“ಮುಖ್ಯಾಂಶಗಳು”
• ಕರ್ನಾಟಕ ರಾಜ್ಯ ಇತಿಹಾಸದಲ್ಲಿಯೇ ಮತ್ತೊಂದು ಬೃಹತ್ ಹಗರಣ ಬಯಲು.
• 13,000 ಕೋಟಿ ಮೊತ್ತದ ಬೃಹತ್ ಹಗರಣ ಬಯಲು.
• ಕರ್ನಾಟಕ ರಾಜ್ಯದ ಪತ್ರಿಕಾಗೋಷ್ಠಿಗಳ ಇತಿಹಾಸದಲ್ಲಿಯೇ ಒಂದು ಹಗರಣಕ್ಕೆ ಸಂಬಂಧಿಸಿದ ಅತೀ ಹೆಚ್ಚು ಪುಟಗಳ ದಾಖಲೆ ಬಿಡುಗಡೆ.
• 13,000 ಕೋಟಿ ಮೊತ್ತದ KRIDL ಹಗರಣಕ್ಕೆ ಸಂಬಂಧಿಸಿದ 6,932 ಪುಟಗಳ ಬೃಹತ್ ದಾಖಲೆಗಳ ಬಿಡುಗಡೆ.
• 2015-16 ರಿಂದ 2019-20 ರವರೆಗಿನ 05 ವರ್ಷಗಳ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳನ್ನು KRIDL ಮೂಲಕ ನಿರ್ವಹಿಸುವ ಹೆಸರಿನಲ್ಲಿ ನಡೆದಿರುವ ಹಗರಣ.
• ಸಿದ್ಧರಾಮಯ್ಯ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಬೃಹತ್ ಹಗರಣ.
• 2015-16 ರಿಂದ 2020-21 ರವರೆಗಿನ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆಂದು KRIDL ಸಂಸ್ಥೆಗೆ ಬಿಡುಗಡೆಯಾಗಿರುವ ವಿವಿಧ ಅನುದಾನಗಳ ಒಟ್ಟು ಮೊತ್ತ ₹. 12,943,83,44,615/- ಗಳು
• ಹಾಗೆಯೇ ಇದೇ ಅವಧಿಯಲ್ಲಿ KRIDL ಸಂಸ್ಥೆಯ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿ ಅದರ “ಉಪ ಗುತ್ತಿಗೆದಾರ”ರಿಗೆ ಬಿಡುಗಡೆಯಾಗಿರುವ ಬಿಲ್ಲುಗಳ ಒಟ್ಟು ಮೊತ್ತ ₹. 8,092,56,30,831/- ಗಳು
• KRIDL ಅಥವಾ KRIDCL ಎಂದರೆ “ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ”
• KRIDL ಸಂಸ್ಥೆಯು ತನ್ನ ಹೆಸರಿನಲ್ಲೇ ಇರುವಂತೆ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಿರುವ ಸಂಸ್ಥೆಯಾಗಿದೆ.
• ಆದರೆ, ಇಂತಹ ಒಂದು ಸಂಸ್ಥೆಯ ಮೂಲಕ ಮಹಾನಗರ ಪ್ರದೇಶದ / ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು / ಕಾಮಗಾರಿಗಳನ್ನು ನಿರ್ವಹಿಸುವುದೇ ನಿಯಮ ಬಾಹಿರ ಕಾರ್ಯವಾಗಿದೆ.
• 10/03/2011, 11/03/2011 ಮತ್ತು 17/02/2016 ರಲ್ಲಿ ಹೊರಡಿಸಿರುವ ಅಧಿಕೃತ ಆದೇಶಗಳಲ್ಲಿರುವಂತೆ KRIDL ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ “ಮಹಾಪೌರರು / ಉಪ ಮಹಾಪೌರರ ಅನುದಾನ”ಗಳ ಮೂಲಕ ಕೈಗೊಳ್ಳಲಾಗುವ ಕಾಮಗಾರಿಗಳು ಹಾಗೂ “ತುರ್ತು ಕಾಮಗಾರಿಗಳ”ನ್ನು ಮಾತ್ರವೇ ನಿರ್ವಹಿಸಲು ಅವಕಾಶವಿರುತ್ತದೆ.
• “ತುರ್ತು ಕಾಮಗಾರಿಗಳು” ಎಂದರೆ, ಮಳೆ ಹಾನಿ ಅಥವಾ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಅನಾಹುತಗಳನ್ನು ಸರಿ ಪಡಿಸುವ ಕಾರ್ಯಗಳನ್ನು ಹಾಗೂ ಶಾಲಾ / ಕಾಲೇಜು ಕಟ್ಟಡಗಳು / ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾರ್ಯಗಳನ್ನಷ್ಟೇ KRIDL ಸಂಸ್ಥೆಯು ನಿರ್ವಹಿಸಬಹುದಾಗಿರುತ್ತದೆ.
