ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್! ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು ಉಲ್ಲೇಖ?


     » 
  • Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್! ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು ಉಲ್ಲೇಖ?

Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್! ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು ಉಲ್ಲೇಖ?

ಮೃತ ವ್ಯಕ್ತಿಯ ಬಳಿ ಡೆತ್​​ನೋಟ್​ ಪತ್ತೆಯಾಗಿದೆ. ಈ ನೋಟ್​​​ನಲ್ಲಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ ಒಟ್ಟು ಆರು ಮಂದಿ ಹೆಸರು, ಫೋನ್​ ನಂಬರ್ ಸಮೇತ ಬರೆದಿಟ್ಟಿದ್ದಾರೆ ಎನ್ನಲಾಗಿದೆ.


ಬೆಂಗಳೂರು: ಮಾಜಿ ಸಚಿವ, ಮಹದೇವಪುರ (Mahadevapura) ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಅವರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಗ್ಗಲಿಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ (Kaggalipura Police Station) ನಡೆದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರಿನ ಹೆಚ್​​ಎಸ್​ಆರ್​ ಲೇಔಟ್ (HSR Layout)​​ ನಿವಾಸಿ ಪ್ರದೀಪ್​ (47) ಎಂದು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ (Nettigere) ಬಳಿ ಘಟನೆ ನಡೆದಿದ್ದು, ಕಾರಿನಲ್ಲೇ ಕುಳಿತು ತಲೆಗೆ ಗನ್​ನಿಂದ ಶೂಟ್​ ಮಾಡಿಕೊಂಡು ಪ್ರದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವ್ಯಕ್ತಿಯ ಬಳಿ ಡೆತ್​​ನೋಟ್​ (Death Note) ಪತ್ತೆಯಾಗಿದೆ. ಪತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ ಒಟ್ಟು ಆರು ಮಂದಿ ಹೆಸರು, ಫೋನ್​ ನಂಬರ್ ಸಮೇತ ಬರೆದಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Bengaluru man dies by suicide arvind limbavali name in death note sns
ಡೆತ್​​ನೋಟ್​


ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಜಯರಾಮ್​ ರೆಡ್ಡಿ, ರಾಘವ ಭಟ್​, ಕೆ.ಗೋಪಿ, ಸೋಮಯ್ಯ ಸೇರಿದಂತೆ ಆರು ಮಂದಿ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಈ ಆರು ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಬರೆದಿಟ್ಟಿದ್ದಾರಂತೆ.  ಹಣಕಾಸಿನ ವ್ಯವಹಾರದಲ್ಲಿ ವಂಚನೆ ಹಿನ್ನೆಲೆಯಲ್ಲಿ ಪ್ರದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರಂತೆ. ವಂಚನೆಯಲ್ಲಿ ಅರವಿಂದ ಲಿಂಬಾವಲಿ ಅವರು ಕೆ ಗೋಪಿ, ಸೋಮಯ್ಯಗೆ ಬೆಂಬಲ ನೀಡಿದ್ದರಂತೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Aravind Limbavali: ಶಾಸಕ ಲಿಂಬಾವಳಿಯಿಂದ ನಿಂದನೆ; ನ್ಯೂಸ್ 18 ಜೊತೆ ಮಹಿಳೆ ಮಾತು; FIR ದಾಖಲು


ಕುಟುಂಬಸ್ಥರ ಬಳಿ ಕ್ಷಮೆ ಕೋರಿದ ಮೃತ ಪ್ರದೀಪ್


ಇನ್ನು, ಮೃತ ಪ್ರದೀಪ್​ ಬರೆದಿದ್ದಾರೆ ಎನ್ನಲಾದ 8 ಪುಟಗಳ ಡೆತ್​ನೋಟ್​ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ. ಪತ್ರದಲ್ಲಿ ಕುಟುಂಬಸ್ಥರಿಗೆ ಕ್ಷಮೆ ಕೇಳಿರುವ ಪ್ರದೀಪ್, ಒಳ್ಳೆಯ ಗಂಡನಾಗಲು ಸಾಧ್ಯವಾಗಲಿಲ್ಲ. ಒಳ್ಳೆಯ ತಂದೆಯೂ ಆಗಲಿಲ್ಲ. ತಂದೆ-ತಾಯಿಗೆ ಒಳ್ಳೆಯ ಮಗನೂ ಆಗಲಿಲ್ಲ. ನನ್ನ ಸಹೋದರನಿಗೂ ಸಾರಿ ಹೇಳುತ್ತಿದ್ದು, ಆತನಿಗೂ ಒಳ್ಳೆಯ ಸಹೋದರನಾಗಲಿಲ್ಲ ಎಂದು ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ.


