vijayavitthala blr: *ಶ್ರೀನಿವಾಸ ಕಲ್ಯಾಣ ಚರಿತ್ರೆ*day 2,3

[27/09, 5:34 AM] vijayavitthala blr: *ಶ್ರೀನಿವಾಸ ಕಲ್ಯಾಣ ಚರಿತ್ರೆ*day 2
*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*.
✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ 
*ಶ್ರೀ ವೆಂಕಟಗಿರಿಯ ಮಹಾತ್ಮೆ ಶ್ರವಣ ಮಾಡುವದರಿಂದ  ಅವನ ದುಃಖ,ಕಷ್ಟ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.*
ಅದಕ್ಕೆ ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
*ಕೃತಯುಗದಲ್ಲಿವೃಷಭಾಚಲ*
*ತ್ರೇತಾಯುಗದಲ್ಲಿ ಅಂಜನಾಚಲ,*
*ದ್ವಾಪರಯುಗದಲ್ಲಿ ಶೇಷಾಚಲ*,
*ಕಲಿಯುಗದಲ್ಲಿ*
*ವೆಂಕಟಾಚಲವೆಂದು,* ಹೇಳುತ್ತಾರೆ.
ಅದಕ್ಕೆ ಜನಕನು 
*ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು* ಕೇಳಿದಾಗ
ಅದಕ್ಕೆ ಶತಾನಂದರು
*ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸ ನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು*.
ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
*ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ಶ್ರೀನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.ಈ ರೀತಿಯಲ್ಲಿ 5 ಸಹಸ್ರ ವರ್ಷಗಳ ಕಾಲ ಪೂಜೆ ಯನ್ನು ಮಾಡಿದನು.*.
*ಸರಿಯಾಗಿ 5 ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ  ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ.*.
*ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.*
ನಂತರ ಎಚ್ಚರವಾದ ಮೇಲೆ  ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
*ಹೇ ನಾರಾಯಣ!! ನೀನು ದೋಷ ರಹಿತನು, ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.*
*ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.*
*ಭಗವಂತನು ತಥಾಸ್ತು! ಅಂತ* ಹೇಳಿ ಅವನ
 ಜೊತೆಯಲ್ಲಿ  ಯುದ್ಧ ವನ್ನು ಮಾಡುತ್ತಾನೆ. 
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
*ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ* ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ 
*ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ.*.
*ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ.*.
*ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.*. *ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು.* ಅಂತ ಹೇಳುತ್ತಾರೆ.
*(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ*
*ಪತ್ನಿಯಾದ ಅಂಜನಾ* *ದೇವಿಯು ಪುತ್ರ ಸಂತಾನಕ್ಕಾಗಿ  ಮತಂಗ ಮುನಿಗಳ ಆದೇಶದಂತೆ*  *ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥ ಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ   ಆಚರಿಸಿ  ವಾಯುದೇವರ  ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು.*.
*ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.*
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|*
*ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|*
🙏ಶ್ರೀವೆಂಕಟೇಶಾಯ ನಮಃ🙏
[27/09, 5:34 AM] vijayavitthala blr: *ಶ್ರೀನಿವಾಸ ಕಲ್ಯಾಣ ಚರಿತ್ರೆ*day 2
*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*.
✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ 
*ಶ್ರೀ ವೆಂಕಟಗಿರಿಯ ಮಹಾತ್ಮೆ ಶ್ರವಣ ಮಾಡುವದರಿಂದ  ಅವನ ದುಃಖ,ಕಷ್ಟ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.*
ಅದಕ್ಕೆ ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
*ಕೃತಯುಗದಲ್ಲಿವೃಷಭಾಚಲ*
*ತ್ರೇತಾಯುಗದಲ್ಲಿ ಅಂಜನಾಚಲ,*
*ದ್ವಾಪರಯುಗದಲ್ಲಿ ಶೇಷಾಚಲ*,
*ಕಲಿಯುಗದಲ್ಲಿ*
*ವೆಂಕಟಾಚಲವೆಂದು,* ಹೇಳುತ್ತಾರೆ.