• KRIDL ಸಂಸ್ಥೆಯು ಕೆಲವೇ ಬೆರಳೆಣಿಕೆಯಷ್ಟು ಅಧಿಕಾರಿಗಳು / ನೌಕರರನ್ನು ಹೊಂದಿದ್ದು, ತಾಂತ್ರಿಕ ನೈಪುಣ್ಯತೆ ಹೊಂದಿರುವ Engineer ಗಳನ್ನು ಹೊಂದಿರುವುದಿಲ್ಲ.
• ಆದರೂ ಸಹ KRIDL ಸಂಸ್ಥೆಯ ಅಧಿಕಾರಿಗಳು ತಮ್ಮ ಅತೀವ ಹಣ ಬಾಕತನದಿಂದ ಹಾಗೂ ಪಟ್ಟಭದ್ರ ವಂಚಕ ಜನಪ್ರತಿನಿಧಿಗಳು / ಭ್ರಷ್ಟ ಅಧಿಕಾರಿಗಳ ಲೂಟಿಕೋರತನದ ಸ್ವಾರ್ಥ ಕಾರಣಗಳಿಗಾಗಿ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿಗಳಷ್ಟು ಮೊತ್ತದ ಕಾಮಗಾರಿಗಳನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
• KRIDL ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ತಾನು ಕರಾರು ಪತ್ರಗಳ ಮೂಲಕ ಪಡೆದುಕೊಳ್ಳುವ ಕಾಮಗಾರಿಗಳನ್ನು ನೇರವಾಗಿ ತಾನೇ ತನ್ನ ಸಿಬ್ಬಂದಿ ವರ್ಗದ ಮೂಲಕ ನಿರ್ವಹಿಸುವುದಿಲ್ಲ.
• ಬದಲಾಗಿ KRIDL ಸಂಸ್ಥೆಯು ಪಟ್ಟಭದ್ರ ಭ್ರಷ್ಟ ಅಧಿಕಾರಿಗಳು ಮತ್ತು ವಂಚಕ ಜನಪ್ರತಿನಿಧಿಗಳು ಟೆಂಡರ್ ಪ್ರಕ್ರಿಯೆಯ ಗೊಡವೆಯೇ ಇಲ್ಲದೇ, ನೇರವಾಗಿ ತಮ್ಮ ಆಪ್ತರಿಗೆ ತಮ್ಮ ತಮ್ಮ ವ್ಯಾಪ್ತಿಯ ಕಾಮಗಾರಿಗಳ ಗುತ್ತಿಗೆಯನ್ನು “ಉಪ ಗುತ್ತಿಗೆದಾರರು” ಎಂಬ ಹೆಸರಿನಲ್ಲಿ ಕೊಡಿಸುವ ಕಾನೂನು ಬಾಹಿರ ಕಾರ್ಯಗಳಿಗೆ - ಸಂಪರ್ಕ ಕೊಂಡಿಯಾಗಿ ಮಾತ್ರವೇ ಕಾರ್ಯ ನಿರ್ವಹಿಸುತ್ತದೆ.
• ಇಂತಹ “ಉಪ ಗುತ್ತಿಗೆದಾರ”ರನ್ನು KRIDL ಸಂಸ್ಥೆಯು “Group Leader” ಎಂಬ ಹೆಸರಿನಲ್ಲಿ ಉಲ್ಲೇಖಿಸುತ್ತದೆ.
• KRIDL ಸಂಸ್ಥೆಯು ತನ್ಮೂಲಕ ನಿರ್ವಹಣೆ ಮಾಡಲಾಗುವ ಕಾಮಗಾರಿಗಳ ಪರಿಶೀಲನೆ ಕಾರ್ಯಗಳನ್ನು ಮಾಡುವುದಾಗಲೀ, ಕಾಮಗಾರಿಗಳಿಗೆ ಬಳಸಲ್ಪಡುವ ಕಚ್ಛಾ ವಸ್ತುಗಳ / ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷೆ ಮಾಡುವುದಾಗಲೀ ಅಥವಾ ಆಯಾ ಕಾಮಗಾರಿಗಳ ಪ್ರಗತಿ ಕಾರ್ಯಗಳ ವರದಿಗಳ ಕಡತವನ್ನು ನಿರ್ವಹಣೆ ಮಾಡುವುದಾಗಲೀ ಮಾಡುವುದಿಲ್ಲ.
