[28/09, 5:16 AM] vijayavitthala blr: *ಶ್ರೀವರದೇಶದಾಸರನ್ನ ಹತ್ತಿರದಿಂದ ಕಂಡವರ ಮಾತು.*,
*ಒಂದು ಜನುಮದಾಗ ಮುಗಿತೈತೇನ್ ದೊಡ್ಡವರ ಸುದ್ದಿ.ಒಂದು ಹೇಳುತಿನಿ ಕೇಳ್ ಯಂಕಣ್ಣ,,,*
*ಗುರುಗಳ ಸನ್ನಿಧಾನದಾಗ ಸ್ವಾಮಿರಾಯರು ವೈಕುಂಠ ಯಾತ್ರೆ ಮಾಡಿಬಿಟ್ರು,* *ಮುತ್ಯನಾ ಅವರಿಗೆ ಮುಂದಿನ ಕಾರ್ಯ ಮಾಡಿದ್ದು, ಮೂರನೆ ದಿವ್ಸ ಅಸ್ಥಿ ಸಂಗ್ರಹಕ ಹೋದಾಗ್ಯೆ, ಸ್ವಾಮಿರಾಯರ ಅಸ್ಥಿಗಳ ಅವಲಾ, ಅವು ರಾಮ ರಾಮ ಅಂತ ರಾಮಸ್ಮರಣೆ ಮಾಡಕತ್ತಿದ್ದವಂತ.*
*ಆ ರಾಮ ಸ್ಮರಣೆನಾ, ಮುತ್ಯ, ಅವರ ಜೊತಿಗೆ ಹನುಮಂತರಾವ ಕರಣಂ ಇನ ಇಬ್ಬರು ಇದ್ರಂತ, ಬಹಳ ದಿವಸ ಆದ ಮೇಲೆ ಕೌತಲ ದಿಂದ ಬಂದ ಪತ್ರದಾಗ ತಿಳಿತು ನಮಗ.*
*ಆಮೆಲೆ ಇದ ವಿಷ್ಯನಾ ವೇ, ಮೂ , ರಾಘವೇಂದ್ರಚಾರ ಮೂರು ವರುಷ ಆದ ಮೇಲೆ ಲಿಂಗಸ್ಗೂರಗೆ ಬಂದಾಗ, ಮತ್ತ ಇದ ಸ್ಮರಿಸಿದ್ರು,*
*ನೋಡ, ನಮಗರಿವಿಲ್ಲದಂಗ ಹೆಂಗ ಉಸಿರಾಟ ನಡದೈತಿ, ಹಂಗ ಸ್ವಾಮಿರಾಯರು ಉಸಿರಾಟದಂಗ, ಮನಸಿನ್ಯಾಗ ರಾಮಸ್ಮರಣೆ ಮಾಡುತಿದ್ರು,*
( ಹಳ್ಳೆರಾವ ವೆಂಕಟರಾವ ತಿಳಿಸಿದ್ದು-
✍️ಕೆಲೂರ ವೆಂಕಟರಾವ)
[28/09, 5:17 AM] vijayavitthala blr: *||ಬಿಡದೆ ರಮಾ ಕಳತ್ರನ ದಾಸ ವರ್ಗಕೆ ನಮಿಪೆ ಅನವರತ||*
🙏🙏
*ಇಂದು ಕೌತಾಳಂ ಶ್ರೀ ಗುರು ಜಗನ್ನಾಥ ದಾಸರ ಪ್ರಿಯ ಶಿಷ್ಯರಾದ ಸಂತಿಕೆಲ್ಲೂರು ಶ್ರೀ ವರದೇಶ ವಿಠ್ಠಲ ದಾಸರ ಇವರ ಆರಾಧನಾ ಪರ್ವಕಾಲ.*
*ಅವರ ಅಸ್ಥಿ ಗಳು ರಾಮ ನಾಮ ಸ್ಮರಣೆ ಮಾಡುತ್ತಾ ಇದ್ದವು ಅಂದರೆ ಇನ್ನೂ ಅವರ ಬಗ್ಗೆ ನಾ ಏನು ಹೇಳಲು ಬರೆಯಲು ಸಾಧ್ಯ.*
*ಅಂತಹ ಮಹಾನುಭಾವರ ಅನುಗ್ರಹ ಆಶೀರ್ವಾದ ಸದಾ ಇರಲೆಂದು ಅವರ ಪಾದಕಮಲಗಳಲ್ಲಿ ಶಿರವಿಟ್ಟು ಬೇಡುವದೊಂದೆ ಈ ಪಾಮರನ ಕಾಯಕ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
Post a Comment