ಸಮಾಜದಲ್ಲಿರುವ ಎಲ್ಲಾ ಜಾತಿಗಳು ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕಾಗಿದೆ; ಸಿದ್ದರಾಮಯ್ಯ

ಸಮಾಜದಲ್ಲಿರುವ  ಎಲ್ಲಾ ಜಾತಿಗಳು ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕಾಗಿದೆ; ಸಿದ್ದರಾಮಯ್ಯ 
ಮೈಸೂರು: ಸಮಾಜದಲ್ಲಿರುವ  ಎಲ್ಲಾ ಜಾತಿಗಳು ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕಾಗಿದೆ ಎಂದು ವಿಪಕ್ಷನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
ಸ್ವಾತಂತ್ರ÷್ಯದ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, 
ಬಸವಣ್ಣನವರ ಅನುಭವ ಮಂಟಪದ ಕಲ್ಪನೆ ಅದ್ಭುತವಾಗಿದ್ದು, 12ನೇ ಶತಮಾನದಲ್ಲಿ ಜಾತಿ ವಿರುದ್ಧ ಕ್ರಾಂತಿ ಮಾಡಿದರು, ಆದರೆ ಇವತ್ತಿಗೂ ಜಾತಿ ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
ಬಸವಾದಿ ಶರಣರು ಬಂದು ಹೋಗಿ 900 ವರ್ಷಗಳಾದರೂ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ. ಕಾಯಕ ಮಾಡುವ ನಾವೆಲ್ಲಾ ಶೂದ್ರರು. ದೇಶಕ್ಕೆ ಸ್ವಾತಂತ್ರ÷್ಯ ಸಿಗುವ ಮುಂಚೆ ನಾವು ಉತ್ಪಾದನೆ ಮಾಡಿದ ವಸ್ತುವನ್ನು ನಾವು ಅನುಭವಿಸುತ್ತಿರಲಿಲ್ಲ. ಬ್ರಾಹ್ಮಣರು, ಕ್ಷತ್ರಿಯರು ಅನುಭವಿಸುತ್ತಿದ್ದರು. ಮೂರ್ತಿ ಪ್ರತಿಷ್ಠಾಪನೆ ಆದ ಮೇಲೆ ವಿಶ್ವಕರ್ಮರನ್ನು ಹೊರಗಡೆ ಇಟ್ಟರು. ಪೂಜೆ ಮಾಡುವವರು ಮಾತ್ರ ಒಳಗಡೆ ಇರಬೇಕಿದೆ ಎಂದರು.
ಬೋವಿ ಸಮಾಜದವರು ಕಲ್ಲು ಒಡೆದು ಗೋಡೆ ಕಟ್ಟುತ್ತಾರೆ. ಆದರೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶವಿಲ್ಲ. ದಲಿತರು ದೇವಸ್ಥಾನ ಒಳಗಡೆಯೇ ಹೋಗುವಂತಿರಲಿಲ್ಲ. ಇದು ಚಾತುರ್ವರ್ಣ ಪದ್ಧತಿಯಿಂದ ಸೃಷ್ಟಿಯಾದ ವ್ಯವಸ್ಥೆಯಾಗಿದೆ. 
ಯಾರೇ ಮಾಟಮಂತ್ರ ಮಾಡಿದರೂ ನನಗೆ ರೋಗ ಬರಲ್ಲ. ರೋಗ ಬಂದಾಗ ಯಾರ ರಕ್ತವಾದರೂ ಕೊಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಕೇಳಿ ಕೊಳ್ಳುತ್ತೇವೆ. ರಕ್ತ ಅವಶ್ಯಕತೆ ಇದ್ದಾಗ ಇರದ ಜಾತಿ ಬೇರೆ ಕಡೆ ಯಾಕೆ ಬೇಕು ಹೇಳಿ? ಎಂದು ಪ್ರಶ್ನಿಸಿದರಲ್ಲದೆ, ಸಮಾಜದ ಪ್ರತಿಯೊಬ್ಬರಲ್ಲೂ ಮಾನವೀಯತೆ ಬೆಳೆಯಬೇಕು ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ಮುಖಂಡರಾದ ಮರಿಗೌಡ, ಹರೀಶ್ ಗೌಡ ಹಾಜರಿದ್ದರು.

Post a Comment

Previous Post Next Post