ಅದಕ್ಕೆ ಜನಕನು 
*ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು* ಕೇಳಿದಾಗ
ಅದಕ್ಕೆ ಶತಾನಂದರು
*ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸ ನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು*.
ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
*ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ಶ್ರೀನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.ಈ ರೀತಿಯಲ್ಲಿ 5 ಸಹಸ್ರ ವರ್ಷಗಳ ಕಾಲ ಪೂಜೆ ಯನ್ನು ಮಾಡಿದನು.*.
*ಸರಿಯಾಗಿ 5 ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ  ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ.*.
*ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.*
ನಂತರ ಎಚ್ಚರವಾದ ಮೇಲೆ  ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
*ಹೇ ನಾರಾಯಣ!! ನೀನು ದೋಷ ರಹಿತನು, ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.*
*ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.*
*ಭಗವಂತನು ತಥಾಸ್ತು! ಅಂತ* ಹೇಳಿ ಅವನ
 ಜೊತೆಯಲ್ಲಿ  ಯುದ್ಧ ವನ್ನು ಮಾಡುತ್ತಾನೆ. 
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
*ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ* ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ 
*ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ.*.
*ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ.*.
*ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.*. *ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು.* ಅಂತ ಹೇಳುತ್ತಾರೆ.
*(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ*
*ಪತ್ನಿಯಾದ ಅಂಜನಾ* *ದೇವಿಯು ಪುತ್ರ ಸಂತಾನಕ್ಕಾಗಿ  ಮತಂಗ ಮುನಿಗಳ ಆದೇಶದಂತೆ*  *ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥ ಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ   ಆಚರಿಸಿ  ವಾಯುದೇವರ  ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು.*.
*ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.*
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|*
*ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|*
🙏ಶ್ರೀವೆಂಕಟೇಶಾಯ ನಮಃ🙏
[28/09, 7:01 PM] vijayavitthala blr: *|ಶ್ರೀನಿವಾಸ ಕಲ್ಯಾಣ ಚರಿತ್ರೆ*||day #3
*||ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ*
✍️ನಿನ್ನೆಯ ದಿನ  *ಶ್ರೀ ವೆಂಕಟಗಿರಿಗೆ ಕೃತಯುಗದಲ್ಲಿ  ವೃಷಭಾಚಲ ಮತ್ತು ತ್ರೇತಾಯುಗದಲ್ಲಿ ಅಂಜನಾಚಲ* ಹೆಸರು ಹೇಗೆ ಬಂದಿದೆ ಅನ್ನುವ ಬಗ್ಗೆ ತಿಳಿದುಕೊಂಡೆವು.
ಮುಂದೆ
*ದ್ವಾಪರ ಯುಗದಲ್ಲಿ ಶೇಷಾಚಲ ಎನ್ನುವ ಹೆಸರು* ಬಂದ ಬಗ್ಗೆ ಮಾಹಿತಿ.
*೩)ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠ ದಲ್ಲಿ ಏಕಾಂತದಲ್ಲಿ ಇದ್ದನು.*
ಅಂತಃ ಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು.
*ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆ ಯಂತೆ ಕಾಯುತ್ತಿದ್ದರು.*.
ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ.
*ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ. ತಡೆಯಬೇಡ!!* ಅಂತ ವಾಯುದೇವರು ಹೇಳಿದರು ಸಹ,
*ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು* ಅಂತ ಹೇಳುತ್ತಾರೆ.
ಅದಕ್ಕೆ ವಾಯುದೇವರು 
*ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆ ಯನ್ನು ನೆನಪು ಮಾಡಿಕೊಡುತ್ತಾರೆ.*.
ಆದರು ಸಹ ಶೇಷದೇವನು ಕೋಪದಿಂದ  
*ಸಕಲ ಜೀವ ನಿಯಾಮಕರಾದ ಮುಖ್ಯ ಪ್ರಾಣದೇವರನ್ನು ನಿಂದಿಸುತ್ತಾ*
*ಎಲೈ !!ವಾಯುದೇವ !!ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ?ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು??*
*ಕೇಳು! ನನ್ನ ಶಕ್ತಿ ಸಾಮರ್ಥ್ಯ ದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರು ಇಲ್ಲ .ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು*.ಅಂತ
ತನ್ನ ಬಗ್ಗೆ ತಾನೇ ಸ್ವಪ್ರಶಂಶೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ.