• KRIDL ಸಂಸ್ಥೆಯ ಕೆಲಸ ಕೇವಲ “ಉಪ ಗುತ್ತಿಗೆದಾರ”ರಿಗೆ ಕಾಮಗಾರಿಗಳಿಗೆ ಸಂಬಂಧಿಸಿದ ಹಣವನ್ನು ಬಿಡುಗಡೆ ಮಾಡುವ Cheque ಗಳನ್ನು ಬರೆಯುವುದಷ್ಟೇ ಎಂಬುದನ್ನು ಎಲ್ಲರೂ ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವಾಗಿದೆ.
• ತನ್ಮೂಲಕ ನಿರ್ವಹಿಸುವ ಪ್ರತಿಯೊಂದು ಕಾಮಗಾರಿಯ ಒಟ್ಟು ಅಂದಾಜು ಮೊತ್ತದ ಶೇ. 11% ರಷ್ಟು ಮೊತ್ತವನ್ನು “ಸೇವಾ ಶುಲ್ಕ” (Service Charge) ರೂಪದಲ್ಲಿ ಪಡೆದುಕೊಳ್ಳುವ ಕಾರ್ಯವನ್ನಷ್ಟೇ KRIDL ಸಂಸ್ಥೆಯು ಮಾಡುತ್ತದೆ.
• ಇಲ್ಲಿಯವರೆಗೆ KRIDL ಸಂಸ್ಥೆಯ ಮೂಲಕ ನಿರ್ವಹಿಸಲಾಗಿರುವ ಬಹುತೇಕ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುವುದನ್ನು ದಾಖಲೆಗಳೇ ಬಟಾಬಯಲು ಮಾಡಿವೆ.
• ಅನುಮೋದಿತ ಅಂದಾಜು ಪಟ್ಟಿಯಲ್ಲಿರುವ ನಿರ್ದಿಷ್ಟ ಕಾರ್ಯಗಳ ಅರ್ಧ ಭಾಗದಷ್ಟನ್ನೂ ನಿರ್ವಹಿಸದೆಯೇ ಪೂರ್ಣ ಪ್ರಮಾಣದ Bill ಗಳನ್ನು ಮಾಡಿಸಿಕೊಂಡಿರುವ ಪ್ರಕರಣಗಳು ಶೇ. 50% ರಷ್ಟಾದರೆ, ಇನ್ನುಳಿದ ಶೇ. 50% ರಷ್ಟು ಕಾಮಗಾರಿಗಳನ್ನು ನಿರ್ವಹಿಸದೆಯೇ Bill ಗಳನ್ನು ಮಾಡಿಸಿಕೊಂಡಿರುವ ಕುಖ್ಯಾತಿಯನ್ನು KRIDL ಸಂಸ್ಥೆಯು ಹೊಂದಿದೆ.
• 2015-16 ರಿಂದ 2020-21 ರವರೆಗಿನ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆಂದು KRIDL ಸಂಸ್ಥೆಗೆ ಕಾನೂನು ಬಾಹಿರವಾಗಿ ವಹಿಸಲಾಗಿರುವ 13,000 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಉತ್ತಮ ಗುಣಮಟ್ಟದ ಕಾಮಗಾರಿ ಎಂದು ಹೆಸರಿಸಲ್ಪಡುವ ಒಂದೇ ಒಂದು ಕಾಮಗಾರಿಯೂ ಸಹ ನಮಗೆ ಕಾಣ ಸಿಗುವುದಿಲ್ಲ.
• KRIDL ಸಂಸ್ಥೆಗೆ ವಹಿಸಿರುವ ₹. 12,943,83,44,615/- ಮೊತ್ತದ ಕಾಮಗಾರಿಗಳ ಪೈಕಿ, ಪ್ರಸ್ತುತ ಪಾಲಿಕೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ನಿರ್ವಹಿಸಲಾಗುತ್ತಿದ್ದು ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿರುವ ಸುಮಾರು 850 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಹೊರತುಪಡಿಸಿ, ಇನ್ನುಳಿದ ಸುಮಾರು ₹. 12,150 ಕೋಟಿ ರೂ. ಮೊತ್ತದ ಕಾಮಗಾರಿಗಳ ಪೈಕಿ ಶೇ. 50% ರಷ್ಟು ಮೊತ್ತವನ್ನು ಕಾಮಗಾರಿಗಳನ್ನು ನಿರ್ವಹಿಸದೆಯೇ ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ.
• ಇನ್ನುಳಿದ ಶೇ. 50% ರಷ್ಟು ಮೊತ್ತದ ಕಾಮಗಾರಿಗಳನ್ನು ಅವುಗಳ ಅರ್ಧದಷ್ಟೂ ಪ್ರಮಾಣದಲ್ಲಿ ಪೂರ್ಣಗೊಳಿಸದೆಯೇ Bill ಗಳನ್ನು ಮಾಡಿಸಿಕೊಳ್ಳಲಾಗಿದೆ ಎಂಬುದನ್ನು ದಾಖಲೆಗಳು ಸ್ಪಷ್ಟ ಪಡಿಸುತ್ತವೆ ಎಂಬ ಆರೋಪ.
