಮಗೆ ಗಂಡು ಮಗುವೇ ಬೇಕೆಂಬ ಆಸೆಯಿರುತ್ತದೆ. ಗಂಡು ಮಗು ಬೇಕೆನ್ನುವವರು ಈ ಮಂತ್ರವನ್ನು ಪಠಿಸಬಹುದು. ಪ್ರತಿದಿನ ಸ್ನಾನ ಮಾಡಿದ ನಂತರ ಭಕ್ತಿಯಿಂದ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಮಹಾಮಾತೆ ದುರ್ಗೆಯು ಖಂಡಿತಾ ನಿಮ್ಮ ಆಸೆಯನ್ನು ಈಡೇರಿಸುತ್ತಾಳೆ.

*ಸರ್ವಬಾಧಾ ವಿನಿರ್ಮುಕ್ತೋ ಧನಧಾನ್ಯಸುತಾನ್ವಿತಃ |*
*ಮನುಷ್ಯೋ ಮಾತ್ಪ್ರಸಾದೇನ ಭವಿಷ್ಯತೀ ನ ಸಂಶಯಃ*

3.  *ಸಂತಾನ ಪ್ರಾಪ್ತಿ ಮಂತ್ರ*: ಈ ಮಂತ್ರವನ್ನು ಮಕ್ಕಳಾಗುವ ಸುದ್ದಿ ಕೇಳುವವರೆಗೂ ಪ್ರತಿದಿನ 108 ಬಾರಿ ಪಠಿಸುವುದು ಒಳ್ಳೆಯದು. ಸಾಧ್ಯವಾದರೆ ಜಪಮಾಲೆಯನ್ನು ಕೊಂಡುಕೊಳ್ಳಿ.
*ಓಂ ನಮೋ ಭಗವತೇ ಜಗತ್ಪ್ರಸುತಯೇ ನಮಃ*

4.  *ರಾಜರಾಜೇಶ್ವರಿ ಮಂತ್ರ:* ಈ ಮಂತ್ರವನ್ನು ಜಪಿಸುವಾಗ ಒಂದು ಪಾತ್ರೆಯ ತುಂಬಾ ನೀರು ಇಟ್ಟುಕೊಂಡು, ಮಂತ್ರ ಪಠಿಸುತ್ತಾ ದೇವಿಯ ಮೇಲೆ ಅರ್ಚಿಸಬೇಕು ಹಾಗೂ ದೇವಿಗೆ ನೀರಿನ ಹನಿಯನ್ನು ಸೇವಿಸಲು ನೀಡಬೇಕು. ಈ ಅಥರ್ವ ವೇದ ಮಂತ್ರವು ಅತ್ಯಂತ ಪ್ರಭಾವಶಾಲಿಯಾಗಿದ್ದು ಭಕ್ತಿಯಿಂದ ಪಠಿಸಿದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಈ ಮಂತ್ರವು ಗರ್ಭಧರಿಸಲು ಸೂಕ್ತ ಹಾಗೂ ಗರ್ಭಪಾತವಾಗುವುದನ್ನು ತಡೆಯಬಹುದು.

*ಪುಮಾಸಂ ಪತ್ರಂ ಜಾನೇ ತಂ ಪುಮಣಾನು ಜಯತಂ ಭಗವತೀ*
*ಪುತ್ರನಾಮ ಮಾತಾ ಜತನಾಮ ಜಮ್ಯಷ್ಯಂ ಯಾನ್‌ ಓಂ ನಮಃ*
*ಶಕ್ತಿರೂಪಾಯ ರಾಜರಾಜೇಶ್ವರಿ ಮಾಂ ಗೃಹೇ ಪುತ್ರಂ ಕುರು ಕುರು ಸ್ವಾಹಾ*