*ಹೇ ಶೇಷದೇವನೇ! ಅರಮನೆಯಲ್ಲಿ ಇರುವ  ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ  ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ??* 
*ಮಹಾರಾಜನ ಸೇವೆಗೆ ಇರುವ ಸೇವಕನು  ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ??..*
*ಅದು ಅವನ ದೊಡ್ಡಸ್ತಿಕೆಯೆ ??*
*ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??.*
*ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು* ಅಂತ ವಾಯುದೇವರು ಉಪದೇಶ ಮಾಡುತ್ತಾರೆ.
*ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು*.
ಆವಾಗ ಶ್ರೀಹರಿಯು ಹೊರಗಡೆ ಬಂದು  
*ಶೇಷ !!ಏಕಿಂತು ಕೂಗಾಡುತ್ತಿರುವೆ!!ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ??* ಎಂದು ಪ್ರಶ್ನಿಸಲು
ಅದಕ್ಕೆ ಶೇಷದೇವನು 
*ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು,ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ.ಅದಕ್ಕಾಗಿ ಈ ಕಲಹ* ಎಂದು ಹೇಳುತ್ತಾನೆ..
*ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು.*.
ಭಗವಂತನು ಮುಖ್ಯ ಪ್ರಾಣನನ್ನು ಕಂಡು *ಕುಮಾರ!! ಪವಮಾನ!!*
*ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ??ಎಂದು ಮಧುರವಾಣಿ ಇಂದ ನುಡಿದನು*.
ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು.
*ಅಹಂಕಾರದಿಂದ ತಾನು ಮಹಾನ್ ಶಕ್ತಿ ಶಾಲಿ.ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ* ಎಂದು ಹೇಳುವನು.
ಅದಕ್ಕೆ ಭಗವಂತನು 
*ಶೇಷ !!ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ.*.
*ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು.*.
*ಆದ್ದರಿಂದ ನಿಮ್ಮಿಬ್ಬರಿಗೂ ಒಂದು ಪರೀಕ್ಷೆ ಇಡುವೆನು.*.
*ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ಟ ವಿದೆ.ನೀನು ನಿನ್ನ ದೇಹವೆಂಬ ಹಗ್ಗದಿಂದ ಅದನ್ನು  ಬಿಗಿಯಾಗಿ ಸುತ್ತುವರೆದು ಕುಳಿತಿಕೊ.ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ.ಅದರಿಂದ ಯಾರು ಶ್ರೇಷ್ಠ ರು ಅಂತ ತಿಳಿಯುತ್ತದೆ* ಅಂತ ಆಜ್ಞೆ ಮಾಡಿದನು.
ಅದರಂತೆ 
*ಶೇಷದೇವನು ತಾನೇ ಶಕ್ತಿ ಶಾಲಿ.ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು.*.
ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯ ವನ್ನು ನೋಡಲು ನಿಂತರು.
*ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ.*.
ಏನಾಶ್ಚರ್ಯ!!
*ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರ ದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ  ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು.*
ತನ್ನ ಪುತ್ರ ನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು 
*ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು  ಶೇಷದೇವರ ಸಹಿತವಾಗಿ  ನದಿಯ ದಡದ ಮೇಲೆ ಇರಿಸಿದರು.*.
*ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ*. ನಿರ್ಣಯ ಮಾಡುತ್ತಾರೆ.
*ಶೇಷದೇವರ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು* ಹೋಗಿ 
*ಜಗತ್ಪ್ರಾಣನಾದ,*
*ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ* ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ 
*ನಾನು ಮಾಡಿದ ನಿಂದಾರೂಪ,ಕಾರ್ಯವನ್ನು ಕ್ಷಮಿಸಿ🙏*ಅಂತ ಪ್ರಾರ್ಥನೆ ಮಾಡುತ್ತಾರೆ.
