*||ಶ್ರೀನಿವಾಸ ಕಲ್ಯಾಣ ಚರಿತ್ರೆ|*|Day #4

*||ಶ್ರೀನಿವಾಸ ಕಲ್ಯಾಣ ಚರಿತ್ರೆ|*|Day #4
*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*
(ನಾಲ್ಕು ಯುಗದ ಮಹಾತ್ಮೆಯ ಫಲ ಶೃತಿ ಇಂದಿನ ಬರಹದಲ್ಲಿ)
 ✍ಹಿಂದಿನ ಎರಡು ಸಂಚಿಕೆಗಳಲ್ಲಿ 
*ಶತಾನಂದರು ಜನಕರಾಜನಿಗೆ ವೆಂಕಟಗಿರಿಯ ಮಹಾತ್ಮೆ ಹೇಳುತ್ತಾ ಆ ಪರ್ವತಕ್ಕೆ ಯುಗ ಭೇದ ದಿಂದ,ವೃಷಭಾಚಲ ಅಂಜನಾಚಲ,ಶೇಷಾಚಲ ಎಂದು ಹೆಸರು ಬಂದ ಹಿನ್ನೆಲೆ ಯನ್ನು ಹೇಳುತ್ತಾ ನಂತರ ಕಲಿಯುಗದಲ್ಲಿ ಅದಕ್ಕೆ ವೆಂಕಟಾಚಲ ಎನ್ನುವ ಹೆಸರು ಹೇಗೆ ಬಂತು ಅನ್ನುವದನ್ನು* ಮುಂದೆ ಹೇಳುತ್ತಾರೆ.
*ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು.*
ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣ ನಿದ್ದನು.ಅವನಿಗೆ ಮಾಧವ ಎಂಬ ಮಗನಿದ್ದನು.
ಅವನ ಪತ್ನಿ ಚಂದ್ರ ರೇಖೆ.
ವೇದವೇದಾಂಗ ಪಾರಂಗತನು,ಸದಾಚಾರ ರತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷಿತ ಪಡಲು ಅದಕ್ಕೆ ಅವನ ಪತ್ನಿಯು ಅದು ಯೋಗ್ಯವಲ್ಲ ಈ ಸಮಯದಲ್ಲಿ ಅಂತ ಬಹು ಹಿತನುಡಿಗಳನ್ನು ಹೇಳಿದರು ಮಾಧವನು ಒಪ್ಪದೇ ವಿಹಾರಕ್ಕೆ ಕರೆದನು.
ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು.
ಅದೇ ಸಮಯದಲ್ಲಿ ವನದಲ್ಲಿ ಶ್ವೇತ ವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಅಂತ್ಯಜ ಕನ್ಯೆ ಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು.
ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ
ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿ ಗೆ ಬರಹೇಳಿದ್ದು.ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು.
ನಂತರ ಪತ್ನಿ ಹೋಗಿದ್ದ ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು.
ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ
ಅಂತ್ಯಜಳಾದ ಸ್ತ್ರೀ ಯ ಸಂಗಮ ನಿನಗೆ ವಿಹಿತ ವಲ್ಲವೆಂದು ಹೇಳಿದರು ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ.
*ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ. ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ,ನಮ್ಮ ಪದ್ದತಿಯನ್ನು ಸ್ವೀಕರಿಸು" ಅಂತ ಹೇಳಿದಳು.ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು,ತಲೆಯನ್ನು ಬೋಳಿಸಿಕೊಂಡು,ಮಾಂಸ ಮಧ್ಯ ವನ್ನು ಸೇವಿಸುತ್ತಾ* ಅವಳ ಜೊತೆಯಲ್ಲಿ ವಾಸ ಮಾಡಿದ.
ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ.
*"ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು" ಅನ್ನುವಂತೆ,ಈ ದೇಹವು ಅಶಾಶ್ವತ ವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು..*
ಪ್ರಿಯಕರಳ ಮರಣದಿಂದ
ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ.
*ಅವರು ಉಂಡು ಉಳಿಸಿದ ಭಗವಂತನ ಪ್ರಸಾದವನ್ನು, ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ.*
ಆ ರಾಜರು ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಭಕ್ತಿ ಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ.
*ಮಾಧವನು ಸಹ ಅವರಂತೆ ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಶಿರೋಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು.*
ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲವೋ ಅವನ ಪಾಪಗಳೆಲ್ಲ ಪರಿಹಾರವಾಯಿತು.
*ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥ ದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪ ರಾಶಿ ನಾಶವಾಗುವದು.*.
*ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿ ಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು.*.
ಮರುದಿನ‌ರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ  
*ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ ,ಆ ಪರ್ವತದ ಸ್ಪರ್ಶ ಮಾತ್ರ ದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು.*.
*" ನೊಣವನ್ನು ನುಂಗಿದ ವ್ಯಕ್ತಿಯು ಹೇಗೆ ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆ ಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು.*.
*ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ ,ಮಾಂಸ ,ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು.ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು.ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ,ಶ್ರೀಬ್ರಹ್ಮ ರುದ್ರಾದಿ ಸಕಲ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿ ಗೆ ಆಗಮಿಸಿದರು.*.
ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು.
*ವೇದಪ್ರತಿಪಾದ್ಯನು, ಕಾಂತಿ ಸಂಪನ್ನನು, ಶ್ರೀಸರಸ್ವತಿ ದೇವಿಯರ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಶ್ರೀಬ್ರಹ್ಮ ದೇವರು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ..*
*"ವತ್ಸ!!ಮಾಧವ!!ನಿನ್ನ ಪಾಪಗಳು ಪರಿಹಾರವಾದವು.ನೀನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು..*.
*ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜ ನಾಗಿ ರಾಜ್ಯ ಭಾರವನ್ನು ಮಾಡುತ್ತೀಯಾ.*.
*ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ.*.
*ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!!*
*ಲೋಕಕ್ಕೆ, ಹಾಗು ನನಗು ಜನನಿಯಾದ, ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು.*.
*ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ, ಆ ದೇವ ದೇವನಾದ ಶ್ರೀ ಮನ್ ನಾರಾಯಣನು ನಿನಗೆ ಅಳಿಯನಾಗುವನು.*.
*ಬಹುಕಾಲ ರಾಜ್ಯದ ಭಾರವನ್ನು ಮಾಡಿಅನಂತರ ಮೋಕ್ಷ ವನ್ನು ಪಡೆಯುತ್ತೀಯೇ* ಅಂತ ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಶ್ರೀಬ್ರಹ್ಮ ದೇವರು ಅದೃಶ್ಯ ರಾದರು.
*ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲ ವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು.ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತ ವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು* ಬಂದಿತು.
*ಸಕಲ ಪಾಪ ಪರಿಹಾರಕವಾದ್ದರಿಂದಲೇ ವೆಂಕಟಶೈಲವೆಂದು ಈ ಪರ್ವತಕ್ಕೆ ಹೆಸರು.*
*ಪ್ರಸ್ತುತಃ ಮಾಧವನ ಪಾಪ ಪರಿಹಾರವಾದ್ದರಿಂದ ಮಾಧವಾದ್ರಿ ಎಂಬ ಹೆಸರು ಬರಬೇಕಿತ್ತು ಅನ್ನುವ ಸಂದೇಹ ಬರಬಹುದು.*
*"ಮಾಧವಾದ್ರಿ ಎಂಬ ಹೆಸರು ಇದ್ದರೆ ಬರಿಯ ಮಾಧವನ ಪಾಪವನ್ನು ಮಾತ್ರ ಪರಿಹರಿಸಲು ಸಮರ್ಥ.ಬೇರೆಯವರ ಪಾಪವಲ್ಲ ಅನ್ನುವ ರೀತಿಯಲ್ಲಿ ಅರ್ಥ ಬರಬಹುದು."*
*ಈ ಪರ್ವತದ ಸ್ಪರ್ಶವನ್ನು ಮಾಡಿದವರು ಯಾರೇ ಆಗಿರಲಿ, ಅವರ ಪಾಪಗಳನ್ನುಅದು ಪರಿಹರಿಸುತ್ತದೆ.*
*"ವೇಂ ..ಎಂದರೆ ಸಕಲ ಪಾಪಗಳು..*"
*"ಕಟ ..ಎಂದರೆ ಆ ಪಾಪಗಳನ್ನು ಸುಡುವದು..*"
ಎಂಬ ಅರ್ಥ ಇರುವದರಿಂದ *ಅದಕ್ಕೆ ದೇವತೆಗಳು ವೆಂಕಟಾಚಲವೆಂದು ಕರೆದರು.*
 *ನಾಲ್ಕು ಯುಗದಲ್ಲಿ ಈ ಗಿರಿಗೆ ಹೆಸರು ಬಂದ ಬಗೆಯನ್ನು,ಈ ಮೂರು ದಿನಗಳ ಕಾಲ ಶ್ರೀ ವೆಂಕಟೇಶ ಮಹಾತ್ಮೆ ಯಲ್ಲಿ ತಿಳಿದಿರುತ್ತೇವೆ.*
ಮತ್ತು 
*ವೆಂಕಟಗಿರಿ ಮಹಾತ್ಮೆ ಯನ್ನು ಯಾರು ಪ್ರಾತಃ ಕಾಲದಲ್ಲಿ ಪಠಣ ಮಾಡುವರೋ,ಅವರಿಗೆ ಗಂಗಾಸ್ನಾನ ಫಲ,ಬರೆದರೆ ಗಂಗಾಜನಕ ಶ್ರೀ ಕೃಷ್ಣನ ಸಹಸ್ರ ಬಾರಿ ಪ್ರದಕ್ಷಿಣೆ ರೂಪವಾದ ಫಲ ಲಭಿಸುತ್ತದೆ.*
*ಈ ಕಾರಣದಿಂದ ವೆಂಕಟಾಚಲವು ಲೋಕದಲ್ಲಿ ಪ್ರಸಿದ್ದವಾದ ಕೀರ್ತಿ ಉಳ್ಳದ್ದಾಯಿತು..*
*ಇದು ಪುಣ್ಯಕರ,ಮಂಗಳಕರ.ಮತ್ತುಇದನ್ನು ಕೇಳುವದರಿಂದ, ಬರೆದು ಓದುವರಿಂದ, ಶ್ರೇಯಸ್ಸನ್ನು ಕೊಡುವಂತಹದು.*
*"ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ,ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು".*
*"ಸಮಗ್ರಭೂಮಿ,ಗಂಗಾನದಿ ,ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯವು ಬರುವದು.*
*ಬಹು ಪುಣ್ಯ ಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆ ಯನ್ನು ನಿನಗೆ ಹೇಳಿದ್ದೇನೆ."*
*ಇದಕ್ಕೆ ಸಂದೇಹ ವಿಲ್ಲ..* *ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು"* ಎಂದು ಹೇಳಿದರು.
*ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿದಿದು.*.
ಇದನ್ನು ಕೇಳಿ ಸಂತುಷ್ಟನಾದ *ಜನಕರಾಜನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು* ಕೇಳುತ್ತಾನೆ.
ನಾಳೆ ಅದರ ಬಗ್ಗೆ ತಿಳಿಸುವ ಪ್ರಯತ್ನ.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
 *ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|*
*ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವಾ||*
🙏ಹರೇ ಶ್ರೀನಿವಾಸ🙏

Post a Comment

Previous Post Next Post