ಗಳೂರು : ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಕರ್ನಾಟಕ ಲೋಕಾಯುಕ್ತದ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.


ಲೋಕಾಯುಕ್ತ ಕಾಯ್ದೆ 1984 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರಡಿ ಪ್ರಾಧಿಕರಿಸಲ್ಪಟ್ಟ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಚರಾಸ್ತಿ/ಸ್ಮಿರಾಸ್ತಿಗಳ ಮಾಹಿತಿ ಹಾಗೂ ವಿವರಗಳನ್ನು ಕೋರಿದ ಸಂದರ್ಭದಲ್ಲಿ ಅವುಗಳನ್ನು ಕೆಲವು ಇಲಾಖಾ ಅಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳು ಒದಗಿಸದಿರುವ ಬಗ್ಗೆ ಉಲ್ಲೇಖ (1) ರ ಅರ ಸರ್ಕಾರದ ಪತ್ರದಲ್ಲಿ ನಿಬಂಧಕರು ಕರ್ನಾಟಕ ಲೋಕಾಯುಕ್ತ ಇವರು ಸರ್ಕಾರದ ಗಮನ ಸೆಳೆದಿದ್ದು, ಇಂತಹ ಮಾಹಿತಿಯನ್ನು (ಅವುಗಳ ಅರಸಿಕೆಗೆ (access) ಕೆಲವು ಸುರಕ್ಷತೆ ಮತ್ತು ಇತಿಮಿತಿಗಳನ್ನು ನಿಗದಿಪಡಿಸುವುದಕ್ಕೆ ಒಳಪಟ್ಟು) ಜಾಲತಾಣದಲ್ಲಿ ರ್ಪಕಟಿಸಿದಲ್ಲಿ (web host) ಅದು ಲೋಕಾಯುಕ್ತ ಸಂಸ್ಥೆಗೂ ಲಭ್ಯವಾಗುತ್ತದೆಯೆಂದು ಅಭಿಪ್ರಾಯ ಪಡುತ್ತಾ, ಇಂತಹ ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಪಡಿಸುವ ಸಂಬಂಧ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಿರುತ್ತಾರೆ.

Post a Comment

Previous Post Next Post