*ಶ್ರೀವಾಯುದೇವರು ಪರಮಕರುಣಾಳುಗಳು,ಯಾರಲ್ಲಿಯು ದ್ವೇಷವಿಲ್ಲದವರು,  ಶೇಷದೇವನ ಅಪರಾಧವನ್ನು ಕ್ಷಮಿಸಿ,* ಅನುಗ್ರಹ ಮಾಡಿ
*"ಶೇಷದೇವನೇ ! ಇದೆಲ್ಲಾ  ಶ್ರೀಹರಿಯ ಇಚ್ಚೆಯ ಪ್ರಕಾರ ನಡೆದಿದೆ.ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು.ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತ ವಾಗುವದು ಅಂತ ಹೇಳಿ"* ಅವರನ್ನು ಆನಂದಗೊಳಿಸಿದರು.
*ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು*.ಎಂದು ಶತಾನಂದರು ಜನಕರಿಗೆ ಹೇಳಿದರು.
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|*
*ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|*
🙏ಶ್ರೀನಿವಾಸಾಯ ನಮಃ🙏
[28/09, 7:12 PM] vijayavitthala blr: *|ಶ್ರೀನಿವಾಸ ಕಲ್ಯಾಣ ಚರಿತ್ರೆ*||day #3
*||ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ*
✍️ನಿನ್ನೆಯ ದಿನ  *ಶ್ರೀ ವೆಂಕಟಗಿರಿಗೆ ಕೃತಯುಗದಲ್ಲಿ  ವೃಷಭಾಚಲ ಮತ್ತು ತ್ರೇತಾಯುಗದಲ್ಲಿ ಅಂಜನಾಚಲ* ಹೆಸರು ಹೇಗೆ ಬಂದಿದೆ ಅನ್ನುವ ಬಗ್ಗೆ ತಿಳಿದುಕೊಂಡೆವು.
ಮುಂದೆ
*ದ್ವಾಪರ ಯುಗದಲ್ಲಿ ಶೇಷಾಚಲ ಎನ್ನುವ ಹೆಸರು* ಬಂದ ಬಗ್ಗೆ ಮಾಹಿತಿ.
*೩)ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠ ದಲ್ಲಿ ಏಕಾಂತದಲ್ಲಿ ಇದ್ದನು.*
ಅಂತಃ ಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು.
*ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆ ಯಂತೆ ಕಾಯುತ್ತಿದ್ದರು.*.
ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ.
*ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ. ತಡೆಯಬೇಡ!!* ಅಂತ ವಾಯುದೇವರು ಹೇಳಿದರು ಸಹ,
*ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು* ಅಂತ ಹೇಳುತ್ತಾರೆ.
ಅದಕ್ಕೆ ವಾಯುದೇವರು 
*ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆ ಯನ್ನು ನೆನಪು ಮಾಡಿಕೊಡುತ್ತಾರೆ.*.
ಆದರು ಸಹ ಶೇಷದೇವನು ಕೋಪದಿಂದ  
*ಸಕಲ ಜೀವ ನಿಯಾಮಕರಾದ ಮುಖ್ಯ ಪ್ರಾಣದೇವರನ್ನು ನಿಂದಿಸುತ್ತಾ*
*ಎಲೈ !!ವಾಯುದೇವ !!ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ?ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು??*
*ಕೇಳು! ನನ್ನ ಶಕ್ತಿ ಸಾಮರ್ಥ್ಯ ದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರು ಇಲ್ಲ .ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು*.ಅಂತ
ತನ್ನ ಬಗ್ಗೆ ತಾನೇ ಸ್ವಪ್ರಶಂಶೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ.
*ಹೇ ಶೇಷದೇವನೇ! ಅರಮನೆಯಲ್ಲಿ ಇರುವ  ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ  ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ??* 
*ಮಹಾರಾಜನ ಸೇವೆಗೆ ಇರುವ ಸೇವಕನು  ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ??..*
*ಅದು ಅವನ ದೊಡ್ಡಸ್ತಿಕೆಯೆ ??*
*ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??.*
*ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು* ಅಂತ ವಾಯುದೇವರು ಉಪದೇಶ ಮಾಡುತ್ತಾರೆ.
*ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು*.