5.  *ಸಂತಾನ ಪ್ರಾಪ್ತಿಗಾಗಿ ಶ್ರೀಕೃಷ್ಣ ಮಂತ್ರ*: ನಿಮ್ಮ ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ನಿಮ್ಮ ಕಣ್ಮುಂದೆ ಇರಿಸಿ, ಈ ಮಂತ್ರವನ್ನು ಪಠಿಸಬೇಕು. ಕೆಲವೇ ದಿನಗಳಲ್ಲಿ ನೀವು ಬದಲಾವಣೆಯನ್ನು ಕಾಣಬಹುದು. ಹೃದಯದಿಂದ ಈ ಮಂತ್ರವನ್ನು ಶ್ರೀಕೃಷ್ಣನ ಮೇಲೆ ನಂಬಿಕೆ ಇರಿಸಿ ಸ್ಮರಣೆ ಮಾಡಿ.
*ಓಂ ಕಾಳಿಂಗ ಗೋಪಾಲವೇಷಧಾರ್ಯೇ ವಾಸುದೇವಾಯ ಹೂಂ ಫಟ್‌ ಸ್ವಾಹಾ |*

6. *ಗರ್ಭ ರಕ್ಷಾಂಬಿಕೆ ಗಾಯತ್ರಿ ಮಂತ್ರ*: ಗರ್ಭವತಿಯಾಗಲು ಅಪೇಕ್ಷಿಸುವ ಮಹಿಳೆಯರು ಈ ಮಂತ್ರ ಪಠಿಸಿದರೆ ಒಳ್ಳೆಯದು. ಬೆಳಗ್ಗಿನ ಪೂಜೆಯ ಸಮಯದಲ್ಲಿ ಪಠಿಸಿದರೆ ಇನ್ನೂ ಉತ್ತಮ.
*ಓಂ ಗರ್ಭರಕ್ಷಾಂಬಿಕೇ ವಿದ್ಮಯೇ ಮಂಗಳ ದೇವತಾಯೈ ಚ ಧೀಮಹೀ ತನ್ನೋ ದೇವೀಃ ಪ್ರಚೋದಯಾತ್‌*

7.   *ಗರ್ಭಧಾರಣೆಯಾಗಲು ಮಂತ್ರ*:  ಈ ಮಂತ್ರವನ್ನು ಹೆರಿಗೆಯಾಗುವವರೆಗೂ ನಿತ್ಯ ಪಠಿಸಬಹುದು. ನಿಮ್ಮ ಸಂತತಿಯನ್ನು ವೃದ್ಧಿಸಲು ಈ ಮಂತ್ರ ಪಠಿಸುತ್ತಾ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯುವ ಮೂಲಕ ಸಂತಾನ ಪ್ರಾಪ್ತಿಯನ್ನು ಶೀಘ್ರದಲ್ಲಿ ಪಡೆಯಬಹುದು. ಈ ಮಂತ್ರವನ್ನು ತಾಳ್ಮೆ ಹಾಗೂ ಭಕ್ತಿಯಿಂದ ದಿನನಿತ್ಯ ಪಠಿಸಿದಲ್ಲಿ ಮಕ್ಕಳನ್ನು ಪಡೆಯುವ ಭಾಗ್ಯ ನಿಮಗೆ ಒದಗಿ ಬರಬಹುದು.
*ದೇವಕೀ ಸುತ ಗೋಂವಿಂದ ವಾಸುದೇವ ಜಗತ್‌ಪತೇ*
*ಧೀಮಯೇ ತನಯಂ ಕೃಷ್ಣಾ ತ್ವಮಹಂ ಶರಣಂ ಕಧಹಾ ದೇವ ದೇವಾ*
*ಜಗನ್ನಾಥ ಗೋತ್ರ ವೃದ್ಧಿಕಾರ್ಪ ಪ್ರಭೋ ಧೀಮಯೇ ತನಯಂ ಶೀಘ್ರಂ ಆಯುಷ್ಮಾಂಧಂ ಯಶಶ್ರೀನಾಂ*

8.   *ಮೂಲ ಮಂತ್ರ*:  ಈ ಮಂತ್ರವು ಮನನ ಮಾಡಿಕೊಳ್ಳಲು ಬಹಳ ಸುಲಭ ಹಾಗೂ ಸರಳವಾಗಿದೆ. ಗರ್ಭಧರಿಸುವ ಸಮಯ ಬಂದಾಗ ಈ ಮಂತ್ರವನ್ನು ಪಠಿಸಬಹುದು. ಹಾಗೂ ಗರ್ಭಧಾರಣೆಯ ನಂತರ ಕಂಡು ಬರುವ ಅಪಾಯವನ್ನು ಈ ಮಂತ್ರ ಪಠಣದಿಂದ ನಿವಾರಿಸಬಹುದು
*ಓಂ ಹ್ರೀಂ ಲಜ್ಜಾಜ್ಜಾಲ್ಯಂ ತಃ ತಃ ಓಂ ಹ್ರೀಂ ಸ್ವಾಹಾ*