• ಇದೇ ರೀತಿ ಸಾರ್ವಜನಿಕರ ತೆರಿಗೆ ಹಣವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಿಂದು ತೇಗಲೆಂದೇ KRIDL ಸಂಸ್ಥೆಯ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲವು ವಂಚಕ ಜನ ಪ್ರತಿನಿಧಿಗಳು ಅತ್ಯಂತ ವ್ಯವಸ್ಥಿತವಾಗಿ ರೂಪಿಸುವ ಷಡ್ಯಂತ್ರದಿಂದಲೇ - ನಿಯಮಾನುಸಾರ e - procurement ವಿಧಾನದಲ್ಲಿ ಟೆಂಡರ್ ಗಳ ಮೂಲಕ ನಿರ್ವಹಿಸಬೇಕಾದ ಕಾಮಗಾರಿಗಳೆಲ್ಲವೂ KRIDL ಸಂಸ್ಥೆಯ ಪಾಲಾಗುತ್ತಿರುವುದು ಅಕ್ಷರಶಃ ಸತ್ಯ ಎಂಬ ಆರೋಪ.
• ಕೇವಲ ಗಾಂಧಿನಗರ ವಿಧಾನಸಭಾ ಕ್ಷೇತ್ರವೊಂದರಲ್ಲೇ KRIDL ಸಂಸ್ಥೆಯು ಕಾಮಗಾರಿಗಳನ್ನು ನಿರ್ವಹಿಸದೆಯೇ ಉಪ ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಹತ್ತಾರು ಕೋಟಿ ರೂ. ಗಳನ್ನು ವಂಚಿಸಿರುವ ಸಂಬಂಧ ವಿವಿಧ ತನಿಖಾ ಸಂಸ್ಥೆಗಳಲ್ಲಿ 13 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು FIR ಗಳು ದಾಖಲಾಗಿವೆ.
• KRIDL ಸಂಸ್ಥೆಯ 13,000 ಕೋಟಿ ಮೊತ್ತದ ಈ ಬೃಹತ್ ಹಗರಣವನ್ನು CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
• ಈ ಬೃಹತ್ ಹಗರಣದಲ್ಲಿ ಭಾಗಿಗಳಾಗಿರುವ KRIDL ಸಂಸ್ಥೆಯ 06 IFS ಅಧಿಕಾರಿಗಳೂ ಸೇರಿದಂತೆ 62 ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
• ಹಾಗೆಯೇ KRIDL ಸಂಸ್ಥೆಯಿಂದ ಉಪ ಗುತ್ತಿಗೆಯನ್ನು Group Leader ಗಳ ಹೆಸರಿನಲ್ಲಿ ಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಎಲ್ಲಾ ಉಪ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪಾಲಿಕೆಯ ಮುಖ್ಯ ಆಯುಕ್ತರಿಗೆ ಆದೇಶಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
• ಅಲ್ಲದೇ, “ತುರ್ತು ಕಾಮಗಾರಿ”ಗಳನ್ನು ಹೊರತುಪಡಿಸಿ, ಇನ್ಯಾವುದೇ ವಿಧದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು KRIDL ಸಂಸ್ಥೆಗೆ ವಹಿಸದಂತೆ “ಸರ್ಕಾರಿ ಆದೇಶ”ದ ಅಧಿಸೂಚನೆ ಪ್ರಕಟಿಸುವ ಸಂಬಂಧ “ನಗರಾಭಿವೃದ್ಧಿ ಇಲಾಖೆ”ಗೆ ಆದೇಶಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
• KRIDL ಸಂಸ್ಥೆಯ 13,000 ಕೋಟಿ ಮೊತ್ತದ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ, ಒಟ್ಟು 6,932 ಪುಟಗಳ ದಾಖಲೆಗಳ ಸಹಿತ 06 ಮಂದಿ IFS ಅಧಿಕಾರಿಗಳು ಸೇರಿದಂತೆ 62 ಮಂದಿ KRIDL ಅಧಿಕಾರಿಗಳ ವಿರುದ್ಧ, ಸಂಬಂಧಿಸಿದ BBMP ಅಧಿಕಾರಿಗಳ ವಿರುದ್ಧ ಹಾಗೂ ಎಲ್ಲ ಉಪ ಗುತ್ತಿಗೆದಾರರ ವಿರುದ್ಧ ACB ಮತ್ತು BMTF ನಲ್ಲಿ ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ದೂರುಗಳು ದಾಖಲು.
• ದೂರುಗಳನ್ನು ದಾಖಲಿಸಿರುವ N. R. ರಮೇಶ್.
Post a Comment