ನವದೆಹಲಿಯಲ್ಲಿ ಭಾರತ್ ಬ್ರಾಂಡ್ ಅಡಿಯಲ್ಲಿ ಗೋಧಿ ಹಿಟ್ಟು-ಅಟ್ಟಾ ಮಾರಾಟಕ್ಕಾಗಿ 100 ಮೊಬೈಲ್ ವ್ಯಾನ್‌ಗಳಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಚಾಲನೆ ನೀಡಿದರು.

ನವದೆಹಲಿಯಲ್ಲಿ ಭಾರತ್ ಬ್ರಾಂಡ್ ಅಡಿಯಲ್ಲಿ ಗೋಧಿ ಹಿಟ್ಟು-ಅಟ್ಟಾ ಮಾರಾಟಕ್ಕಾಗಿ 100 ಮೊಬೈಲ್ ವ್ಯಾನ್‌ಗಳಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಚಾಲನೆ ನೀಡಿದರು.

@ಪಿಯೂಷ್ ಗೋಯಲ್
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ಇಂದು ನವದೆಹಲಿಯಲ್ಲಿ ಭಾರತ್ ಬ್ರಾಂಡ್‌ನಡಿಯಲ್ಲಿ ಗೋಧಿ ಹಿಟ್ಟು-ಆಟ್ಟಾ ಮಾರಾಟಕ್ಕಾಗಿ 100 ಮೊಬೈಲ್ ವ್ಯಾನ್‌ಗಳನ್ನು ಫ್ಲ್ಯಾಗ್‌ಆಫ್ ಮಾಡಿದರು.

ಕೇಂದ್ರೀಯ ಭಂಡಾರ್, ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಸೇರಿದಂತೆ ದೇಶಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಅಟ್ಟಾ ಪ್ರತಿ ಕಿಲೋಗ್ರಾಂಗೆ 27.5 ರೂಪಾಯಿಗಳಲ್ಲಿ ಲಭ್ಯವಾಗಲಿದೆ ಎಂದು ಶ್ರೀ ಗೋಯಲ್ ಹೇಳಿದರು.

ಭಾರತ್ ಬ್ರಾಂಡ್ ಅಟ್ಟಾ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸುವುದರಿಂದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಸರಬರಾಜು ಹೆಚ್ಚಾಗುತ್ತದೆ ಮತ್ತು ಈ ಆಹಾರ ಪದಾರ್ಥದ ಬೆಲೆಗಳನ್ನು ನಿರಂತರವಾಗಿ ಮಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಸೃಷ್ಟಿಸುವುದು ಮತ್ತು ದೇಶದ ರೈತರು ಮತ್ತು ಗ್ರಾಹಕರು ಇಬ್ಬರಿಗೂ ಬೆಂಬಲ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಗ್ರಾಹಕರಿಗೆ ಹಾಗೂ ರೈತರಿಗೆ ನೆರವಾಗುವ ದೂರದೃಷ್ಟಿ ಹೊಂದಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರದ ಮಧ್ಯಸ್ಥಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದೆ ಎಂದು ಗೋಯಲ್ ಹೇಳಿದರು. ಈ ಹಿಂದೆಯೂ ಟೊಮ್ಯಾಟೊ, ಈರುಳ್ಳಿ ಬೆಲೆ ತಗ್ಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದರು

Post a Comment

Previous Post Next Post