9.  *ಸ್ವಯಂವರ ಪಾರ್ವತೀ ಮಂತ್ರ*: ಸ್ವಯಂವರ ಪಾರ್ವತೀ ಮಂತ್ರ ಬಹಳ ಪ್ರಭಾವಶಾಲಿ ಮಂತ್ರವಾಗಿದ್ದು, ಯಶಸ್ವೀ ಮದುವೆಗಾಗಿ ಹಾಗೂ ಮೊದಲ ಮಗುವಿನ ನಿರೀಕ್ಷೆ ಮಾಡುವವರು ಪಠಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ಮದುವೆಯ ನಂತರ ಹಲವು ಉಪಯೋಗಗಳನ್ನು ನಿಮ್ಮ ಜೀವನದಲ್ಲಿ ಪಡೆಯಬಹುದು. ಈ ಮಂತ್ರವನ್ನು ಶುದ್ಧ ಹೃದಯದಿಂದ ಪಠಿಸಿದರೆ ಯಶಸ್ವೀ ದಾಂಪತ್ಯ ಜೀವನ ನಿಮ್ಮದಾಗುವುದು.
*ಓಂ ಹ್ರೀಂ ಯೋಗಿನೀಂ ಯೋಗಿನಿ ಯೋಗೇಶ್ವರೀ*
*ಯೋಗ ಭಯಂಕರೀ ಸಕಲ ಸ್ಥಾವರ*
*ಜಂಗಮಸ್ಯ ಮುಖ ಹೃದಯಂ ಮಮ*
*ವಶಂ ಆಕರ್ಷಾ ಆಕರ್ಷ್ಯಾ ನಮಃ*

ಈ ಎಲ್ಲಾ ಮಂತ್ರಗಳನ್ನು  ಭಕ್ತಿಯಿಂದ ದೇವರಲ್ಲಿ ನಂಬಿಕೆಯಿಟ್ಟು ಪ್ರಾರ್ಥಿಸಿದರೆ, ಮಕ್ಕಳಾಗದವರಿಗೆ ಶೀಘ್ರದಲ್ಲಿ ಸಂತಾನ ಪ್ರಾಪ್ತಿಯಾಗುವುದು. ದೈವಭಕ್ತಿಯ ಜೊತೆಗೆ ಆತ್ಮವಿಶ್ವಾಸ, ನಂಬಿಕೆ ನಿಮಗಿದ್ದಲ್ಲಿ ಮಕ್ಕಳಾಗುವುದಿಲ್ಲವೆಂಬ ಚಿಂತೆ ದೂರವಾಗಿ, ನಿಮ್ಮ ತೋಳಿನಲ್ಲಿ ಆಡುವ ಪುಟ್ಟ ಕಂದನ ನಗುವ ಕನಸನ್ನು ನೀವು ನನಸಾಗಿಸಬಹುದು. ಎಲ್ಲದಕ್ಕೂ ತಾಳ್ಮೆ ಮತ್ತು ಸಂಯಮ ಮುಖ್ಯ.

ಶ್ರೀ ಸುಬ್ರಹ್ಮಣ್ಯ ದೇವಾಲಯದ ಭಸ್ಮ ಮತ್ತು ಮಹತ್ವಗಳು.. (ಪಳನಿ ಭಸ್ಮ ಮತ್ತು ಇತ್ಯಾದಿ)

ಈ ಭಸ್ಮವು ಧಾರಣೆಗೆ ತುಂಬಾ ತುಂಬಾ ಶಕ್ತಿ ಮತ್ತು ಯೋಗ್ಯವಾದದ್ದು..

ಈ ಭಸ್ಮಧಾರಣೆಯಿಂದ ದೇಹದಲ್ಲಿ ಕಾಂತಿ ಹಾಗೂ ಶಕ್ತಿಯು ಜಾಸ್ತಿಯಾಗುತ್ತದೆ 
ನರಗಳ ದೌರ್ಬಲ್ಯ ಇರುವವರು ಭಸ್ಮಧಾರಣೆಯಿಂದ ಆರೋಗ್ಯವಂತರಾಗುತ್ತಾರೆ.