ಆವಾಗ ಶ್ರೀಹರಿಯು ಹೊರಗಡೆ ಬಂದು  
*ಶೇಷ !!ಏಕಿಂತು ಕೂಗಾಡುತ್ತಿರುವೆ!!ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ??* ಎಂದು ಪ್ರಶ್ನಿಸಲು
ಅದಕ್ಕೆ ಶೇಷದೇವನು 
*ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು,ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ.ಅದಕ್ಕಾಗಿ ಈ ಕಲಹ* ಎಂದು ಹೇಳುತ್ತಾನೆ..
*ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು.*.
ಭಗವಂತನು ಮುಖ್ಯ ಪ್ರಾಣನನ್ನು ಕಂಡು *ಕುಮಾರ!! ಪವಮಾನ!!*
*ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ??ಎಂದು ಮಧುರವಾಣಿ ಇಂದ ನುಡಿದನು*.
ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು.
*ಅಹಂಕಾರದಿಂದ ತಾನು ಮಹಾನ್ ಶಕ್ತಿ ಶಾಲಿ.ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ* ಎಂದು ಹೇಳುವನು.
ಅದಕ್ಕೆ ಭಗವಂತನು 
*ಶೇಷ !!ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ.*.
*ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು.*.
*ಆದ್ದರಿಂದ ನಿಮ್ಮಿಬ್ಬರಿಗೂ ಒಂದು ಪರೀಕ್ಷೆ ಇಡುವೆನು.*.
*ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ಟ ವಿದೆ.ನೀನು ನಿನ್ನ ದೇಹವೆಂಬ ಹಗ್ಗದಿಂದ ಅದನ್ನು  ಬಿಗಿಯಾಗಿ ಸುತ್ತುವರೆದು ಕುಳಿತಿಕೊ.ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ.ಅದರಿಂದ ಯಾರು ಶ್ರೇಷ್ಠ ರು ಅಂತ ತಿಳಿಯುತ್ತದೆ* ಅಂತ ಆಜ್ಞೆ ಮಾಡಿದನು.
ಅದರಂತೆ 
*ಶೇಷದೇವನು ತಾನೇ ಶಕ್ತಿ ಶಾಲಿ.ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು.*.
ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯ ವನ್ನು ನೋಡಲು ನಿಂತರು.
*ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ.*.
ಏನಾಶ್ಚರ್ಯ!!
*ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರ ದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ  ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು.*
ತನ್ನ ಪುತ್ರ ನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು 
*ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು  ಶೇಷದೇವರ ಸಹಿತವಾಗಿ  ನದಿಯ ದಡದ ಮೇಲೆ ಇರಿಸಿದರು.*.
*ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ*. ನಿರ್ಣಯ ಮಾಡುತ್ತಾರೆ.
*ಶೇಷದೇವರ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು* ಹೋಗಿ 
*ಜಗತ್ಪ್ರಾಣನಾದ,*
*ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ* ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ 
*ನಾನು ಮಾಡಿದ ನಿಂದಾರೂಪ,ಕಾರ್ಯವನ್ನು ಕ್ಷಮಿಸಿ🙏*ಅಂತ ಪ್ರಾರ್ಥನೆ ಮಾಡುತ್ತಾರೆ.
*ಶ್ರೀವಾಯುದೇವರು ಪರಮಕರುಣಾಳುಗಳು,ಯಾರಲ್ಲಿಯು ದ್ವೇಷವಿಲ್ಲದವರು,  ಶೇಷದೇವನ ಅಪರಾಧವನ್ನು ಕ್ಷಮಿಸಿ,* ಅನುಗ್ರಹ ಮಾಡಿ
*"ಶೇಷದೇವನೇ ! ಇದೆಲ್ಲಾ  ಶ್ರೀಹರಿಯ ಇಚ್ಚೆಯ ಪ್ರಕಾರ ನಡೆದಿದೆ.ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು.ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತ ವಾಗುವದು ಅಂತ ಹೇಳಿ"* ಅವರನ್ನು ಆನಂದಗೊಳಿಸಿದರು.
*ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು*.ಎಂದು ಶತಾನಂದರು ಜನಕರಿಗೆ ಹೇಳಿದರು.
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|*
*ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|*
🙏ಶ್ರೀನಿವಾಸಾಯ ನಮಃ🙏

Post a Comment

Previous Post Next Post