ಮಧ್ಯಸ್ಥಿಕೆ ವಹಿಸಿ, ವಂಚಕರಿಗೆ ಬೆಂಬಲ ನೀಡಿದ್ದರಂತೆ ಲಿಂಬಾವಳಿ


ಅಂದಹಾಗೇ, ಮೃತ ಪ್ರದೀಪ್​ ಪಬ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಹಾಕಿದ್ದ ಹುಡಿಕೆ ಮಾಡಿದ್ದನಂತೆ. ಐವರು ಸ್ನೇಹಿತರ ಜೊತೆ ಸೇರಿ ಪಬ್ ನಿರ್ಮಾಣಕ್ಕೆ ಹಣ ಹಾಕಿದ್ದು, ಆದರೆ ಆ ಬಳಿಕ ಐವರು ಸ್ನೇಹಿತರು ಮೋಸ ಮಾಡಿದ್ದರಂತೆ. ಮೊದಲು ತಿಂಗಳಿಗೆ ಮೂರು ಲಕ್ಷ ರೂಪಾಯಿಯಂತೆ ನೀಡಿರುವ ಹಣವನ್ನು ವಾಪಸ್ ಕೊಡುವುದಾಗಿ ಮಾತುಕೊಟ್ಟಿದ್ದರಂತೆ. ಆದರೆ ಆ ಬಳಿಕ ಹಣ ನೀಡದೆ ವಂಚನೆ ಮಾಡಿದ್ದಾರೆ. ಈ ಸಂಬಂಧ ಅರವಿಂದ ಲಿಂಬಾವಳಿ ಮಧ್ಯಸ್ಥಿಕೆ ವಹಿಸಿದ್ದರಂತೆ. ಕೆಲವು ತಿಂಗಳು ಕಾಲಾವಕಾಶ ಪಡೆದು 10 ಲಕ್ಷ ರೂಪಾಯಿ ಹಣವನ್ನು ಪ್ರತಿ ತಿಂಗಳು ನೀಡಲು ಸೂಚನೆ ನೀಡಿದ್ದರಂತೆ.


ಇದನ್ನೂ ಓದಿ: Aravind Limbavali: ಏ ಸುಮ್ನೆ ಇರು, ಬೇರೆ ಭಾಷೆ ಬರುತ್ತೆ, ನಾಚಿಕೆ ಆಗಲ್ವಾ ನಿಂಗೆ, ಒದ್ದು ಒಳಗೆ ಹಾಕಿ: ಮನವಿ ನೀಡಲು ಬಂದ ಮಹಿಳೆ ಮೇಲೆ ಲಿಂಬಾವಳಿ ದರ್ಪ


ಆದರೆ ಕೇವಲ ಒಂದು ತಿಂಗಳು ಹಣ ಪಾವತಿಸಿದ್ದ ಸ್ನೇಹಿತರು ಆ ಬಳಿಕ ಹಣ ನೀಡದೆ ಮತ್ತೆ ಮಾತು ತಪ್ಪಿದ್ದರಂತೆ. ಪ್ರದೀಪ್​ಗೆ ಮೋಸ ಮಾಡಿದ ಸ್ನೇಹಿತರಿಗೆ ಅರವಿಂದ ನಿಂಬಾವಳಿ ಸಹಕಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಅರವಿಂದ ಲಿಂಬಾವಳಿ ಅವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ನನ್ನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಂಡಿದ್ದು, ಅವರಿಂದ ನಾನು ಮೋಸ ಹೋದ ಹಣವನ್ನು ನನ್ನ ಹೆಂಡತಿಗೆ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Post a Comment

Previous Post Next Post