ಫಿಟ್ಸ್ ಖಾಯಿಲೆ ಇರುವವರು ಸುಬ್ರಹ್ಮಣ್ಯ ದೇವರ ಭಸ್ಮದಾರಣೆಯನ್ನು ಪ್ರತಿದಿನ ಮಾಡುತ್ತಾ ಬಂದರೆ, ಒಂದು ವರ್ಷದೊಳಗೆ ಫಿಟ್ಸ್ ನಿವಾರಣೆಯಾಗುತ್ತದೆ ಮತ್ತು ಮುಂದೆ ಎಂದೂ ಬರುವುದಿಲ್ಲ
ಸಣ್ಣಮಕ್ಕಳು ಹಠ ಮಾಡುತ್ತಿದ್ದರೆ , ರಚ್ಚೆ ಮಾಡುತ್ತಿದ್ದರೆ , ಆರೋಗ್ಯ ಕೆಡುತ್ತಿದ್ದರೆ, ಬಾಲಗ್ರಹ ದೋಷ ಆಗಿದ್ದರೆ , ಸುಬ್ರಹ್ಮಣ್ಯ ಸ್ವಾಮಿಯ ಭಸ್ಮಧಾರಣೆಯಿಂದ ದೋಷಗಳೆಲ್ಲಾ ನಿವಾರಣೆಯಾಗುತ್ತದೆ

ಯಾರಿಗೆ ತೊದಲು ಖಾಯಿಲೆಯಿದ್ದು ಮಾತನಾಡಲು ತೊಂದರೆಯಾಗುತ್ತದೆಯೋ, ಅಂಥವರು ದೇವರ ಹೆಸರು ಹೇಳಿ, ಈ ಭಸ್ಮವನ್ನು ಹಣೆಗೆ ಇಟ್ಟುಕೊಂಡು, ಭಕ್ತಿಯಿಂದ ಭಸ್ಮವನ್ನು ಹಾಲಿನಲ್ಲಿ ಕುಡಿಯುತ್ತಾ ಬಂದರೆ, ತೊದಲು ಸಂಪೂರ್ಣವಾಗಿ ವಾಸಿಯಾಗಿ ಶುದ್ಧವಾಗಿ ಎಲ್ಲರಂತೆ ಮಾತನಾಡುವವರಾಗುತ್ತಾರೆ.

ಯಾರಿಗೆ ವಿವಾಹ ವಯಸ್ಸು ಇದ್ದರೂ ಕೂಡ ಯಾವುದಾದರೂ ಕಾರಣದಿಂದ ವಿವಾಹವು ಮುಂದೆ ಹೋಗುತ್ತಿದ್ದರೆ, ಶ್ರೀ ಗಣಪತಿ ಅಥವಾ ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡಿಸಿ, ಭಸ್ಮವನ್ನು ಧರಿಸುತ್ತಾ ಬಂದರೆ, ವಿವಾಹದ ಸಕಲ ವಿಘ್ನಗಳು ನಿವಾರಣೆಯಾಗಿ, ವಿವಾಹವು ಬೇಗ ಸುಸೂತ್ರವಾಗಿ ನಡೆಯುತ್ತದೆ 

ಯಾರಿಗೆ ಬುದ್ಧಿಮಾಂದ್ಯತೆ ಇರುವ ಮಕ್ಕಳು ಇರುತ್ತಾರೋ ಅಂತಹವರಿಗೆ 18 ತಿಂಗಳು ಭಸ್ಮಧಾರಣೆಯಿಂದ ಬುದ್ಧಿಯು ಸರಿಹೋಗುತ್ತದೆ.
ಯಾರಿಗೆ ಸಂತಾನ ಭಾಗ್ಯವು ಇರುವುದಿಲ್ಲವೋ ಅಥವಾ ಮಕ್ಕಳಾಗಿ ಬದುಕುವುದಿಲ್ಲವೋ ಅಂಥವರು ಭಸ್ಮಧಾರಣೆ ಮಾಡಿ, ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುತ್ತಾ ಬಂದರೆ ಸಂತಾನಭಾಗ್ಯವಾಗುತ್ತದೆ. 

ಅಥವಾ ಬುಧವಾರ ಶ್ರೀ ಗಣಪತಿ ಹಾಗೂ ಸೋಮವಾರ ಶ್ರೀ ಶಿವನ ಪೂಜೆಯಿಂದನೂ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ವಿದ್ಯಾಭ್ಯಾಸದ ಸಮಯದಲ್ಲಿ ಮರೆವು ಜಾಸ್ತಿ ಇದ್ದರೆ, ಸುಬ್ರಹ್ಮಣ್ಯ ಸ್ವಾಮಿ ಭಸ್ಮಧಾರಣೆಯಿಂದ ಜ್ಞಾಪಕಶಕ್ತಿ ಜಾಸ್ತಿಯಾಗುತ್ತದೆ

ಜ್ಯೋತಿಷ್ಯ ಹೇಳುವವರು ಸುಬ್ರಹ್ಮಣ್ಯ ಸ್ವಾಮಿ ಪೂಜೆ ಮಾಡಿ, ಭಸ್ಮಧಾರಣೆ ಮಾಡಿದರೆ, ಉತ್ತಮ ವಾಕ್ಸಿದ್ಧಿ ಬಂದು ನುಡಿದಂತೆ ನಡೆಯುತ್ತದೆ...

ಸಂಗ್ರಹ ಮಾಹಿತಿ

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[27/12/2022, 1:49 PM] Pandit Venkatesh. Astrologer. Kannada: ಕೂಷ್ಮಾoಡ ಪೂಜೆ ಹಾಗೂ ಶ್ರೀ ಕಾಳ ಭೈರವ ಅಷ್ಟೋತ್ತರ ಪೂಜೆಯನ್ನು ನಿಮ್ಮ ಜನ್ಮ ಕುಂಡಳಿಯ ಪಾಪ ಗ್ರಹ ಸಂಚಾರ ಬಲದ ಕುಷ್ಮಾಂಡ ಪೂಜೆ ಮತ್ತು ಕೂಷ್ಮಾಂಡ ದೀಪ . ಅಷ್ಟ ಬೈರವ ಅಷ್ಟ ಬೈರವಿ. ದಶಮಹಾವಿದ್ಯೆ ರೀತ್ಯಾ ತಿಳಿದು, ಪೂಜೆ ಹೋಮ.ಮಾಡಿ ಅಮಾವಾತ್ಸೆ ಯಂದು ಮಾಡುವುದರಿಂದ ದೃಷ್ಟಿ ದೋಷ, ವಾಮಾಚಾರ, ಕುಟುಂಬದ ಶತ್ರುಗಳು , ಸ್ನೇಹದಲ್ಲಿ ಶತ್ರುಗಳು. ಜಾತಕದ ಜನ್ಮ ದೋಷ ನಿವಾರಣೆ. ಮಾಡಿರುವ ಕೆಟ್ಟ ಪ್ರಯೋಗಗಳು ,ದೂರವಾಗಿ ಸುಖವಾದ ಬದುಕು ಸಾಗಿಸಬಹುದು ✍️ಹೆಚ್ಚಿನ ಮಾಯಿತಿಗಾಗಿ ಕರೆ ಮಾಡಿ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011 (ಸೇವಾ ಶುಲ್ಕ ವಿರುತ್ತದೆ, ಉಚಿತವಾಗಿ ಸಲಯೆ ಇಲ್ಲಾ )🕉️🙏🙏🙏🙏🙏
[27/12/2022, 1:52 PM] Pandit Venkatesh. Astrologer. Kannada: ಮನುಷ್ಯನನ್ನು ಕಾಡುವ ಶಾಪಗಳು.. ...👇
“ಗೋಚರ ಮತ್ತು ಅಗೋಚರ ಶಾಪಗಳು”
 ೧. ಮಾತಾ ಪಿತೃ ಶಾಪ :
 * ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ..
 * ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತಾರೆಯೋ..
: * ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳು..
ಕೊಂಕು ಮಾತನಾಡಿ ,ತಿರಸ್ಕಾರದಿಂದ ನೋಯಿಸಿದ್ದರೂ ಬರುತ್ತದೆ.
: * ತಂದೆ ತಾಯಿಗಳ ಪಾಲನೆ ಪೋಷಣೆ ಮಾಡದ ಮಕ್ಕಳು..:             * ತಂದೆ ತಾಯಿಯರನ್ನು ಅಗಲಿಸಿದ ಮಕ್ಕಳು..
 * ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು..
 * ತಂದೆ ತಾಯಿಯರ ನಂತರ ಶ್ರಾದ್ಧ ಮಾಡದ ಮಕ್ಕಳು..
…. ಇತ್ಯಾದಿ
: ಇವೆಲ್ಲವೂ ಮಾತಾಪಿತೃ ಶಾಪ ಎಂದು ಕರೆತುತ್ತೇವೆ.‌
ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ , ಮಕ್ಕಳ ಏಳಿಗೆಯಾಗುವುದಿಲ್ಲ , ಸಂತಾನ ದೋಷವೂ ಆಗಬಹುದು, ನೆಮ್ಮದಿ ಇರದ ದಾರಿದ್ರ್ಯದ ಜೀವನ, ..
ಇಂತಹ ಫಲಗಳು ಬರುತ್ತವೆ..
(ಇದಕ್ಕೆ ಪರಿಹಾರವಿದ್ದರು ಹೇಳುವುದು ತಪ್ಪು)
***
೨. “ಸ್ತ್ರೀ ಶಾಪ”
: * ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು..
: * ಅನ್ಯ ಸ್ತ್ರೀ ಆಭರಣ ಅಡಮಾನ ದೋಷಗಳು..
 ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು..
 * ಒಬ್ಬರು ಸ್ತ್ರೀಗೆ ಮಾತುಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು..
[: * ಸ್ತ್ರೀಯರ ಹಣನುಂಗಿದ ದೋಷಗಳು.
.. ಇತ್ಯಾದಿ
 * ಸ್ತ್ರೀಯರನ್ನು ನಿಂದಿಸಿ , ಕಣ್ಣೀರು ಹಾಕಿಸಿದ ದೋಷಗಳು..
[: ಇವೆಲ್ಲವೂ ಸ್ತ್ರೀಶಾಪಗಳಾಗುತ್ತವೆ..
 ಅನಾರೋಗ್ಯ, ಕಷ್ಟದ ಜೀವನ, ಮನೆಯಲ್ಲಿ ಜಗಳಗಳು, ವಿವಾಹಕ್ಕೆ ದೋಷಗಳು, ಅಪಘಾತದ ಭಯಗಳು ಆಗುತ್ತಿರುತ್ತವೆ.
***###***
[೩. “ಗುರುಶಾಪ”..
 * ಗುರುವಿನಿಂದ ಮಂತ್ರದೀಕ್ಷೆ ಪಡೆದು ದಕ್ಷಿಣೆ ಕೊಡದ ದೋಷಗಳು..
[ * ಗುರುವಿನ ನಿಂದನೆ ಮಾಡಿದ ದೋಷಗಳು.‌
: * ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದ ದೋಷಗಳು..
* ಗುರುವಿನಿಂದ ವಿದ್ಯೆ ಕಲಿತು ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..
: * ಗುರುವನ್ನು ತಿರಸ್ಕಾರ ಮಾಡಿದ ದೋಷಗಳು.‌
 * ಗುರುಗಳು ನೊಂದುಕೊಳ್ಳುವಂತೆ ಮಾಡಿದ ದೋಷಗಳು..
 * ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು , ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು..
..
ಇವೆಲ್ಲವೂ ಗುರುಶಾಪಗಳಾಗುತ್ತವೆ..
ಇಂತಹವರಿಗೆ ಜೀವನದಲ್ಲಿ ಅಭಿವೃದ್ಧಿನೇ ಇರುವುದಿಲ್ಲ, ಸಂತಾನಭಾಗ್ಯ ಕಷ್ಟ, ಮಕ್ಕಳಿಗೆ ವಿದ್ಯೆ ಹತ್ತುವುದಿಲ್ಲ, ಅಗೋಚರ ಕಾಯಿಲೆಗಳಾಗುತ್ತವೆ , ವಂಶವು ಅಧಃಪತನವಾಗುವುದು..
****###***
(ಈ ಶಾಪಕ್ಕೆ ಪರಿಹಾರ ತುಂಬಾ ಕಷ್ಟ)
: ೪. ” ದೈವಶಾಪ”
: * ದೇವರ ವಿಗ್ರಹಗಳನ್ನು ಬಿಸಾಡುವುದು, ಸರಿಯಾಗಿ ಪೂಜಿಸದೇ ಇರುವುದು..
: * ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ತವಹರಿಸುವುದು..: * ದೇವರ ಆಭರಣಗಳನ್ನು ಧರಿಸುವುದು..
: * ನಿಮ್ಮ ಮನೆಯ ಪೂಜಾವಿಗ್ರಹವನ್ನು ಬೇರೆಯವರಿಗೆ ಕೊಡುವುದು..
: * ದೇವರ ಆಭರಣಗಳನ್ನು ಕರಗಿಸಿದ ದೋಷಗಳು..
: * ದೇವಾಲಯದಲ್ಲಿ ಮಾರುವ ಆಭರಣಗಳನ್ನು ಬೆಲೆಕಟ್ಟಿ ಕೊಂಡುಕೊಂಡರೆ..ಇವೆಲ್ಲವೂ ದೈವಶಾಪಗಳಾಗುತ್ತವೆ..
ಅಗೋಚರವಾಗಿಯೂ ಪೂಜೆಗಳಲ್ಲಿ ದೈವ ಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ.‌.
: ೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ , ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೆ ಇದ್ದ ದೋಷಗಳು..
ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೆ ನಿಂದಿಸಿದ ದೋಷಗಳು..
: ೨. ಪುರೋಹಿತರು ಪೂಜೆಯ ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು..
 ೩.. ದೈವಜ್ಞರನ್ನು ನಿಂದಿಸಿದ ದೋಷಗಳು..
ಇತ್ಯಾದಿ
 ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..
ಈ ದೋಷ ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ..
ದೇವರ ಬಲ ಇರುವುದಿಲ್ಲ..
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ತ, ಸಂಸಾರದಲ್ಲಿ ಕಷ್ಟ.. ಇತ್ಯಾದಿ , ಫಲಗಳು ಬರುತ್ತವೆ..
****####****
(ತುಂಬಾ ಕಷ್ಟ, ಇದಕ್ಕೆ ಪರಿಹಾರ ತಿಳಿದಿರುವವರು ತುಂಬಾ ಕಮ್ಮಿ)
 ೫. “ಸರ್ಪದೋಷ”
 * ಯಾರು ಸರ್ಪವನ್ನು ಹಿಂಸಿಸುತ್ತಾರೋ, ಹೊಡೆಯುತ್ತಾರೋ, ಸಾಯಿಸುತ್ತಾರೋ ಅವರಿಗೆಲ್ಲಾ , ಮನೆಯವರಿಗೂ ಸೇರಿ ದೋಷ ಬರುತ್ತದೆ..
: * ಯಾರು ಸರ್ಪದ ವಾಸಸ್ಥಾನವನ್ನು ನಾಶ ಮಾಡುತ್ತಾರೆಯೋ, ಅಲ್ಲಿ ಮನೆಯನ್ನು ಕಟ್ಟುತ್ತಾರೆಯೋ,
: * ಯಾರು ತನಿ ಎರೆಯುವುದಿಲ್ಲವೋ, ಯಾರು ನಾಗರ ಪೂಜೆ ಮಾಡುವುದಿಲ್ಲವೋ..
* ಯಾರು ಸರ್ಪಗಳನ್ನು ದಾಟಿರುತ್ತಾರೋ, ಸರ್ಪವನ್ನು ಆಟ ಆಡಿಸುತ್ತಾರೋ..
 ಇವೆಲ್ಲವೂ ಸರ್ಪದೋಷಗಳಾಗುತ್ತವೆ..
 * ಯಾರೋ ಮಾಡುವ ಸರ್ಪಸಂಸ್ಕಾರ, ನಾಗರ ಪ್ರತಿಷ್ಟೆ ನೋಡುವುದು, ಪ್ರಸಾದ ಸೇವಿಸುವುದರಿಂದಲೂ ಸರ್ಪದೋಷ ಬರುವುದು, ನೇತ್ರ ಸರ್ಪದೋಷ ವಾಗುತ್ತದೆ..
*ನಾಗರಕಲ್ಲನ್ನು ಕೆಡುವಿದ ದೋಷಗಳು, ಯಾರಿಗೋ ನಾಗರ ಹಾವನ್ನು ತೋರಿಸಿ ಒಡೆಸಿದ ದೋಷಗಳು..
 ಸಂತಾನ ಭಾಗ್ಯ ಕಷ್ಟ, ಅಗೋಚರ ರೋಗಗಳು, ಗಾಯಗಳು, ಕಿವಿನೋವು, ಕಣ್ಣಿನ ರೋಗಗಳು, ಮಕ್ಕಳ ಬೆಳವಣಿಗೆ ಇಲ್ಲದೇ ಇರುವುದು , ಮದುವೆಯ ದೋಷಗಳು, ಅಭಿವೃದ್ಧಿ ಆಗದೇ ಇರುವುದು ವಿವಾಹ ದೋಷಗಳು, ವಿಚ್ಛೇದನ ದೊಷಗಳು.
..ಇತ್ಯಾದಿ ಫಲಗಳು ಬರುತ್ತವೆ..
(ಸುಲಭವಾದ ಪರಿಹಾರಗಳಿರುತ್ತವೆ, ತಿಳಿದು ಮಾಡಿ)
೬. ಬ್ರಾಹ್ಮಣ ಶಾಪ :
ಮನೆಗೆ ಬ್ರಾಹ್ಮಣರನ್ನು ಕರೆಸಿ ಅವಮಾನ ಮಾಡಿದ್ದರೆ,
ಮನೆಗೆ ಬಂದ ಬ್ರಾಹ್ಮಣರನ್ನು ಬರಿ ಕೈಯಲ್ಲಿ ಕಳುಹಿಸಿದ್ದರೆ ಅಥವಾ ಏನೂ ಕೊಡದೆ ಕಳುಹಿಸಿದ್ದರೆ,
ಮನೆಗೆ ಆತಿಥಿಯಾಗಿ ಬ್ರಾಹ್ಮಣರನ್ನು ಕರೆದು ಅವರು ಬರುವ ಮುಂಚೆಯೇ ನೀವು ಊಟ ಮಾಡಿದ್ದರೆ..
ಬ್ರಾಹ್ಮಣರನ್ನು ಹೀಯಾಳಿಸಿ ಮಾತನಾಡಿದ್ದರೆ,
: ಬ್ರಾಹ್ಮಣರಿಗೆ ಸಾಲ ನೀಡಿ ವಿಪರೀತ ಬಡ್ಡಿಗಾಗಿ ಹಿಂಸಿಸುತ್ತಿದ್ದರೆ,
ಬ್ರಾಹ್ಮಣನಿಗೆ ಮೋಸ ಮಾಡಿ ಭೂಮಿ ಕಸಿದುಕೊಂಡಿದ್ದರೆ,
 ಬ್ರಾಹ್ಮಣರ ಹತ್ತಿರ ಪೂಜೆ ಮಾಡಿಸಿ, ಜ್ಯೋತಿಷ್ಯ ಕೇಳಿ ಸರಿಯಾದ ದಕ್ಷಿಣೆ ಕೊಡದೇ ಮೋಸ ಮಾಡಿದ್ದರೆ, ..
ಇತ್ಯಾದಿ..
 ಸತ್ಪಾತ್ರ ಬ್ರಾಹ್ಮಣರಿಗೆ ನೋವು ಕೊಟ್ಟರೆ ಅಥವಾ ಮೋಸ ಮಾಡಿದರೆ, ಅವರಿಗೆ ದೈವದಿಂದಲೇ ಶಾಪ ಉಂಟಾಗುವುದು..
ಫಲ : ಅಲೆಮಾರಿ ಜೀವನ, ಎಷ್ಟು ದುಡಿದರೂ ನೆಮ್ಮದಿ ಇರೋಲ್ಲ,
ಮಕ್ಕಳೇ ಶತೃಗಳಾಗುತ್ತಾರೆ..
ಮನೆಯು ಏಳಿಗೆಯಾಗುವುದಿಲ್ಲ..
ಉದ್ಯೋಗ ಇಲ್ಲದೇ ಜೀವನ ಕಷ್ಟವಾಗುತ್ತದೆ..
 (ಈ ಎಲ್ಲಾ ದೋಷಗಳಿಗೆ ಜಾತಕ ನೋಡಿಸಿ ಪರಿಹಾರ ಮಾಡಿಕೊಂಡಾಗ ಮಾತ್ರ ಫಲಗಳ ಪ್ರಭಾವ ಕಡಿಮೆಯಾಗುವುದು)

* ಸಂಗ್ರಹ ಬರಹ.

Post a Comment

Previous Post Next Post